ಉಳ್ಳಾಲ(ವಿಶ್ವಕನ್ನಡಿಗ ನ್ಯೂಸ್): ನಿಂತಿದ್ದ ಬಸ್ ಗೆ ಹಿಂದಿನಿಂದ ಬಂದ ಬೈಕ್ ಢಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರರಿಬ್ಬರು ಗಾಯ ಗೊಂಡ ಘಟನೆ ಉಳ್ಳಾಲ ಠಾಣೆ ವ್ಯಾಪ್ತಿಯ ಉಚ್ಚಿಲ. ರಾಷ್ಟ್ರೀಯ ಹೆದ್ದಾರಿಯಲ್ಲಿ ರವಿವಾರ ಮಧ್ಯಾಹ್ನ ನಡೆದಿದೆ.
ತಲಪಾಡಿಯಿಂದ ಮಂಗಳೂರು ಕಡೆಗೆ ಹೋಗುತ್ತಿದ್ದ ಬಸ್ ಉಚ್ಚಿಲ ಬಳಿ ನಿಂತಿತ್ತು. ತಲಪಾಡಿ ಟೋಲ್ ನಲ್ಲಿ ಕೆಲಸ ಮಾಡುವ ಇಬ್ಬರು ಸಿಬ್ಬಂದಿ ಊಟಕ್ಕೆಂದು ಇದೇ ವೇಳೆ ತೆರಳುತ್ತಿದ್ದಾಗ ಉಚ್ಚಿಲ ಬಳಿ ಸ್ಕಿಡ್ ಆಗಿ ಬಸ್ ಗೆ ಹಿಂದಿನಿಂದ ಢಿಕ್ಕಿಯಾಗಿದೆ. ಡಿಕ್ಕಿರಭಸಕ್ಕೆ ಬೈಕ್ ಸಂಪೂರ್ಣ ಬಸ್ ಅಡಿಯಲ್ಲಿತ್ತು.
ಅದೃಷ್ಟವಶಾತ್ ಬೈಕ್ ಸವಾರ ಆಂಧ್ರ ಮೂಲದ ಚಂದ್ರ ಶೇಖರ್ ರೆಡ್ಡಿ ಹಾಗು ಅಮೀ ಪಾಶಾ ಎಂಬವರು ಗಾಯಗೊಂಡಿದ್ದಾರೆ. ಈ ಬಗ್ಗೆ ಇಲ್ಲಿನ ಗ್ರಾಮಾಂತರ ಸಂಚಾರಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಮುಂದಿನ ತನಿಖೆ ನಡೆಸುತ್ತಿದ್ದಾರೆ.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.