(Www.vknews.in) ಸರಕಾರದ ಖಜಾನೆಯಿಂದ ಕೊರೋನ ದಿಂದ ಮೃತ ಪಟ್ಟ ಶಿಕ್ಷಕರಿಗೆ ಒಂದು ಕೋಟಿ ಪರಿಹಾರವನ್ನು ನೀಡ ಬೇಕೆಂದು ಅಖಿಲ ಬಾರತ ಪ್ರೈಮರಿ ಶಿಕ್ಷಕರ ಸಂಘವು ಮಾನ್ಯ ಶಿಕ್ಷಣ ಸಚಿವರಾದ ಸುರೇಶ್ ಕುಮಾರ್ ರವರಿಗೆ ಮನವಿಯ ಮೂಲಕ ಆಗ್ರಹಿಸಿದೆ.
ಕರ್ನಾಟಕ ರಾಜ್ಯ ಶಿಕ್ಷಕರ ಕಲ್ಯಾಣ ನಿಧಿ ಹಾಗೂ ವಿಧ್ಯಾರ್ಥಿಗಳ ಕ್ಷೇಮಾಭಿವೃದ್ಧಿ ನಿಧಿಯು ಶಿಕ್ಷಕರ ಮತ್ತು ವಿದ್ಯಾರ್ಥಿಗಳ ಧನ ಸಹಾಯದಿಂದ ಸ್ಥಾಪಿತವಾದ ಸಂಸ್ಥೆ ಯಾಗಿದೆ.ಸರಕಾರದಿಂದ ಈ ವರೆಗೆ ಶಿಕ್ಷಕರ ಕಲ್ಯಾಣ ನಿಧಿಯು ಯಾವುದೇ ರೀತಿಯ ಆರ್ಥಿಕ ಧನ ಸಹಾಯವನ್ನು ಪಡೆದಿರುವುದಿಲ್ಲ.ಮತ್ತು ಈಗಿರುವ ಶಿಕ್ಷಕರ ಭವನವನ್ನು ಶಿಕ್ಷಕರ ಒಂದು ದಿನದ ವೇತನ ಹಾಗೂ ಶಿಕ್ಷಕರ ಕಲ್ಯಾಣ ನಿಧಿಯಿಂದ ನಿರ್ಮಿಸಲಾಗಿದೆ. ಈ ಕಟ್ಟಡಕ್ಕೂ ಸರಕಾರದಿಂದ ಯಾವುದೇ ರೀತಿಯ ಧನ ಸಹಾಯವನ್ನು ಪಡೆದಿರುವುದಿಲ್ಲ.
ಶಿಕ್ಷ ಕಲ್ಯಾಣ ನಿಧಿಯ ವತಿಯಿಂದ ಶಿಕ್ಷಕರಿಗೆ ಹಾಗೂ ವಿದ್ಯಾರ್ಥಿ ಗಳಿಗೆ ಹಲವು ವಿಧದ ಧನ ಸಹಾಯವನ್ನು ಕೊಡಲಾಗುತ್ತಿದೆ.ಕರ್ತವ್ಯ ದಲ್ಲಿದ್ದಾಗ ಶಿಕ್ಷಕರು ಮೃತರಾದರೆ ತಾತ್ಕಾಲಿಕ ನಿರ್ವಹಣೆಗಾಗಿ 10000 ವನ್ನು ಶಿಕ್ಷಕರ ನಿಧಿಯಿಂದ ಕೊಡಲಾಗುತ್ತದೆ. ಸಹಜ ಸಾವಿಗೆ 10000 ಅಥವಾ ಅಪಘಾತದಲ್ಲಿ ಮೃತ ರಾದರೆ 100000 ಪರಿಹಾರವನ್ನು ಕೊಡಲಾಗುತ್ತದೆ.
ಈಗ ಕೋವಿದ್ ಕಾರಣದಿಂದ ಮೃತ ರಾದವರಿಗೆ ಶಿಕ್ಷಕರ ಕಲ್ಯಾಣ ನಿಧಿಯಿಂದ ಪರಿಹಾರ ಕೊಡುವ ಬಗ್ಗೆ ನಿಮ್ಮ ಹೇಳಿಕೆ ಬಂದಿದೆ. ಕಲ್ಯಾಣ ನಿಧಿಯಿಂದ ಸಿಗುವ ಸೌಲಭ್ಯವು ಶಿಕ್ಷಕರ ಕುಟುಂಬಕ್ಕೆ ದೊರಕಲಿ. ಇದು ಶಿಕ್ಷಕರ ಮತ್ತು ವಿದ್ಯಾರ್ಥಿಗಳ ಹಣ,ಅದು ಸದುಪಯೋಗ ವಾಗಲಿ. ಆದರೆ ಸರಕಾರದ ಖಜಾನೆಯಿಂದ ಮೃತ ಶಿಕ್ಷಕರಿಗೆ ಪರಿಹಾರ ನೀಡಬೇಕಾಗಿರುವುದು ಸರಕಾರದ ಆದ್ಯ ಕರ್ತವ್ಯವಾಗಿದೆ.
ಆದ ಕಾರಣ ಸರಕಾರದ ನಿಯಮಾವಳಿ ಗಳ ಪ್ರಕಾರ ಶಿಕ್ಷಕರಿಗೆ ದೊರಕುವ ಆರ್ಥಿಕ ಹಾಗೂ ಇತರ ಸೌಲಭ್ಯಗಳ ಜೊತೆಗೆ ಕೋವಿದ್ ಕಾರಣದಿಂದ ಮೃತ ಪಟ್ಟ ಶಿಕ್ಷಕರು ಗಳಿಗೆ ಹೆಚ್ಚುವರಿಯಾಗಿ ಕನಿಷ್ಠ ಒಂದು ಕೋಟಿ ರೂಪಾಯಿ ಪರಿಹಾರ ಹಣವನ್ನು ಸರಕಾರದ ಖಜಾನೆಯಿಂದ ಮೃತರ ಕುಟುಂಬಗಳಿಗೆ ನೀಡಬೇಕಾಗಿ ವಿನಂತಿ.
ಹಾಗೂ ಮೃತ ಶಿಕ್ಷಕರು ಗಳ ಕುಟುಂಬದಲ್ಲಿ ಅನುಕಂಪದ ನೌಕರಿ ಪಡೆಯಲು ವಯಸ್ಕರು ಇಲ್ಲದ ಪಕ್ಷದಲ್ಲಿ ಅವರ ಅವಲಂಬಿತರು ಅಲ್ಪ ವಯಸ್ಕರು ಆಗಿದ್ದಲ್ಲಿ ಅವರು ವಯಸ್ಕರು ಆಗುವವರೆಗೂ ಅವಕಾಶ ನೀಡಿ,ಮುಂದೆ ಅವರ ಕುಟುಂಬದ ಅವಲಂಬಿತ ರಿಗೆ ಅನುಕಂಪದ ನೌಕರಿ ನೀಡುವುದು.
ಹಾಗೂ ಮೃತರು ನೂತನ ಪಿಂಚಣಿ ಯೋಜನೆಗೆ ಒಳ ಪಡುತ್ತಿದ್ದರೆ,ಅಂತಹ ಶಿಕ್ಷಕರು ಗಳಿಗೆ ಹಳೆ ಪಿಂಚಣಿ ಯೋಜನೆಯನ್ನು ಮಂಜೂರು ಮಾಡಿ ಪಿಂಚಣಿ ಹಾಗೂ ಇನ್ನಿತರ ನಿವೃತ್ತಿ ಸೌಲಭ್ಯಗಳನ್ನು ನೀಡಬೇಕೆಂದು ವಿನಂತಿಸಿ ಕೊಳ್ಳುತ್ತೇನೆ.
ಸರಕಾರದ ವತಿಯಿಂದ 1 ಕೋಟಿ ರೂಪಾಯಿ ಪರಿಹಾರವನ್ನು ಕೊಡಬೇಕಾಗಿ ಮತ್ತೊಮ್ಮೆ ವಿನಂತಿಸಿ ಕೊಳ್ಳುತ್ತೇನೆ .
ವಂದನೆಗಳೊಂದಿಗೆ ತಮ್ಮ ವಿಶ್ವಾಸಿ.
ಬಸವರಾಜ್ ಗುರಿಕ್ಕಾರ ,
ಉಪಾಧ್ಯಕ್ಷರು ಅಖಿಲ ಭಾರತ ಪ್ರಾಥಮಿಕ ಶಿಕ್ಷಕರ ಫೆಡರೇಷನ್ . ನವ ದೆಹಲಿ
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.