ಮಾಲೂರು (ವಿಶ್ವ ಕನ್ನಡಿಗ ನ್ಯೂಸ್):ಮಾಲೂರು ತಾಲ್ಲೂಕಿನಲ್ಲಿ 2020-2021 ನೇ ಸಾಲಿನಲ್ಲಿ ನಡೆದ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ತಾಲ್ಲೂಕಿಗೆ ಪ್ರಥಮ ಸ್ಥಾನ ಪಡೆದ ಕುಮಾರಿ ವರ್ಷೀಣಿ ರವರಿಗೆ ಹುಲಿಮಂಗಲ ಹೊಸಕೋಟೆ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಶ್ರೀಮತಿ ರಾಧಮ್ಮ ನಾಗರಾಜ್ (mss) ರವರು ಅವರ ನಿವಾಸದಲ್ಲಿ ಅಭಿನಂದನೆ ಅರ್ಪಿಸಿ ಶುಭ ಹಾರೈಸಿದ್ದಾರೆ.
ಅಭಿನಂದನಾ ಕಾರ್ಯಕ್ರವನ್ನು ಮಾಡಿದ ಹುಲಿಮಂಗಲ ಹೊಸಕೋಟೆ ಗ್ರಾಮ ಪಂಚಾಯಿತಿ ಅಧ್ಯಕ್ಷರು, ಹಾಗೂ ಸಮಾಜ ಸೇವಕರಾದ MSS ನಾಗರಾಜ್ ರವರು ಮಾತನಾಡಿ ” ಮಾಲೂರು ತಾಲ್ಲೂಕಿನಲ್ಲಿಯೇ ಅಧಿಕ ಅಂಕ ಪಡೆದ ಲಕ್ಕೂರು ಸರ್ಕಾರಿ ಪದವಿ ಪೂರ್ವ ಕಾಲೇಜಿನ ಫ್ರೌಡ ಶಾಲಾ ವಿಭಾಗದ ಹಳ್ಳಿ ಪ್ರತಿಭೆ ಕುಮಾರಿ ವರ್ಷಿಣಿ.ವಿ 625 ಕ್ಕೆ 623 ಅಂಕ ಪಡೆಯುವ ಮೂಲಕ ತಾಲ್ಲೂಕಿಗೆ ಅದರಲ್ಲೂ ನಮ್ಮ ಪುರ ಗ್ರಾಮಕ್ಕೆ ಉತ್ತಮ ಹೆಸರು ತಂದಿರುವುದು ಬಹಳ ಸಂತಸ ಮೂಢಿಸಿದೆ. ಎಲ್ಲಾ ಶಿಕ್ಷಕರ ಉತ್ತಮ ಸಹಕಾರದ ಮೂಲಕ ಇಂದು ಗ್ರಾಮೀಣ ಭಾಗದ ವಿದ್ಯಾರ್ಥಿನಿಯ ಸಾಧನೆಗೆ ಸಂತಸ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ಮಾತನಾಡಿದ ಎಸ್.ಎಸ್.ಎಲ್.ಸಿ ಟಾಪರ್ ಕುಮಾರಿ ವರ್ಷಿಣಿ.ವಿ “ನಮ್ಮ ಶಾಲೆಯ ಎಲ್ಲಾ ಶಿಕ್ಷಕರ ಉತ್ತಮ ಉಪನ್ಯಾಸ, ಸಹಕಾರ, ಪ್ರೋತ್ಸಾಹದ ಫಲವಾಗಿ ಅಧಿಕ ಅಂಕ ಪಡೆಯಲು ಸಾಧ್ಯವಾಯಿತು, ಜೊತೆಗೆ ನಮ್ಮ ತಂದೆ-ತಾಯಿ ಸ್ನೇಹಿತರ ಮಾರ್ಗದರ್ಶನದ ಫಲವಾಗಿ ಈ ಎಲ್ಲಾ ಸಾಧನೆ” ಎಂದರು.
ಕಾರ್ಯಕ್ರಮದಲ್ಲಿ ಕುಮಾರಿ ವರ್ಷೀಣಿ ರವರ ತಂದೆ ವೀರಭದ್ರಪ್ಪ, ಶ್ರೀಮತಿ ಮಂಜುಳಮ್ಮ, ಗ್ರಾಮ ಪಂಚಾಯಿತಿ ಸದಸ್ಯರಾದ ಎಸ್.ನಾರಾಯಣಸ್ವಾಮಿ, ಶ್ರೀಮತಿ ತಾರಾ ಅಶ್ವಿನಿ ಶ್ರೀನಾಥ್, ಯುವಕರಾದ ಪುರ ಮಲ್ಲೇಶ್, ಲೋಕೇಶ್, ಇತರರು ಹಾಜರಿದ್ದರು.
ವರದಿ: ಲಕ್ಕೂರು ಎಂ.ನಾಗರಾಜ್
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.