ಮಾಲೂರು (ವಿಶ್ವ ಕನ್ನಡಿಗ ನ್ಯೂಸ್): ತ್ರಿರಾಜ್ಯಗಳಲ್ಲಿ ರಕ್ತದಾನ, ನೇತ್ರದಾನ, ಹಾಗೂ ಸಮಾಜಸೇವೆ ಮಾಡುತ್ತಿರುವ ರಾಜ್ಯದ ನಂ- 1 ಫೌಂಡೇಶನ್ ವಿಶ್ವಮಾನವ ಕುವೆಂಪು ಫೌಂಡೇಶನ್ (ರಿ.) VKF ವತಿಯಿಂದ “ಅನ್ನ, ನೀರು ನೀಡಿ ಹಸಿವು ನಿಗಿಸುವ” ಕಾರ್ಯವನ್ನು ಇಂದು ಮಾಲೂರು ಪಟ್ಟಣ್ಣದ ರೈಲ್ವೇ ನಿಲ್ದಾಣ, ಬ್ರಿಡ್ಜ್ ಭಾಗದ ಹದಿಬದಿಯಲ್ಲಿರುವವರಿಗೆ ಊಟ ನೀಡುವ ಕಾರ್ಯ ಮಾಡಲಾಯಿತು.
ವಿಶೇಷ ಕಾರ್ಯಕ್ರಮದಲ್ಲಿ ಸಮಾಜಮುಖಿ ಚಿಂತನೆ ಇರುವ ಮಾಲೂರಿನ ರಾಮಣ್ಣ ರವರು ಮಾತನಾಡುತ್ತಾ “ಅನ್ನ, ನೀರು ನೀಡಿ ಹಸಿವು ನಿಗಿಸುವ ಹಾಗೂ ಸಮಾಜದ ಬಗ್ಗೆ ಉತ್ತಮ ಚಿಂತನೆ ಹೊಂದಿರುವ VKF ಪ್ರತಿ ದಿನ ಒಂದಲ್ಲಾ ಒಂದು ಉತ್ತಮ ಕಾರ್ಯಕ್ರಮಗಳನ್ನು ಮಾಡುವ ಮೂಲಕ ಜನಮಾನಸದಲ್ಲಿ ಚಿರಸ್ಥಾಯಿಯಾಗಿ ನೆಲೆಸಿದೆ, ಹಾಗೇ ಜೀವ ಉಳಿಸುವ ರಕ್ತದಾನದ ಕಾರ್ಯಕ್ರಮ ರಾಜ್ಯದ ಅನೇಕ ಜನರ ಜೀವ ಉಳಿಸುವ ಕಾರ್ಯ ಮಾಡಿದೆ, ಸಂಸ್ಥೆಯ ಜೊತೆಗೆ ನಾವು ಸಹ ಸದಾ ಉತ್ತಮ ಕಾರ್ಯಗಳಿಗೆ ಸ್ಪಂದಿಸುವ ಮೂಲಕ ಬೆಂಬಲಿಸುವೆವು” ಎಂದರು.
ಅನ್ನ ನೀರು ನೀಡುವ ಕಾರ್ಯಕ್ರಮದಲ್ಲಿ ಮಾತನಾಡಿದ ವಿಶ್ವಮಾನವ ಕುವೆಂಪು ಫೌಂಡೇಶನ್ (ರಿ.) VKF ರಾಜ್ಯ ಅಧ್ಯಕ್ಷ ಹಾಗೂ ಯುವಕವಿ ಲಕ್ಕೂರು ಎಂ.ನಾಗರಾಜ್ ಮಾತನಾಡಿ “ಬಡವರಿಗೆ, ನಿರ್ಗತಿಕರಿಗೆ, ರಸ್ತೆ ಹದಿ ಬದಿಯಿರುವ ಜನರಿಗೆ ಒಂದು ಹೊತ್ತಿನ ಊಟ, ನೀರು ನೀಡಿ ನಮ್ಮಿಂದಾಗುವ ಸಹಾಯ ಮಾಡುವ ಆಶಯದ ಹಾದಿಯಲ್ಲಿ VKF ಸಾಗುತ್ತಿದೆ. ಒಂದು ಹೊತ್ತಿನ ಊಟಕ್ಕೂ ಪರದಾಡುತ್ತಿರುವ ಜನರ ಕಷ್ಟಕ್ಕೆ ನೆರವಾಗುವ ಮೂಲಕ ಹಸಿವು ನಿಗಿಸುವ ಕಾರ್ಯ ಮಾಡುತ್ತಿದ್ದೀವಿ. ನಮ್ಮಯ ನಿಸ್ವಾರ್ಥ ಕಾರ್ಯಗಳಿಂದ ಬಡ ಜನರಿಗೆ ಸಹಾಯ ಮಾಡುವುದೇ ನಮ್ಮ ಪ್ರಮುಖ ಗುರಿ. ಈ ಕಾರ್ಯಕ್ಕೆ ತಾವು ಸಹ ಕೈ ಜೋಡಿಸುವ ಮೂಲಕ ನಮ್ಮ ಕಾರ್ಯಚಟುವಟಿಕೆಗಳ ಜೊತೆಗೆ ಭಾಗಿಯಾಗಬಹುದು” ಎಂದರು.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.