ಕುಂದಾಪುರ,(ವಿಶ್ವ ಕನ್ನಡಿಗ ನ್ಯೂಸ್ ): ವಿಶ್ವ ಕುಂದಾಪ್ರ ಕನ್ನಡ ದಿನಾಚರಣೆ ಪ್ರಯುಕ್ತ ಕೋಟದ ಮೂಡು ಗಿಳಿಯಾರಿನಲ್ಲಿ ಜನಸೇವಾ ಟ್ರಸ್ಟ್ ಆಶ್ರಯದಲ್ಲಿ ಅಶೋಕ್ ನೀಲಾವರ ಕ್ರೀಡಾಂಗಣದಲ್ಲಿ ‘ಕೆಸರಂಗ್’ ‘ಕ್ರೀಡಾಕೂಟ ಜರಗಿತು.ಖ್ಯಾತ ಕಾರ್ಟೋನಿಸ್ಟ್ ಪ೦ಜು ಗಂಗೊಳ್ಳಿಯವರು ಭೂಮಿ ತಾಯಿಗೆ ಪೂಜೆ ಸಲ್ಲಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಈ ಸಂದರ್ಭ ಮಕ್ಕಳು, ಹಿರಿಯರು ಕೆಸರುಗದ್ದೆಯ ವಿವಿಧ ಆಟೋಟದಲ್ಲಿ ಭಾಗವಹಿಸಿ ಖುಷಿ ಪಟ್ಟರು.ಕುಂದಾಪ್ರ ಕನ್ನಡದ ರಾಯಬಾರಿ ಮನು ಹಂದಾಡಿ .ವೈದ್ಯಾಧಿಕಾರಿ ಡಾ|ನಾಗೇಶ್, ಜೈ ಭಾರ್ಗವ ಬಳಗದ ರಾಜ್ಯಾಧ್ಯಕ್ಷ ಆಜಿತ್ ಶೆಟ್ಟಿ ಕಿರಾಡಿ, ಉಡುಪಿ ಜಿಲ್ಲ ಕಸಾಪ ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗ, ಸಾಹಿತಿ ನರೇಂದ್ರ ಕುಮಾರ್ ಕೋಟ ,ಉದಯ ಶೆಟ್ಟಿ ಪಡುಕರೆ, ಪ್ರವೀಣ್ ಯಕ್ಷಿಮಠ, ವಸಂತ್ ಗಿಳಿಯಾರು, ಜನಸೇವಾ ಟ್ರಸ್ಟ್ನ ಸದಸ್ಯರು ಮತ್ತಿತರರು ಉಪಸ್ಥಿತರಿದ್ದರು .
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.