ಮಾಲೂರು (ವಿಶ್ವ ಕನ್ನಡಿಗ ನ್ಯೂಸ್): ಮಾಲೂರು ಪಟ್ಟಣ್ಣದ ಹೊಸೂರು ಮಾರ್ಗವಾಗಿ ಸಂಚರಿಸುವ ಆಂಜನೇಯ ಸ್ವಾಮಿ ದೇವಾಲಯದ ಪ್ರಾರಂಭದಲ್ಲಿ ನಿಂತ ಲಾರಿ, ಪ್ರಯಾಣಿಕರ ದಿನನಿತ್ಯದ ಕೆಲಸ ಕಾರ್ಯಗಳಿಗೆ ಅಡ್ಡಿ ಮಾಡಿತು.
ಮಾಲೂರು ಪಟ್ಟಣ್ಣದ ಒಳ ಪ್ರವೇಶ ಮಾಡುತ್ತಿದ್ದ ಲಾರಿ ಏಕಏಕಿ ನಿಂತ ಕಾರಣ ಇಂದು ಬೆಳಿಗ್ಗೆ 8-30 ರಿಂದ 10-30 ಸಮಯದವರೆಗೆ ಸುಮಾರು ಎರಡು ಗಂಟೆಗಳ ಕಾಲ ವಾಹನಗಳ ಸಂಚಾರಕ್ಕೆ ಅಡ್ಡಿ ಉಂಟಾಯಿತು. ಸರಿಸುಮಾರು 2-3 ಕಿ.ಮೀ ಟ್ರಾಫಿಕ್ ದಟ್ಟಣೆ ಉಂಟಾಗಿ ಸಾರ್ವಜನಿಕರಿಗೆ ಕಿರಿ ಕಿರಿ ಉಂಟಾಯಿತು.
ಈ ಮಾಹಿತಿ ಪಡೆದ ಮಾಲೂರು ಪೊಲೀಸ್ ಠಾಣೆಯ ಸಬ್ ಇನ್ಸಪೆಕ್ಟರ್ ಅನೀಲ್ ಕುಮಾರ್ ರವರು ಸ್ಥಳಕ್ಕೆ ಧಾವಿಸಿ ಟ್ರಾಫಿಕ್ ನಿಯಂತ್ರಣ ಮಾಡುವಲ್ಲಿ ತನ್ನ ಪೊಲೀಸ್ ಸಿಬ್ಬಂದಿಯ ಜೊತೆಗೆ ಯಶಸ್ವಿಯಾದರು.
ಈ ಬಗ್ಗೆ ಮಾತನಾಡಿದ ಸಬ್ ಇನ್ಸಪೆಕ್ಟರ್ ಅನೀಲ್ ಕುಮಾರ್ “ಮರಗಳನ್ನು ತುಂಬಿದ ಲಾರಿ ಕೆಟ್ಟು ನಿಂತ ಪರಿಣಾಮ, ರೈಲ್ವೇ ಸೇತುವೆಯ ಮೇಲೆ ಹೆಚ್ಚು ಟ್ರಾಫೀಕ್ ದಟ್ಟಣೆ ಉಂಟಾಗಿದೆ, ಕೂಡಲೇ ನಾವು ನಮ್ಮ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಸಾರ್ವಜನಿಕರ ವಾಹನಗಳ ಒಡಾಟಕ್ಕೆ ಸೂಕ್ತ ಅನುವು ಮಾಡಿಕೊಟ್ಟೆವು, ಸಾರ್ವಜನಿಕರ ಸ್ಪಂದನೆಯೂ ನಮಗೆ ತೊರೆದಿದ್ದು ಸಂತಸ, ಟ್ರಾಫೀಕ್ ಕಿರಿ ಕಿರಿ ತಪ್ಪಿಸಲು ಕಾಮಗಾರಿ ನಡೆದು ಸಿದ್ದ ಇದ್ದ ಸಿಮೆಂಟ್ ರಸ್ತೆ ಮೇಲೆ ವಾಹನ ಬಿಟ್ಟ ಕಾರಣ ಸಮಸೈ ಹೆಚ್ಚು ಉದ್ಬವಿಸಿಲ್ಲ” ಎಂದರು.
ಈ ಸಂದರ್ಭದಲ್ಲಿ ಮಾಲೂರಿನ ಪೊಲೀಸ್ ಇಲಾಖೆಯ ಎಲ್ಲಾ ಸಿಬ್ಬಂದಿ ವರ್ಗ ನಮ್ಮೊಂದಿಗೆ ಸಹಕರಿಸಿ ಹೆಚ್ಚು ಸಂಚಾರ ದಟ್ಟಣೆ ತಪ್ಪಿಸಿ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದ್ದು ವಿಶೇಷ ಎನ್ನುತ್ತಾರೆ ಪೊಲೀಸ್ ಅಧಿಕಾರಿಗಳು.
ಟ್ರಾಫೀಕ್ ದಟ್ಟಣೆ ನಿಯಂತ್ರಣ ಮಾಡಿದ ಮಾಲೂರು ಪೊಲೀಸ್ ಇಲಾಖೆಯ ಅನೇಕರು ಸಾಥ್ ನೀಡಿದ್ದು ವಿಶೇಷ.
ಕೂಡಲೇ ರಸ್ತೆ ಕಾಮಗಾರಿ ಪೂರ್ಣಗೋಳಿಸಿ ಸಾರ್ವಜನಿಕರ ಅನುಕೂಲಕ್ಕೆ ಸ್ಪಂದಿಸಬೇಕೆಂದು ಸಾರ್ವಜನಿಕರು ಮನವಿ ಮಾಡಿದ್ದಾರೆ.
ವರದಿ: ಲಕ್ಕೂರು ಎಂ.ನಾಗರಾಜ್
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.