ಸುಳ್ಯ(ವಿಶ್ವಕನ್ನಡಿಗ ನ್ಯೂಸ್): ಸದಾ ತುರ್ತು ಸೇವೆಯಲ್ಲಿರುವ ಸುಳ್ಯದ ಸಹಾಯ್ ತುರ್ತು ಸೇವಾ ತಂಡವು ಇದೀಗ ಸನ್ನದ್ಧವಾಗಿ ಮತ್ತೊಮ್ಮೆ ಸಾರ್ವಜನಿಕರ ಸಹಾಯಕ್ಕೆ ತಯಾರಾಗಿದೆ.
ಈ ಬಗ್ಗೆ ಸಹಾಯ್ ತುರ್ತು ಸೇವಾ ತಂಡದ ಡೈರೆಕ್ಟರ್ ಎ.ಎಂ.ಫೈಝಲ್ ಝುಹ್ ರಿ ಕಲ್ಲುಗುಂಡಿ ಯವರು ಮಾಹಿತಿ ನೀಡಿದ್ದಾರೆ. ಇಂದು ಮಧ್ಯಾಹ್ನ ನಂತರ ಭೀಕರ ಮಳೆ, ಗಾಳಿ, ಸಿಡಿಲು, ಮಿಂಚು ಇರುವುದಾಗಿ ಹವಾಮಾನ ಇಲಾಖೆ ಮುನ್ಸೂಚನೆ ನೀಡಿರುವ ಹಿನ್ನೆಲೆಯಲ್ಲಿ ಸಾರ್ವಜನಿಕರು ಮುನ್ನೆಚ್ಚರಿಕೆ ವಹಿಸಿ ಜಾಗೃತರಾಗಬೇಕಾಗಿದೆ.
ಪ್ರತ್ಯೇಕವಾಗಿ ಅವರವರ ಪರಿಸರದಲ್ಲಿ ಎಲ್ಲರಿಗೂ ಈ ಬಗ್ಗೆ ಜಾಗೃತಿ ಮೂಡಿಸಬೇಕಾಗಿ ಸಾರ್ವಜನಿಕರಲ್ಲಿ ಸಹಾಯ್ ತಂಡವು ವಿನಂತಿ ಮಾಡುತ್ತಿದೆ. ಅಪಾಯಕಾರಿ ಜಾಗಗಳ ಬಗ್ಗೆ ಸ್ವಲ್ಪ ಹೆಚ್ಚಿನ ಗಮನ ಹರಿಸಬೇಕೆಂದೂ, ಅನಿವಾರ್ಯ ಸಂದರ್ಭದಲ್ಲಿ ಸಾರ್ವಜನಿಕ ಸೇವೆಗೆ ನಮ್ಮ ಸಹಾಯ್ ತುರ್ತು ಸೇವಾ ತಂಡ ಸುಳ್ಯ ತಾಲ್ಲೂಕಿನಾದ್ಯಂತ ಸದಾ ಸನ್ನದ್ಧವಾಗಿದೆಯೆಂದೂ ಅವರು ತಿಳಿಸಿದ್ದಾರೆ. ಅಗತ್ಯ ಬಂದಲ್ಲಿ ಈ ಕೆಳಗಿನ ಮೊಬೈಲ್ ಸಂಖ್ಯೆಯನ್ನು ಸಂಪರ್ಕಿಸಲು ತಿಳಿಸಲಾಗಿದೆ.
ಸಹಾಯ್ ತುರ್ತು ಸೇವಾ ತಂಡ ಸುಳ್ಯ ಸರ್ಕಲ್ ಸಂಪರ್ಕ ಸಂಖ್ಯೆ : 9480307435 9632349035 8970752505 8792606035
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.