ಶ್ರೀನಿವಾಸಮರ(www.vknews.com):- ಅಂಗಡಿ ಮುಚ್ಚಿರುವುದರಿಂದ ಆರ್ಯ ವೈಶ್ಯ ಜನಾಂಗದ ಜೀವನ ದುಸ್ತರವಾಗಿದೆ . ಸಣ್ಣ ಪುಟ್ಟ ವ್ಯಾಪಾರ ಮಾಡುತ್ತಿದ್ದವರಿಗಂತೂ ಸಂಕಷ್ಟ ಎದುರಾಗಿದೆ ಎಂದು ಮುಖಂಡ ಎಸ್.ಆರ್. ಅಮರನಾಥ್ ಹೇಳಿದರು. ಪಟ್ಟಣದ ವಾಸವಿ ಕಲ್ಯಾಣ ಮಂಟಪದಲ್ಲಿ ಸೋಮವಾರ ಏರ್ಪಡಿಸಿದ್ದ ಸಮಾರಂಭದಲ್ಲಿ ಬಾನಿಗಳಾದ ಎಂ.ಎಸ್.ಶಾಂತಮ್ಮ , ಎನ್.ಎಸ್ . ಲಕ್ಷ್ಮೀಪತಿ ಶೆಟ್ಟಿ ಅವರು ಆರ್ಯ ವೈಶ್ಯ ಜನಾಂಗದ ಬಡವರಿಗೆ ನೀಡಿದ ದಿನಸಿ ಕಿಟ್ ವಿತರಿಸಿ ಮಾತನಾಡಿದ ಅವರು , ಈ ದಂಪತಿಗಳು ಸಂಕಷ್ಟದ ಸಂದರ್ಭದಲ್ಲಿ ಬಡವರ ನೆರವಿಗೆ ಬಂದಿರುವುದು ಸ್ತುತ್ಯಾರ್ಹ ಸಂಗತಿಯಾಗಿದೆ ಎಂದು ಹೇಳಿದರು .
ದಾನಿ ಎನ್.ಎಸ್.ಲಕ್ಷ್ಮೀಪತಿ ಶೆಟ್ಟಿ ಮಾತನಾಡಿ , ಕಷ್ಟದಲ್ಲಿರುವ ವ್ಯಕ್ತಿಗೆ ನೆರವಾಗುವುದು ಮಾನವ ಧರ್ಮ , ಅದರಲ್ಲೂ ಹಸಿದವರಿಗೆ ಅನ್ನ ಹಾಕುವುದು ರ್ಮದ ಅಲಸ , ಹಾಗಂತಲೇ ಪಟ್ಟಣದ ೩೫ ಕುಟುಂಬಗಳಿಗೆ ತಲಾ ರೂ .೫ ಸಾವಿರ ಮೌಲ್ಯದ ದಿನಸಿ ಕಿಟ್ ವಿತರಿಸಲಾಗಿದೆ ಎಂದು ಹೇಳಿದರು . ಮುಖಂಡರಾದ ಎಸ್.ಜಿ.ದಪ್ಪಯ್ಯ , ಗಟ್ಟಿ , ಎಸ್.ಸಿ.ಅಮರಿನಾಥ್ ಇದ್ದರು .
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.