ಪುತ್ತೂರು(ವಿಶ್ವಕನ್ನಡಿಗ ನ್ಯೂಸ್): ಪುತ್ತೂರು ತಾಲೂಕಿನ ಕುರಿಯ ಗ್ರಾಮದ ಅಜಲಾಡಿ ಜನತಾ ಕಾಲೋನಿಯಲ್ಲಿರುವ ತೀರಾ ಬಡತನದಲ್ಲಿದ್ದ (ಸರೋಜಿನಿ ರೈ ) ಒಂಟಿ ಮಹಿಳೆಯು ಹಲವಾರು ವರ್ಷಗಳಿಂದ ಈ ಪ್ರದೇಶದಲ್ಲಿ ವಾಸಿಸುತ್ತಿದ್ದು, ಅವರ ಮನೆಯು ಕುಸಿಯುವ ಮಟ್ಟದಲ್ಲಿ ಇರುವುದು ತಿಳಿದು ಹಲವಾರು ಜನಪ್ರತಿನಿಧಿಗಳಲ್ಲಿ ಹಾಗೂ ಪರಿಚಯಸ್ಥರಲ್ಲಿ ತಿಳಿಸಿದ್ದರು ಬಹಳಷ್ಟು ಜನ ಭರವಸೆ ಕೊಟ್ಟಿರುವುದೇ ಹೊರತು ಯಾವುದೇ ಪ್ರಯೋಜನ ಲಭಿಸಿಲ್ಲ.
ಕೊನೆಗೆ ಆ ಬಡ ಮಹಿಳೆ SDPI ಬೆಂಬಲಿತ ಆರ್ಯಾಪು ಗ್ರಾಮ ಪಂಚಾಯತ್ ಸದಸ್ಯರಾದ ನಾಗೇಶ್ ಕುರಿಯ ರವರಲ್ಲಿ ತನ್ನ ಕಷ್ಟವನ್ನು ತಿಳಿಸಿದಾಗ ತಕ್ಷಣ ಸ್ಪಂದಿಸಿದ ನಾಗೇಶ್ ಕುರಿಯ ರವರು ತಮ್ಮ ಪಕ್ಷದ ಸ್ಥಳೀಯ ನಾಯಕರು ಮತ್ತು ಕಾರ್ಯಕರ್ತರ ಜೊತೆ ಚರ್ಚಿಸಿ ಮನೆ ಕೆಲಸವನ್ನು ಮುಂದುವರೆಸಿ ಮನೆಯ ಎಲ್ಲಾ ಕೆಲಸಗಳನ್ನು ಪೂರ್ಣಗೊಳಿಸಿ ಊರಿನ ಪ್ರಶಂಸೆಗೆ ಪಾತ್ರರಾಗಿದ್ದಾರೆ.
ಈ ಒಂದು ಕೆಲಸದಲ್ಲಿ ಪಾಲ್ಗೊಂಡ ಎಸ್.ಡಿ.ಪಿ.ಐ ವಲಯ ಅಧ್ಯಕ್ಷರಾದ ಬಶೀರ್ ವಾಗ್ಲೆ, ಪಾಪ್ಯುಲರ್ ಫ್ರಂಟ್ ಸಂಪ್ಯ ಏರಿಯಾ ಅಧ್ಯಕ್ಷರಾದ ಅಶ್ರಫ್ ಸಂಟ್ಯಾರ್ ಹಾಗೂ ಕುರಿಯ ಬ್ರಾಂಚ್ ಅಧ್ಯಕ್ಷರಾದ ಅಶ್ರಫ್ ಕುರಿಯ, ಕಾರ್ಯದರ್ಶಿಗಳಾದ ಸಮೀರ್ ಕುರಿಯ, ಕಾರ್ಯಕರ್ತರಾದ ಝೈದ್ , ಪವಾಝ್, ಪಯಾಝ್, ರವೂಫ್, ಫಾರೂಕ್, ಇರ್ಶಾದ್, ಸಫೀಕ್, ಜಬ್ಬಾರ್, ಸಾಬಿಕ್ ಹಾಗೂ ಊರಿನ ಪ್ರಮುಖರಾದ ಸೂಫಿ ಕುರಿಯ, ಮಹಮ್ಮದ್ (ಮಮ್ಮು) ಅಜ್ಜಿಕಟ್ಟೆ ಹಾಗೂ ಜಲೀಲ್ ಕುರಿಯ ಮುಂತಾದವರು ಈ ಕಾರ್ಯದಲ್ಲಿ ಸಹಕರಿಸಿದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.