(www.vknews.com) : ಕಾಂಗ್ರೇಸ್ ನಾಯಕರ ಕುರಿತು ಅವಾಚ್ಯ ಶಬ್ದ ಪ್ರಯೋಗ ಮಾಡಿದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಸಚಿವ ಕೆ ಎಸ್ ಈಶ್ವರಪ್ಪನವರು ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದಾರೆ, ಇದು ಅವರ ಪಕ್ಷದ ಸಂಸ್ಕೃತಿಯನ್ನು ತೋರಿಸುತ್ತದೆ ಎಂದು ಕೆ ಪಿ ಸಿ ಸಿ ಮಾಜಿ ಕಾರ್ಯದರ್ಶಿ ಟಿ ಎಂ ಶಹೀದ್ ತೆಕ್ಕಿಲ್ ಟೀಕಿಸಿದ್ದಾರೆ.
ಪದೇ ಪದೇ ಮುಸ್ಲಿಮರನ್ನು ಟೀಕಿಸುವ ಈಶ್ವರಪ್ಪನವರಿಗೆ ಸಂಸ್ಕಾರ, ಸಂಸ್ಕೃತಿಯೇ ಗೊತಿಲ್ಲ ಅವರು ಕೂಡಲೆ ತಮ್ಮ ಮಾತನ್ನು ವಾಪಸ್ ಪಡೆದುಕೊಳ್ಳ ಬೇಕೆಂದು ಟಿ ಎಂ ಶಹೀದ್ ತೆಕ್ಕಿಲ್ ಆಗ್ರಹಿಸಿದರು.
ಬೊಮ್ಮಾಯಿ ಸರಕಾರವು ಮತ್ತು ಗೊತ್ತು ಗುರಿ ಇಲ್ಲದ ಸರಕಾರ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿ ಕೊಂಡಾಗಿನಿಂದ ಭಿನ್ನಮತವನ್ನು ಸರಿಪಡಿಸಲು ಸಾದ್ಯವಾಗದ ಮುಖ್ಯಮಂತ್ರಿ. ರಾಜ್ಯದ ಆಡಳಿತವನ್ನು ಹೇಗೆ ನಡೆಸಬಹುದು ಎಂದು ಪ್ರಶ್ನಿಸಿದ ಟಿ ಎಂ ಶಹೀದ್ ತೆಕ್ಕಿಲ್ ರವರು ಸರಕಾರದಲ್ಲಿ ಕೋಳಿ ಮೊಟ್ಟೆ ಹೆಸರಿನಲ್ಲಿ 25 ಲಕ್ಷ ರೂಪಾಯಿ ಭ್ರಷ್ಟಾಚಾರವನ್ನು ಮಾಡಿದ ಜೊಲ್ಲೆ ಯಂತವರನ್ನು ಮಂತ್ರಿ ಮಾಡಿದ ಇವರಿಂದ ಯಾವ ತರದ ಆಡಳಿತವನ್ನು ನಿರೀಕ್ಷಿಸಬಹುದು. ಆದುದರಿಂದ ಈ ಸರಕಾರ ಕೂಡಲೆ ತೊಲಗಬೇಕೆಂದು ಟಿ ಎಂ ಶಹೀದ್ ತೆಕ್ಕಿಲ್ ಹೇಳಿದರು.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.