ಪುತ್ತೂರು (www.vknews.com) : ತಾಲೂಕಿನ ಇರ್ದೆ- ಬೆಟ್ಟಂಪಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ದೂಮಡ್ಕ ಎಂಬಲ್ಲಿ ಇರುವ ಶಶಿಕಲ ಪೂಜಾರಿ ಎಂಬುವರ ಮನೆಯ ಮೇಲ್ಛಾವಣಿ ಅವಸ್ಥೆ ಬೀಳುವ ಸ್ಥಿತಿ ಇತ್ತು ಅದನ್ನು ಮನಗಂಡು ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣದ ಜಿಲ್ಲಾ ಅಧ್ಯಕ್ಷರು ಹಾಗೂ ಉದ್ಯಮಿ ಮಹಮ್ಮದ್ ಹಾಜಿ ಕುಕ್ಕುವಳ್ಳಿ ಅವರ ನೇತೃತ್ವದ ತಂಡ ಒಂದು ವಾರದ ಮುಂಚೆ ಅಲ್ಲಿಗೆ ಭೇಟಿ ಕೊಟ್ಟು ಪರಿಶೀಲಿಸಿ ಅವರಿಗೆ ಮನೆಯ ಮೇಲ್ಛಾವಣಿ ನಿರ್ಮಾಣ ಮಾಡಿ ಕೊಡುವ ಭರವಸೆ ನೀಡಿದರು.
ಅವರು ಅದನ್ನು ಇಂದು ರಂಝಾನ್ ಹಬ್ಬ ಇದ್ದರು ಕೂಡ ಅದನ್ನು ಆಚರಿಸದೇ ನೇರವಾಗಿ ದೂಮಡ್ಕ ಶಶಿಕಲ ಪೂಜಾರಿ ಅವರ ಮನೆಯ ಮೇಲ್ಛಾವಣಿ ನಿರ್ಮಿಸಿ ಕೊಟ್ಟು ಅವರ ಕಷ್ಟ ಕಾಲಕ್ಕೆ ಬೆನ್ನಲುಬು ಆಗಿ ನಿಂತರು. ಈ ಸಂದರ್ಭದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣದ ಜಿಲ್ಲಾ ಯುವ ನಾಯಕರಾದ ಉದ್ಯಮಿಗಳಾದ ಜಲೀಲ್ ಬೈತಡ್ಕ, ಆಸೀಫ್ ಹಾಜಿ 313 ತಂಬುತ್ತಡ್ಕ, ಹಮೀದ್ ಕೊಮ್ಮೆಮ್ಮಾರ್, ನಾಸೀರ್ ನಿಡ್ಪಳ್ಳಿ ಹಾಗೂ ಇನ್ನಿತರ ಸ್ಥಳೀಯ ಸಾರ್ವಜನಿಕರು ಉಪಸ್ಥಿತಿ ಇದ್ದರು.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.