(www.vknews.com) : ಕೋವಿಡ್ ಎರಡನೇ ಅಲೆಯಲ್ಲಿ ಸಂಕಷ್ಠಕ್ಕೀಡಾದ ದೆಹಲಿಯ ಕನ್ನಡಿಗರ ಸಹಿತ ಅನೇಕಜನರಿಗೆ ಆಂಬ್ಲುಲೆನ್ಸ್, ಆಕ್ಸಿಜನ್. ಪಿ ಪಿ.ಇ. ಕಿಟ್, ಔಷಧಿಗಳ ಸಹಾಯ ಹಸ್ತವನ್ನು ನೀಡುತ್ತಿದ್ದ ರಾಷ್ಟ್ರೀಯ ಯುವ ಕಾಂಗ್ರೇಸ್ ಅಧ್ಯಕ್ಷ ಬಿ. ಶ್ರೀನಿವಾಸ್ ಅವರನ್ನು ದೆಹಲಿಯ ಕ್ರೈಂ ಬ್ರಾಂಚ್ ಪೋಲಿಸರು ವಿಚಾರಣೆ ನಡೆಸಿದ ಕ್ರಮವನ್ನು ಕೆಪಿಸಿಸಿ ಯ ಮಾಜಿ ಕಾರ್ಯದರ್ಶಿ ಟಿ.ಎಂ.ಶಾಹೀದ್ ತೆಕ್ಕಿಲ್ ಖಂಡಿಸಿದ್ದಾರೆ.
ಕೋವಿಡ್ ಅಲೆಯಲ್ಲಿ ನರಳುತ್ತಿರುವ ಜನರಿಗೆ ಆಂಬ್ಲುಲೆನ್ಸ್, ಆಕ್ಸಿಜನ್, ಹಾಗೂ ಲಸಿಕೆಯನ್ನು ನೀಡಲು ಕೇಂದ್ರ ಸರಕಾರ ಸಂಪೂರ್ಣ ವಿಫಲವಾಗಿದನ್ನು ಮರೆಮಾಚಲು ಕೇಂದ್ರ ಸರಕಾರ ಪೋಲಿಸರನ್ನು ಕಳುಹಿಸಿ ಮಾಡಿದ ಷಡ್ಯಂತರವಾಗಿದೆ. ಈ ರೀತಿಯ ನೀಚ ಪ್ರವರ್ತಿಗೆ ಕೇಂದ್ರ ಸರಕಾರ ಮುಂದಾಗಿದ್ದು ನಾಚಿಕೆಗೇಡು ಎಂದು ಟಿ.ಎಂ.ಶಾಹೀದ್ ಟೀಕಿಸಿದರು.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.