ಉಡುಪಿ (ವಿಶ್ವ ಕನ್ನಡಿಗ ನ್ಯೂಸ್ ):ಶಂಕರನಾರಾಯಣ ಮದರ್ ತೆರೆಸ್ಸಾ ಮೆಮೊರಿಯನ್ ಆಂಗ್ಲ ಮಾಧ್ಯಮ ಸ್ಕೂಲ್ ನ ಹತ್ತನೆಯ ತರಗತಿಯ ವಿದ್ಯಾರ್ಥಿನಿ ಅನು ಶ್ರೀ ಶೆಟ್ಟಿ ಈ ಬಾರಿಯ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ625 ಕ್ಕೆ 625ಅಂಕ ಗಳಿಸುವ ಮೂಲಕ ಕೀರ್ತಿ ಗಳಿಸಿದ್ದಾಳೆ.ಹೆಬ್ರಿ ತಾಲೂಕಿನ ಅರಸಮ್ಮನ ಖಾನು ನಿವಾಸಿ ಭುಜಂಗ ಶೆಟ್ಟಿ ಹಾಗೂ ಪರೀಕ ವಿಮಲಾ ಬಿ ಶೆಟ್ಟಿ ದಂಪತಿಯ ಏಕೈಕ ಸುಪುತ್ರಿಯಾಗಿದ್ದಾಳೆ .ತಂದೆ ಕುಂದಾಪುರ ತಾಲೂಕಿನ ಹೊಸಂಗಡಿ ಗ್ರಾಮದ ಕರ್ನಾಟಕ ವಿದ್ಯುತ್ ನಿಗಮ ನೌಕರರ ಸಹಕಾರಿ ಸಂಘದ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಯಾಗಿದ್ದಾರೆ. ತಾಯಿ ಗ್ರಹಿಣಿ ಸಿದ್ದಾಪುರ ಸಮೀಪದ ಜನ್ಸಾಲೆಯಲ್ಲಿ ವಾಸಿಸುತ್ತಿದ್ದಾರೆ.
ಶಿಕ್ಷಕ ವ್ರoದವರು, ತಂದೆ ತಾಯಿಯಯವರ ಸಹಕಾರ ದಿಂದ ನಿರಂತರ ಅಭ್ಯಾಸದೊಂದಿಗೆ ಉತ್ತಮ ಅಂಕ ಗಳಿಸಿ ,ಶ್ರೇಷ್ಠ ಸ್ಥಾನ ಪಡೆಯಲು ಸಾಧ್ಯವಾಗಿದೆ ಪಿಸಿಎಂಬಿ ಕೋರ್ಸ್ ಮೂಲಕ ವೈದ್ಯಕೀಯ ವೃತ್ತಿಯಲ್ಲಿ ತೊಡಗಿಸಿ ಕೊಳ್ಳುವ ಆಸೆಯಿದೆ -ಅನುಶ್ರೀ ಶೆಟ್ಟಿ.
ಒಟ್ಟಾರೆ ಹೀಗೆ ಒಟ್ಟು 11ವಿದ್ಯಾರ್ಥಿಗಳು 625 ಕ್ಕೆ 625ಅಂಕ ಪಡೆಯುವದ ಮೂಲಕ ಜಿಲ್ಲೆಯಲ್ಲಿ ಇತಿಹಾಸ ಸ್ರಷ್ಟಿಸಿದ್ದಾರೆ . ಸ.ಪ.ಪೂ ಕಾಲೇಜು ಒಳಕಾಡು ಇದರ ಅಭೀಷೇಕ ಜಯಂತ ಹೊಳ್ಳ, ವಿ ಕೆ ಆರ್ ಆಚಾರ್ಯ ಕುಂದಾಪುರ ಇದರ ಅನುಶ್ರೀ ಶೆಟ್ಟಿ, ಮದರ್ ತೆರೆಸಾ ಶಾಲೆ ಶಂಕರನಾರಾಯಣದ ಇದರ ಅನುಶ್ರೀ ಶೆಟ್ಟಿ, ಟಿ ಎ ಪೈ ಕುಂಜಿಬೆಟ್ಟು ಇಲ್ಲಿನ ನವನೀತ ಎಸ್ ರಾವ್, ವಿ ಕೆ ಆರ್ ಆಚಾರ್ಯ ಕುಂದಾಪುರದ ಪ್ರಣೀತ, ಅನಂತೇಶ್ವರ ಶಾಲೆ ಉಡುಪಿ ಇದರ ಪ್ರತೀಕ್ಷಾ ಪೈ, ಸಪಪೂ ಬಾಲಕಿಯರ ಕಾಲೇಜು ಉಡುಪಿ ಇದರ ಸಮತಾ ಎಚ್ ಎಸ್, ನಾರಾಯಣ ಗುರು ಶಾಲೆ ಮಲ್ಪೆ ಇದರ ಸಾತ್ವಿಕ ಪಿ ಭಟ್, ಸ್ಟೆಲ್ಲಾ ಮೇರಿಸ್ ಶಾಲೆ ಗಂಗೊಳ್ಳಯ ಶ್ರೇಯಾ, ವಿವೇಕ ಶಾಲೆ ಕೋಟ ಇದರ ಶ್ರೀನಿಧಿ, ವಿಕೆ ಆರ್ ಆಚಾರ್ಯ ಕುಂದಾಪುರದ ಸೃಜನ್ ಭಟ್ ಆರ್ 625 ಕ್ಕೆ 625 ಅಂಕ ಗಳಿಸಿದ್ದಾರೆ.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.