ಸುಳ್ಯ(ವಿಶ್ವಕನ್ನಡಿಗ ನ್ಯೂಸ್): ಬೆಂಗಳೂರಿನಲ್ಲಿ ಕೋವಿಡ್ ಪಾಸಿಟಿವ್ ಆಗಿ ಸಂಕಷ್ಟಕ್ಕೊಳಗಾಗಿದ್ದ ವ್ಯಕ್ತಿಯೊಬ್ಬರನ್ನು ಸುಳ್ಯಕ್ಕೆ ತಲುಪಿಸಿ ಸೂಕ್ತ ಚಿಕಿತ್ಸೆ ಒದಗಿಸಲು ಶ್ರಮಿಸುತ್ತಿದ್ದ ಮನೆಯವರಿಗೆ ಸಹಾಯ್ ತಂಡವು ಆಸರೆಯಾಯಿತು.
ಸುಳ್ಯದ ನಿವೃತ್ತ ಸರಕಾರಿ ಅಧಿಕಾರಿಯಾಗಿದ್ದ ವೀರಪ್ಪ ಗೌಡ ಎಂಬವರ ಮಗ ಬೆಂಗಳೂರಿನಲ್ಲಿ ಕೋವಿಡ್ ಪಾಸಿಟಿವ್ ಆಗಿ ಸಂಕಷ್ಟಕ್ಕೊಳಗಾಗಿದ್ದರು. ಅವರನ್ನು ಊರಿಗೆ ಕರೆದುಕೊಂಡು ಬಂದು ಚಿಕಿತ್ಸೆ ನೀಡಲು ಹಲವರನ್ನು ಸಂಪರ್ಕಿಸಿದರೂ ವ್ಯವಸ್ಥೆ ಆಗದೇ ಇದ್ದಾಗ ಸಹಾಯ್ ತುರ್ತು ಸೇವಾ ತಂಡ ದ ಅಬ್ದುರ್ರಹ್ಮಾನ್ ಮೊಗರ್ಪಣೆ ಯವರನ್ನು ಸಂಪರ್ಕಿಸಿದ ವೀರಪ್ಪ ಗೌಡ ರು ವ್ಯವಸ್ಥೆ ಮಾಡಿ ಕೊಡುವಂತೆ ಕೇಳಿಕೊಂಡರು.
ಅವರ ಮನವಿಗೆ ಶೀಘ್ರವೇ ಸ್ಪಂದಿಸಿದ ಸಹಾಯ್ ತುರ್ತು ಸೇವಾ ತಂಡವು ಸುಳ್ಯದ SSF ಆಂಬುಲೆನ್ಸ್ ಮೂಲಕ ಕೊರೋನಾ ವಾರಿಯರ್ಸ್ ಗಳಾದ ಇಬ್ಬರು ಸಹಾಯ್ ತಂಡದ ಸದಸ್ಯರ ನೇತೃತ್ವದಲ್ಲಿ ಸಮಯಬಂದಿತವಾಗಿ ಸುಳ್ಯ ಸರಕಾರಿ ಆಸ್ಪತ್ರೆಗೆ ತಲುಪಿಸಲಾಗಿದೆ.
ಇದರಿಂದ ಸಂತೋಷಗೊಂಡ ರೋಗಿಯ ಹೆತ್ತವರು ಸಹಾಯ್ ತಂಡಕ್ಕೆ ಪ್ರತ್ಯೇಕ ಅಭಿನಂದನೆಯನ್ನು ಸಲ್ಲಿಸಿದ್ದಾರೆ. ಈ ಸಂಧರ್ಭದಲ್ಲಿ ಮಾತನಾಡಿದ ರೋಗಿಯ ತಂದೆಯವರಾದ ವೀರಪ್ಪ ಗೌಡರು “ಬೆಂಗಳೂರಿನಲ್ಲಿದ್ದ ನನ್ನ ಮಗನಿಗೆ ಕೊರೋನ ಪಾಸಿಟಿವ್ ಆಗಿ ಏನು ಮಾಡಬೇಕೆಂದು ತೋಚದೆ ಚಿಂತೆಗೀಡಾಗಿದ್ದೆ. ಬೆಂಗಳೂರಿನ ಆಸ್ಪತ್ರೆಗಳಲ್ಲಿ ಬೆಡ್ ಕೂಡ ಸಿಗದ ಅವಸ್ಥೆಯಲ್ಲಿ ನಾನು ಸಹಾಯ್ ತಂಡವನ್ನು ಸಂಪರ್ಕಿಸಿದಾಗ ಅವರು ತುರ್ತಾಗಿ ಸ್ಪಂದಿಸಿ ಸುಳ್ಯದಿಂದ ಬೆಂಗಳೂರಿಗೆ ಆಂಬುಲೆನ್ಸ್ ಮೂಲಕ ಹೋಗಿ ಮಗನನ್ನು ಸೇಫಾಗಿ ಸುಳ್ಯ ತಲುಪಿಸಿ ಮಗನ ಜೀವ ಕಾಪಾಡಿದ್ದಾರೆ. ಅವರಿಗೆ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸುತ್ತೇನೆ” ಎಂದು ಹೇಳಿದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.