ಪುತ್ತೂರು(www.vknews.in): ತಾಲಿಬಾನಿಗಳ ಕುರಿತು ದಿನದಿಂದ ದಿನಕ್ಕೆ ಬೀಭತ್ಸ ಸುದ್ದಿಗಳನ್ನು ಸುದ್ದಿಗಳನ್ನು ಪ್ರಸಾರಮಾಡಲು ಪೈಪೋಟಿ ಮಾಡುತ್ತಿರುವ ದೇಶದ ಮಾದ್ಯಮಗಳನ್ನು ನೋಡುವಾಗ ಯಾವುದೇ ಒಂದು ಅಜೆಂಡಾವನ್ನಿಟ್ಟು ವರದಿಗಾರಿಕೆ ಮಾಡುವಂತೆ ತೋರುತ್ತದೆ ಎಂದು ಮಿತ್ತೂರು ಖತೀಬರಾದ ಮಜೀದ್ ದಾರಿಮಿಯವರು ತಮ್ಮ ಜುಮುಅಃ ಭಾಷಣದಲ್ಲಿ ಹೇಳಿದರು. ತಾಲಿಬಾನ್ ನ ಹೆಸರನ್ನು ಬಳಸಿ ಇಸ್ಲಾಂ ಮತ್ತು ಮುಸ್ಲಿಂಮರನ್ನು ಭಯೋತ್ಪಾದಕರನ್ನಾಗಿ ಚಿತ್ರಿಸುವ ಹುನ್ನಾರ ನಡೆಯುತ್ತದೆ ಎಂದ ಅವರು ತಾಲಿಬಾನ್ ನ ಕುರಿತು ಬರುವ ಹೆಚ್ಚಿನ ಸುದ್ಧಿಗಳು ಕಟ್ಟು ಕತೆಗಳಾಗಿದೆ. ತಾಲಿಬಾನ್ ಒಂದು ಉಗ್ರ ಸಂಘಟನೆಯಾಗಿದ್ದು, ಅವರು ಮಾಡುತ್ತಿರುವ ಅಕ್ರಮವನ್ನು ಯಾವ ಸತ್ಯ ವಿಶ್ವಾಸಿಯು ಒಪ್ಪಲಾರ. ಅಫ್ಘಾನಿಸ್ತಾನದಲ್ಲಿ ತಾಲಿಬಾನಿಗಳು ನಡೆಸುತ್ತಿರುವ ಕೆಲವು ಘಟನೆಗಳನ್ನು ಮುಂದಿಟ್ಟಕೊಂಡು ಮುಸ್ಲಿಂ ಮತ್ತು ಇಸ್ಲಾಂನ ನೈಜ ರೂಪ ಇದಾಗಿದೆ ಎಂದು ಬಿತ್ತರಿಸುವುದು ಮಾದ್ಯಮಗಳ ನೀಚ ಮನಸ್ಥಿತಿಯನ್ನು ತೋರಿಸುತ್ತದೆ ಹಾಗೂ ಇದು ಖಂಡನಿಯ ಎಂದರು. ತಾಲಿಬಾನ್ ಕೋಮುವಾದಿಯಾದರೆ ಅದನ್ನು ಬೆಳೆಸಿದ ಅಮೇರಿಕಾ ಸೋವಿಯತ್ ಯೂನಿಯನ್ ಬ್ರಿಟನ್ ಗಳು ಕೂಡ ಭಯೋತ್ಪಾದಕರು. ಇಸ್ಲಾಂ ಧರ್ಮ ಮತ್ತು ಮುಸ್ಲಿಂಮರು ಯಾವತ್ತೂ ಅನ್ಯಾಯ ಹಾಗೂ ಅನೀತಿಯನ್ನು ಒಪ್ಪುವವರಲ್ಲ. ಧಮನಿತ ಮರ್ಧಿತ ಹಾಗೂ ಶೋಷಿತ ಜನರೊಂದಿಗೆ ಎಂದಿಗೂ ಕೈ ಜೋಡಿಸುವವರಾಗಿದ್ದಾರೆ ನೈಜ ಮುಸಲ್ಮಾನರು ಎಂದು ಸ್ಪಷ್ಟಪಡಿಸಿದರು.
ಮಕ್ಕಾದಿಂದ ಪಲಾಯನ ಮಾಡಿದ ಮುಹಾಜಿರಿಗಳಿಗೆ ತನ್ನ ಸಂಪತ್ತು ಮನೆ ನೀಡಿ ಸಹಾಯ ಹಸ್ತವನ್ನು ಚಾಚಿದವರಾಗಿದ್ದಾರೆ ನಮ್ಮ ಪೂರ್ವಜರು. ತಾಲಿಬಾನ್ ಕೋಮುವಾದಿಗಳಾದರೆ ಭಾರತದ ವಿವಿಧ ಕಡೆಗಳಲ್ಲಿ ಮುಸ್ಲಿಂಮರನ್ನು ಕ್ರೈಸ್ತರನ್ನು ದಲಿತರನ್ನು ಆಕ್ರಮಿಸಿತ್ತಿರುವ ಸಂಘಿಗಳು ಕೂಡ ಕೋಮುವಾದಿಗಳಾಗುತ್ತಾರೆ. ಇವೆರಡೂ ಒಂದೇ ನಾಣ್ಯದ ಎರಡು ಮುಖಗಳಾಗಿದೆ ಎಂದರೆ ತಪ್ಪಾಗಲಾರದು. ಮಾಧ್ಯಮಗಳು ಮೊದಲು ಮುಳುಗುವ ಹಡಗಿನಿಂದ ರಕ್ಷಣೆ ಪಡೆಯಲು ಶ್ರಮಪಡೆಯಬೇಕೆ ಹೊರತು ನಡುಗುವ ಹಡಗಿನಿಂದಲ್ಲ ಎಂದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.