ಅಂಗವಿಕಲತೆಯ ಕಡೆಗಣನೆ ಅಸಮಾನತೆಯ ನೈಜ ಘೋಷಣೆಯಾಗಿದೆ.
(ವಿಶ್ವಕನ್ನಡಿಗ ನ್ಯೂಸ್), ಶಿವಮೊಗ್ಗ: ಸಮಾಜದಲ್ಲಿ ಅತ್ಯಂತ ದೈನ್ಯ ಸ್ಥಿತಿಯಲ್ಲಿ ಯಾವುದೇ ಸಮುದಾಯಗಳಿದ್ದರೂ ಅವುಗಳನ್ನು ಮೇಲೇತ್ತಬೇಕಾಗಿದ್ದು ಸರಕಾರಗಳ ಕರ್ತವ್ಯವೆಂಬುದು ಎಲ್ಲರೂ ತಿಳಿಯ ಬೇಕಾಗಿರುವ ವಿಷಯ. ಅದರಂತೆ ಅಂಗವಿಕಲತೆ ಇರುವವರು ಇತರ ಸಾಮಾನ್ಯರನ್ನು ಮದುವೆಯಾದರೆ ಅವರಿಗೆ ಐವತ್ತು ಸಾವಿರ ರೂಪಾಯಿಗಳ ಭದ್ರಾತಾ ಠೇವಣೆ ಪತ್ರಗಳನ್ನು ಸುಮಾರು ವರ್ಷಗಳಿಂದ ನೀಡಲಾಗುತ್ತಿದೆ. ಇದಕ್ಕೆ ತಾರತಮ್ಯ ಸೂಚಿಸುವಂತೆ ಪರಿಶಿಷ್ಟ ಜಾತಿ ಪಂಗಡದವರು ಸಾಮಾನ್ಯ ವರ್ಗದ ಜೊತೆ ವೈವಾಹಿಕ ಸಂಬಂಧ ಹೊಂದಿದರೆ ಅವರಿಗೆ ಐದು ಲಕ್ಷ ರೂಪಾಯಿಗಳ ಭದ್ರಾತಾ ಠೇವಣೆ ನೀಡಲಾಗುವುದು ಎಂದು ಇತ್ತೀಚಿಗೆ ಸರಕಾರವು ಅಧಿಸೂಚನೆ ಹೊರಡಿಸಿದೆ. ಒಂದು ಕಣ್ಣಿಗೆ ಸುಣ್ಣ ಇನ್ನೊಂದು ಕಣ್ಣಿಗೆ ಬೆಣ್ಣೆ ಹಚ್ಚುವ ಈ ಧೋರಣೆ ನ್ಯಾಯ ಸಮ್ಮತವಲ್ಲ ಎಂದು ಭಾರತೀಯ ಅಂಗವಿಕಲರ ಸಬಲೀಕರಣ ಸಂಸ್ಥೆ ಇದರ ಸ್ಥಾಪಕ ಅಧ್ಯಕ್ಷ ಶ್ರೀ ಕೊಡಕ್ಕಲ್ ಶಿವಪ್ರಸಾದ್ ಸರಕಾರವನ್ನು ಒತ್ತಾಯಿಸಿದ್ದಾರೆ.
ಅಂಗವಿಕಲತೆ ಇರುವವರನ್ನು ಸ್ವತಃ ಅವರ ಸಮುದಾಯದಲ್ಲೇ ನಿರಾಕರಿಸುವ ಮಂದಿಗಳು ಇಂದಿಗೂ ಇದ್ದಾರಲ್ಲದೆ ಅಂಗವಿಕಲತೆಯಲ್ಲಿರುವ ಕಷ್ಟಕರ ಸನ್ನಿವೇಶಗಳನ್ನು ಅರ್ಥಮಾಡಿಕೊಳ್ಳಬೇಕಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಕೇವಲ ಐವತ್ತು ಸಾವಿರ ರೂಪಾಯಿಗಳಲ್ಲಿಅಂಗವಿಕಲರ ವೈವಾಹಿಕ ಜೀವನ ಸುಗಮವಾಗಿ ಮುಂದುವರಿಯಬಹುದು ಎಂಬ ಕಲ್ಪನೆ ಹಾಸ್ಯಸ್ಪದವಲ್ಲದೆ ಇಂತಹ ಅಸವಿಂದಾನಿತ ನಿಯಮಗಳನ್ನು ಯಾರೂ ಒಪ್ಪುವುದು ಸಾಧ್ಯವಿಲ್ಲ.
ಸ್ವತಃ ಭಾರತದ ಉಚ್ಚ ನ್ಯಾಯಾಲವು ಇತ್ತೀಚಿಗೆ ಅದೇಶಿಸಿದಂತೆ ಅಂಗವಿಕಲರಿಗೆ ಪರಿಶಿಷ್ಟ ಸಮುದಾಯಕ್ಕೆ ಸಿಗುವ ಎಲ್ಲಾ ಸೌಲಭ್ಯಗನ್ನು ವಿಸ್ತರಿಸಬೇಕು ಎಂಬ ನಿಯಮವನ್ನು ಪಾಲಿಸಲು ಹಿಂಜರಿಯುವುದು ನ್ಯಾಯಯುಕ್ತವಾಗಿಲ್ಲ ಎಂದು ಅವರು ಪ್ರತಿಪಾದಿಸಿದರು.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.