ಪುತ್ತೂರು(ವಿಶ್ವಕನ್ನಡಿಗ ನ್ಯೂಸ್): ಕೆಲವು ದಿನಗಳ ಹಿಂದೆ ಪುತ್ತೂರಿನಲ್ಲಿ ಸಮಾಜಮುಖಿ ಕಾರ್ಯಕ್ರಮಗಳನ್ನು ಮಾಡುತ್ತಿರುವ HMC ಜನಜಾಗೃತ್ ದಳ್ ಸಂಘಟನೆಯು ಪುತ್ತೂರು ತಾಲೂಕಿನ ನಿರ್ಗತಿಕರ, ಬಡವರ ಮನೆಗೆ ಅವರಿಗೆ ಬೇಕಾದ ದಿನಸಿ ವಸ್ತುಗಳು, ಆಹಾರ ಸಾಮಗ್ರಿಗಳನ್ನು ಜೊತೆಗೆ ಧನಸಹಾಯವನ್ನು ಮಾಡುತ್ತಾ ಬಂದಿರುವುದು ಎಲ್ಲರಿಗೂ ಗೊತ್ತಿರುವ ವಿಚಾರ..
ಇದೇ ಸಂದರ್ಭದಲ್ಲಿ HMC ಜನಜಾಗೃತ್ ದಳ್ ತಂಡಕ್ಕೆ ನಗರದ ಬಪ್ಪಳಿಗೆಯ ಕಾಲೋನಿಯಲ್ಲಿ ತೀರಾ ಬಡ ಕುಟುಂಬವೊಂದು ಸೂರಿಲ್ಲದೆ ಕೇವಲ ಪ್ಲಾಸ್ಟಿಕ್ ಹೊದಿಕೆಯಲ್ಲಿ ಜೀವನ ಸಾಗಿಸುವ ಅತ್ಯಂತ ಕಷ್ಟಕರ ಸನ್ನಿವೇಶ ಕಣ್ಣಿಗೆ ಬಿದ್ದಿತ್ತು.
ಜೊತೆಗೆ ಆ ಕುಟುಂಬದ ಮಹಿಳೆಗೆ ಹಾವು ಕಚ್ಚಿ ಚಿಕಿತ್ಸೆ ಕೂಡ ಮಾಡಲಾಗದೇ ಹತ್ತು ದಿವಸಗಳಿಂದ ಮನೆಯಲ್ಲಿಯೇ ಕುಳಿತು ಕಣ್ಣೀರಲ್ಲೇ ಕಾಲ ಕಳೆಯುವ ಸನ್ನಿವೇಶ ಬಂದಿತ್ತು.
ಇವರಿಗೆ ಜನಜಾಗೃತ್ ದಳ್ ತಂಡವು ಭೇಟಿ ಮಾಡಿ ದಿನಸಿ ವಸ್ತುಗಳನ್ನು ವಿತರಿಸಿ, ಸಂಘಟನೆ ವತಿಯಿಂದ ಮುಂಬರುವ ದಿನಗಳಲ್ಲಿ ತಾತ್ಕಾಲಿಕವಾಗಿ ಸಿಮೆಂಟ್ ಶೀಟ್ ನ ಮನೆ ಮಾಡಿ ಕೊಡುವ ಭರವಸೆ ನೀಡಿ ಆ ಮೂಲಕ ಸಂಘಟನೆ ಮುಂದೆ ಬಂದು ಯೋಜನೆ ಹಾಕಿತ್ತು ಮತ್ತು ಇದರ ಬಗ್ಗೆ HMC ಜನಜಾಗೃತ್ ದಳದ ಸಂಘಟನೆಯ ಪದಾಧಿಕಾರಿಗಳು ನಗರಸಭಾ ಅಧ್ಯಕ್ಷರಿಗೆ ಮಾಹಿತಿ ನೀಡಿದ್ದರು.
ಕೂಡಲೇ ಪುತ್ತೂರು ನಗರಸಭಾಧ್ಯಕ್ಷರು ಹಾಗೂ ಸಂಬಂಧಪಟ್ಟ ಅಧಿಕಾರಿಗಳು ಕಾಲೋನಿಗೆ ಭೇಟಿ ನೀಡಿ ಕೂಡಲೇ ಮನೆ ನಿರ್ಮಿಸುವ ಭರವಸೆ ನೀಡಿದ್ದಾರೆ.
ಜನಪರ ಕಾಳಜಿ ವಹಿಸಿ, ಕೋರೋನಾ ಮುಕ್ತ ಪುತ್ತೂರು ಎಂಬ ಧ್ಯೇಯದೊಂದಿಗೆ ಮುಂದೆ ಬಂದ HMC ಜನಜಾಗೃತ್ ದಳದ ಸಾಮಾಜಿಕ ಕಳಕಳಿ ಹಾಗೂ ನಗರಸಭೆಯ ಜವಾಬ್ದಾರಿ ಹಾಗೂ ಸ್ಪಂದನಗೆ ನಾವು ಅಭಿನಂದಿಸಲೇಬೇಕು..
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.