ಕೆಜಿಎಫ್(www.vknews.com) :-ನಿವೃತ್ತ ಪೊಲೀಸ್ ಅಧಿಕಾರಿಗಳಿಗೆ ಬಿಳ್ಕೊಡುಗೆ ಕಾರ್ಯಕ್ರಮವು ಮೇ 31 ರಂದು ಕೋವಿಡ್ ನಿಯಮಾವಳಿಯಂತೆ ಅತ್ಯಂತ ಸರಳವಾದ ರೀತಿಯಲ್ಲಿ ನಡೆಯಿತು.
ಡಿ.ಎ.ಆರ್ ನ ಎ ಆರ್ ಎಸ್.ಐ ಮುರುಗಚಂದ್ರ ಮತ್ತು ಕಾಮಸಮುದ್ರ ಠಾಣೆಯ ಎಎಸ್ಐ ದಬ್ಬನಹಳ್ಳಿ ಶ್ರೀನಿವಾಸ ಅವರುಗಳು ಮೇ.31 ರಂದು ಸರ್ಕಾರಿ ಸೇವೆಯಿಂದ ವಯೋನಿವೃತ್ತಿ ಹೊಂದಿದ ಸಂದರ್ಭದಲ್ಲಿ ಅವರುಗಳಿಗೆ ಕೆಜಿಎಫ್ ಜಿಲ್ಲಾ ಪೊಲೀಸ್ ಕಛೇರಿಯಲ್ಲಿ ಏರ್ಪಡಿಸಿದ್ದ ಬಿಳ್ಕೊಡುಗೆ ಸಮಾರಂಭದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಇಲಕ್ಕಿಯಾ ಕರುಣಾಕರನ್ ಅವರು ಅಧ್ಯಕ್ಷತೆ ವಹಿಸಿ ನಿವೃತ್ತ ಪೊಲೀಸ್ ಅಧಿಕಾರಿಗಳಿಗೆ ವಿಶ್ರಾಂತಿ ಜೀವನಕ್ಕೆ ಶುಭಕೋರಿದರು. ನಿವೃತ್ತರಾದ ಎ ಆರ್ ಎಸ್ಐ ಮುರುಗಚಂದ ಎಎಸ್ಐ ದಬ್ಬನಹಳ್ಳಿ ಶ್ರೀನಿವಾಸ್ ಅವರುಗಳನ್ನು ಪ್ರತ್ಯೇಕವಾಗಿ ಶಾಲು ಹೊದಿಸಿ ಹಣ್ಣು ಹಂಪಲು ನೀಡ್ಲಿ ಸನ್ಮಾನಿಸಿ ನನಪಿನ ಕಾಣಿಕೆಯನ್ನು ನೀಡಿ ಗೌರವಿಸಲಾಯಿತು. ಮುಖ್ಯ ಅತಿಥಿಗಳಾಗಿ ಡಿವೈಎಸ್ಪಿ ಬಿ.ಕೆ.ಉಮೇಶ್ , ಸಹಾಯಕ ಆಡಳಿತಾಧಿಕಾರಿ ಜಿ.ವಿಶ್ವನಾಥ , ಆರ್ಪಿಐ ವಿ.ಸೋಮಶೇಖರ್ ಮತ್ತಿತರರು ಉಪಸ್ಥಿತರಿದ್ದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.