ಮಡಿಕೇರಿ(ವಿಶ್ವಕನ್ನಡಿಗ ನ್ಯೂಸ್): ವಿಶ್ವ ಡ್ರಗ್ಸ್ ವಿರುದ್ಧ ದಿನವಾದ ಜೂನ್ 26ರಂದು ಎಸ್ಎಸ್ಎಫ್ ಕೊಡಗು ಜಿಲ್ಲಾ ಸಮಿತಿಯು ವೈವಿಧ್ಯಮಯವಾದ ಡ್ರಗ್ಸ್ ವಿರುದ್ಧ ಜಾಗೃತಿ ಆಂದೋಲನ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು ವ್ಯಾಪಕ ಪ್ರಶಂಸೆಗೆ ಪಾತ್ರವಾಗಿದೆ.
ಡಕಳೆದ ಒಂದು ವಾರಗಳಿಂದ ವಿವಿಧ ಘಟಕಗಳಲ್ಲಿ ಆಯೋಜಿಸಿದ್ದ ಸಪ್ತಾಹ ಕಾರ್ಯಕ್ರಮಗಳು ಹಲವಾರು ಜನರಿಗೆ ಮಾದಕ ಪದಾರ್ಥಗಳ ವಿರುದ್ಧ ಸಂದೇಶಗಳನ್ನು ತಲುಪಿಸಲು ಸಾದ್ಯವಾಯಿತು. ಕವಿತೆ ಕವನ ಸ್ಟೇಟಸ್ ವಿಡಿಯೋ ಪೋಸ್ಟರ್ ಪ್ರದರ್ಶನದ ಜೊತೆಗೆ ಪ್ರತಿಜ್ಞೆ ಸ್ವೀಕಾರದಂತಹ ಕಾರ್ಯಕ್ರಮಗಳು ಯುವಜನಾಂಗಕ್ಕೆ ಒಳ್ಳೆಯ ಸಂದೇಶವನ್ನು ತಲುಪಿಸಲು ಕಾರಣವಾಗಿದೆ. ಜಿಲ್ಲಾ ಸಮಿತಿಯ ಅಧಿಕೃತ ಯುಟ್ಯೂಬ್ ಚಾನಲ್ ನಲ್ಲಿ ನಡೆದ ಸಂದೇಶ ಜಾಗೃತಿ ಕಾರ್ಯಕ್ರಮದಲ್ಲಿ ಜಿಲ್ಲೆಯ ಪ್ರಮುಖ ವ್ಯಕ್ತಿಗಳು ಧಾರ್ಮಿಕ ಮುಖಂಡರು ಪಾಲ್ಗೊಂಡಿದ್ದರು.
ಎಸ್ಎಸ್ಎಫ್ ಕೊಡಗು ಜಿಲ್ಲಾಧ್ಯಕ್ಷರಾದ ಶಾಫಿ ಸಅದಿ ಸೋಮವಾರಪೇಟೆ ರವರ ಅಧ್ಯಕ್ಷತೆಯಲ್ಲಿ ನಡೆದ ಈ ಕಾರ್ಯಕ್ರಮವನ್ನು ಉದ್ಘಾಟಿಸಿದ SYS ರಾಜ್ಯ ಪ್ರಧಾನ ಕಾರ್ಯದರ್ಶಿ ಡಾ. ಎಂ ಎಸ್ ಎಂ ಅಬ್ದುಲ್ ರಶೀದ್ ಝೈನಿ ಅಲ್ಕಾಮಿಲ್ ಮಾದಕ ಪದಾರ್ಥಗಳ ಕಂಪೆನಿಗಳು ಅವುಗಳನ್ನು ಯುವ ತಲೆಮಾರಿಗೆ ತಲುಪಿಸಲು ಯಾವುದೆಲ್ಲ ತಂತ್ರಗಳನ್ನು ಹೂಡುತ್ತಿವೆಯೊ ಅವುಗಳಿಗೆ ಪ್ರತಿ ತಂತ್ರವನ್ನು ಹೂಡದೆ ಕೇವಲ ಭಾಷಣ ಲೇಖನಗಳಿಂದ ಮಾತ್ರ ಅದರ ನಿರ್ಮೂಲನೆ ಅಸಾಧ್ಯ ಎಂದರು.
ಮುಖ್ಯ ಭಾಷಣ ಮಾಡಿದ ಕರ್ನಾಟಕ ರಾಜ್ಯ ವಕ್ಫ್ ಮಂಡಳಿಯ ಸದಸ್ಯರೂ ಕರ್ನಾಟಕ ಮುಸ್ಲಿಂ ಜಮಾತ್ ಇದರ ಪ್ರಧಾನ ಕಾರ್ಯದರ್ಶಿ ಆದ ಮೌಲಾನ ಶಾಫಿ ಸಅದಿ ಬೆಂಗಳೂರು ಪೊಲೀಸ್ ಇಲಾಖೆಯು ಡ್ರಗ್ಸ್ ವಿರುದ್ಧ ಕಾರ್ಯಚಟುವಟಿಕೆಗಳನ್ನು ಇನ್ನಷ್ಟು ಬಿಗಿಗೊಳಿಸಬೇಕು ಗ್ರಾಮ ಗ್ರಾಮಗಳಲ್ಲೂ ಅಮಲು ಪದಾರ್ಥಗಳನ್ನು ಬಳಸುವ ತರುಣರನ್ನು ಎಚ್ಚರಿಸಬೇಕು ಪೊಲೀಸ್ ಇಲಾಖೆಯೊಂದಿಗೆ ಸಂಘ ಸಂಸ್ಥೆಗಳು ಕೂಡ ಕೈಜೋಡಿಸಿದರೆ ಖಂಡಿತ ಬದಲಾವಣೆ ಸಾಧ್ಯ ಎಂದರು. ಶಕ್ತಿ ದಿನ ಪತ್ರಿಕೆಯ ಸಂಪಾದಕರಾದ ಜಿ.ಚಿದ್ವಿಲಾಸ್ರವರು ಮಾತನಾಡಿ ದುಶ್ಚಟಗಳಿಗೆ ಬಿದ್ದ ಮಂದಿ ಅಪರಾಧಿ ಮನೋಭಾವ ಬೆಳೆಸಿಕೊಳ್ಳುತ್ತಾನೆ ಮತ್ತು ಸಮಾಜ ಅವನನ್ನು ದೂರವಿಡುತ್ತದೆ ಹಾಗೂ ಕೌಟುಂಬಿಕವಾಗಿಯೂ ಹಲವು ಸಮಸ್ಯೆಗಳನ್ನು ಎದುರಿಸುತ್ತಾನೆ ಆದ್ದರಿಂದ ನಾವು ದುಶ್ಚಟಗಳಿಂದ ದೂರವಿರಬೇಕೆಂದು ಕಿವಿಮಾತು ಹೇಳಿದರು.
ಡ್ರಕ್ಸ್ ಮುಕ್ತ ಕೊಡಗು ಅಭಿಯಾನದ ರೂವಾರಿ ಹಿರಿಯ ಪತ್ರಕರ್ತ ಅಜ್ಜಮಾಡ ರಮೇಶ್ ಕುಟ್ಟಪ್ಪ ನವರು ಮಾತನಾಡಿ ಇಂತಹ ಜಾಗೃತಿ ಗಳನ್ನು ಹಮ್ಮಿಕೊಳ್ಳು ವಾಗ ಕೆಲವೊಮ್ಮೆ ಬೆಂಬಲ ಅಥವಾ ಟೀಕೆಗಳು ಕೇಳಿ ಬರಬಹುದಾದರೂ ಖಂಡಿತ ಇವೆಲ್ಲವೂ ಸಮಾಜಕ್ಕೆ ಒಳ್ಳೆಯ ಸಂದೇಶವನ್ನು ನೀಡುತ್ತಿವೆ. ಡ್ರಕ್ಸ್ ಮುಕ್ತ ಸಮಾಜವನ್ನು ಮಾಡಬೇಕಾದರೆ ನಿರಂತರ ಇಂತಹ ಕಾರ್ಯಕ್ರಮ ನಡೆಯುತ್ತಿರಬೇಕು, ಎಸ್ಸೆಸ್ಸೆಫ್ನ ಕಾರ್ಯವೈಕರಿ ಪ್ರಶಂಸನೀಯ ಎಂದರು. ಸೋಮವಾರಪೇಟೆ ಸರ್ಕಾರಿ ಆಸ್ಪತ್ರೆಯ ವೈದ್ಯಾಧಿಕಾರಿ ಡಾಕ್ಟರ್ ಶಿವಪ್ರಸಾದ್ ಡ್ರಕ್ಸ್ ಬಳಸಲು ಕೆಲವು ಬಾರಿ ಕಾನೂನಿನ ಅನುಮತಿಯೆ ಇದ್ದು ಸರ್ಕಾರದ ಬೊಕ್ಕಸಕ್ಕೆ ಕೋಟ್ಯಂತರ ರೂಪಾಯಿಗಳು ಅದರಿಂದ ಹರಿದು ಬರುತ್ತಿದೆ, ಅವುಗಳ ವಿರುದ್ಧ ಜಾಗೃತಿಯಲ್ಲದೆ ಬೇರೆ ಮಾರ್ಗವಿಲ್ಲ ಎಂದರು. ಜನಾಂದೋಲನ ವೇದಿಕೆಯ ಮುಖಂಡರಾದ ವಿ ಪಿ ಶಶಿಧರ್ ಎಸ್ಎಸ್ಎಫ್ನ ಸಾಮಾಜಿಕ ಕಾಳಜಿಯನ್ನು ಕೊಂಡಾಡಿದರು. , ಹಿರಿಯ ವಕೀಲ ಕೆಎಂ ಕುಂಞ್ಞಿ ಅಬ್ದುಲ್ಲಾ,ಕೊಡಗು , ಪೊಲೀಸ್ ಠಾಣೆಯ ಸಬ್ ಇನ್ಸ್ಪೆಕ್ಟರ್ ಎಸ್ ಮಂಜುನಾಥ್ ಎಸ್ಎಸ್ಎಫ್ ನ ರಾಷ್ಟ್ರೀಯ ಹಾಗೂ ರಾಜ್ಯ ನಾಯಕರಾದ ಯಾಕೂಬ್ ಮಾಸ್ಟರ್ ಕೊಳಕೇರಿ ಮುಂತಾದ ಗಣ್ಯರು ಅರ್ಥಪೂರ್ಣ ಸಂದೇಶಗಳನ್ನು ನೀಡಿದರು. ಈ ಜಾಗೃತಿಯೂ ಕೇವಲ ಸಂದೇಶಗಳಿಗೆ ಸೀಮಿತಗೊಳಿಸದೆ ಎಸ್ ಎಸ್ ಎಫ್ನ ಪ್ರತಿಯೊಬ್ಬ ಕಾರ್ಯಕರ್ತರು ಡ್ರಗ್ಸ್ ವಿರುದ್ಧದ ಪೋಸ್ಟರ್ಗಳನ್ನು ಪ್ರದರ್ಶನ ಮಾಡುತ್ತಾ ಜೀವನದಲ್ಲಿ ಒಮ್ಮೆಯೂ ಗುಟ್ಕಾ ಪಾನ್ ಮಸಾಲ ಇರುವಂತಹ ಯಾವುದೇ ಪದಾರ್ಥಗಳನ್ನು ಬಳಸುವುದಿಲ್ಲವೆಂದು ಪ್ರತಿಜ್ಞೆಯನ್ನು ಸ್ವೀಕರಿಸಿ ಇತರರಿಗೂ ಪ್ರೇರಣೆಯಾಗುವ ನಿಟ್ಟಿನಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ರವಾನಿಸಿದ್ದಾರೆ ಮತ್ತು ಪ್ರತಿ ಊರಿನಲ್ಲೂ ಡ್ರಗ್ಸ್ ವಿರುದ್ಧದ ಭಿತ್ತಿಪತ್ರಗಳನ್ನು ಅಂಟಿಸಿ ಜಾಗೃತಿ ಮೂಡಿಸಿದ್ದಾರೆ.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.