ಅಬುದಾಬಿ (ವಿಶ್ವ ಕನ್ನಡಿಗ ನ್ಯೂಸ್) : ಸಾಮಾಜಿಕ ಕಾರ್ಯದಲ್ಲಿ,ತನ್ನ ನಿರಂತರ ಸೇವೆಯನ್ನು ಅನಿವಾಸಿ ಕನ್ನಡಿಗರಿಗೆ ನೀಡುತ್ತಾ ಬಂದಂತಹ ಅನಿವಾಸಿ ಕನ್ನಡಿಗರ ಒಕ್ಕೂಟ ಯು ಏ ಈ.ಅಬುದಾಬಿ ವತಿಯಿಂದ ರಕ್ತದಾನ ಶಿಬಿರ ದಿನಾಂಕ 06-08-2021 ಖಾಲಿದಿಯ ಬ್ಲಡ್ ಬ್ಯಾಂಕ್ ಅಬುದಾಬಿ ಇದರ ಸಹಯೋಗದೊಂದಿಗೆ ನಡೆಯಿತು.
ಕಾರ್ಯಕ್ರಮದ ನೇತೃತ್ವ ವಹಿಸಿದ್ದ ಅನಿವಾಸಿ ಕನ್ನಡಿಗರ ಒಕ್ಕೂಟದ, ಮಹಮ್ಮದ್ ಶರೀಫ್ ಸರ್ವೆಯವರು ರಕ್ತದಾನ ನೀಡುವ ಮನೋಭಾವವು, ಮಾನವೀಯತೆಯ ಮೌಲ್ಯವನ್ನು ಹೆಚ್ಚಿಸುವುದು ಅಲ್ಲದೆ, ರಕ್ತದಾನವು ಇನ್ನೊಂದು ಜೀವದ ರಕ್ಷಣೆಗೂ ಸಹಕಾರಿ ಆಗಿರುತ್ತದೆ ಎಂಬ ಸಂದೇಶದೊಂದಿಗೆ ಸ್ವತಃ ರಕ್ತ ದಾನ ನೀಡುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ರಕ್ತದಾನ ಶಿಬಿರ ಮದ್ಯಾಹ್ನ 2 ಗಂಟೆಯಿಂದ ರಾತ್ರಿ 7 ಗಂಟೆಯ ತನಕ ಸರಿಸುಮಾರು 42 ರಕ್ತದಾನಿಗಳು ರಕ್ತದಾನ ಮಾಡುವ ಮೂಲಕ ಕಾರ್ಯಕ್ರಮವನ್ನು ಯಶಸ್ವಿ ಗೊಳಿಸಿದರು.
ಖಾಲಿದಿಯಾ ಬ್ಲಡ್ ಬ್ಯಾಂಕ್ ಅಬುದಾಬಿ ಅನಿವಾಸಿ ಕನ್ನಡಿಗರ ಒಕ್ಕೂಟ ಯು ಏ ಈ ಅಬುದಾಬಿ ಇವರ ಕಾರ್ಯ ವೈಖರಿಯನ್ನು ಶ್ಲಾಘೀಸಿದೆ.
ಅನಿವಾಸಿ ಕನ್ನಡಿಗರ ಒಕ್ಕೂಟ. ಯು ಏ. ಈ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.