(www.vknews.com) : ಊರಿಗೆ ಒಬ್ಬ ರಾಜ ಇದ್ರೆ ಆ ರಾಜ್ಯ ಸುಭಿಕ್ಷೆಯಿಂದ ಇರ್ತದೆ ಅಂದ್ರೆ ಯಾರೂ ನಂಬೋಲ್ಲ ಕಾರಣ ಆ ರಾಜ ಮಾತ್ರ ರಾಜತಾಂತ್ರಿಕ ವಿಚಾರದಲ್ಲಿ ಮಾತ್ರ ಶಿಕ್ಷಿತ. ಉಳಿದ ಪ್ರಜಾ ಪರಿವಾರ ಅಶಿಕ್ಷಿತರಾದರೆ ರಾಜ ಹೇಳಿದ್ದೆ ವೇದವಾಕ್ಯ. ಅದೇ ಆ ರಾಜ್ಯದಲ್ಲಿ ಒಂದು ಶಿಕ್ಷಣ ಕಲಿಸುವ ಶಾಲೆ ಒಂದಿದ್ದರೆ ಆ ರಾಜ್ಯಕ್ಕೆ ರಾಜನ ಅವಶ್ಯಕತೆ ಇಲ್ಲ.
ಹೇಳಿ ಕೇಳಿ ಕರ್ನಾಟಕ ಕರಾವಳಿ ಶಿಕ್ಷಿತರ ಜಿಲ್ಲೆ. ಅದೆಷ್ಟೋ ವಿದ್ಯಾ ದೇಗುಲಗಳು ಇಂದು ಸಹಸ್ರಾರು ಸುಶಿಕ್ಷಿತರನ್ನು ಹುಟ್ಟುಹಾಕಿದ ಉದಾಹರಣೆ ನಮ್ಮೆದುರೇ ಸಾಕಷ್ಟಿದೆ. ಅಂತಹ ವಿದ್ಯಾ ದೇಗುಲಗಳ ಸಾಲಿನಲ್ಲಿ ಮಾದರಿ ಸರ್ಕಾರಿ ಪ್ರೌಢ ಶಾಲೆ, ಸಿದ್ದಾಪುರ ಕೂಡ ಒಂದು. ಈ ವಿದ್ಯಾ ದೇಗುಲದಲ್ಲಿ ಕಲಿತು ನಾಡಿನ ಉದ್ದಗಲದಲ್ಲೂ ತಮ್ಮದೇ ಯಶಸ್ಸನ್ನು ಕಂಡು ಕಂಡವರು ಅದಿಕರು.
ಖಾಸಗಿ ಶಿಕ್ಷಣ ಸಂಸ್ಥೆಗಳು ರಾರಾಜಿಸುವ ಇಂದಿನ ದಿನಮಾನಗಲ್ಲಿ ಸರ್ಕಾರಿ ಶಾಲೆ ಒಂದು ಗರಿಷ್ಟ ಪ್ರಮಾಣದಲ್ಲಿ ವಿದ್ಯಾರ್ಥಿಗಳನ್ನು ತನ್ನತ್ತ ಸೆಳೆಯುತ್ತಿದೆ ಎಂದರೆ ಆ ಸಂಸ್ಥೆಯ ಶೈಕ್ಷಣಿಕ ಸಾಮರ್ಥ್ಯ ಎಷ್ಟಿದೆ ಎನ್ನುವುದು ಶಾಲೆಯ ಸರ್ವೋತೋಮುಕ ಬೆಳವಣಿಗೆ ಕಾರಣಿ ಭೂತರಾದ ಅಲ್ಲಿ ಕಲಿತ ವಿದ್ಯಾರ್ಥಿ ಬಳಗ, ಶಿಕ್ಷಕರ ವೃಂದ, ಊರ ಪರವೂರರ ನಿಷ್ಕಲ್ಮಶ ಇಚ್ಛಾಸಕ್ತಿಯೇ ಮೂಲ ಕಾರಣ.
ಇಂತಹ ಮೇರು ವಿದ್ಯಾ ದೇಗುಲದ ಮಾದರಿ ಪ್ರತಿಮೆ ಯನ್ನು ಸಿದ್ದಾರ್ಥ್ ಜನ್ಸಾಲೆ ಇವರ ಕರದಲ್ಲಿ ಅರಳಿ ನಿಂತಿದೆ. ಸಿದ್ದಾರ್ಥ್ ಜನ್ಸಾಲೆ ಇವರು ರಾಮ ಪೂಜಾರಿ ಹಾಗೂ ಜಾನಕಿ ಪೂಜಾರಿಯವರ ಪುತ್ರ, ಅವರ ಈ ಕರ ಕೌಶಲ್ಯಕ್ಕೆ ಸಮಸ್ತರ ಬೆಂಬಲ, ಪ್ರೋತ್ಸಾಹ ಅನವರತ ಇರಲಿ ಎಂದು ಆಶಿಸೋಣ..
ಒಂದೆಡೆ ಮಲೆನಾಡಿನ ಒಡಲು ಇನ್ನೊಂದೆಡೆ ಕರಾವಳಿ ಕಡಲು ಕುಂದ ಕನ್ನಡಿಗರಿಗೆ ಪ್ರತಿಸ್ವರ್ಗ ಕುಂದಾಪುರ ಮಲೆನಾಡ ಕರಾವಳಿಗೆ ಕೊಂಡಿ ಸಿದ್ದಾಪುರ ಹೆಮ್ಮರವಾಗಿ ಬೆಳೆದು ನಿಂತಿದೆ ಸಿದ್ದಾಪುರ ಪ್ರೌಢ ಶಾಲೆ ಆ ಸಂಸ್ಥೆಪ್ರತಿಮೆಯ ಸೃಷ್ಟಿಕರ್ತ ಸಿದ್ದಾರ್ಥ ಜನ್ಸಾಲೆ
ಪ್ರಧಾನ ಸಂಪಾದಕರು, ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.