ಮಾಲೂರು (ವಿಶ್ವ ಕನ್ನಡಿಗ ನ್ಯೂಸ್): ಮಾಲೂರು ತಾಲ್ಲೂಕಿನ ಶಿವಾರಪಟ್ಟಣ್ಣ ಗ್ರಾಮದಲ್ಲಿನ ಗಂಗರ ಕಾಲದ ಶೈಲಿಯ ರಾಜ ವಿಜಯಾದ್ಯತ್ತರ ಯುದ್ದದ ವಿಜಯದ ಸಂಕೇತವಾಗಿ ಅವರ ಸಾಮಂತ ಅರಸ ಶಿವಮಾರನ್ನು ಕ್ರಿ.ಪೂ 734 ಕಾಲದಲ್ಲಿ ಸುಮಾರು 1275 ವರ್ಷಗಳ ಇತಿಹಾಸ ಉಳ್ಳ ಪ್ರಸಿದ್ದ ದೇವಾಲಯ ಶ್ರೀ ಸೋಮೇಶ್ವರ ದೇವಾಲಯದಲ್ಲಿ ಮಹಾಮಂಗಳರಾತಿ, ವಿಶೇಷ ಪೂಜೆ, ದೇವರ ಅಲಂಕಾರವನ್ನು ಮಾಡಲಾಗಿತ್ತು.
ಶಿವಾರಪಟ್ಟಣ್ಣ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷರು, ಹಾಲಿ ಸದಸ್ಯರು, ವಿಶ್ವಕರ್ಮ ಸೇವಾ ಪ್ರತಿಷ್ಟಾಪನಾ ತಾಲ್ಲೂಕು ಕಾರ್ಯ ಅಧ್ಯಕ್ಷರು, ಹಾಗೂ ಜನಪ್ರಿಯ ಶಿಲ್ಪಿಗಳಾದ ಎಸ್.ಎನ್ ಜಗನ್ನಾಥಚಾರ್ಯ ರವರು ಮಾತನಾಡುತ್ತಾ ” ಸೋಮಶ್ವೇರ ದೇವಾಲಯದ ಮೂಲ ಹೆಸರು ಓಂಕಾರ ಕಂಟೇಶ್ವರ ಸ್ವಾಮಿ ಎಂದು ಶಾಸನಗಳಲ್ಲಿ ಇತ್ತು. ಈಗ ಸೋಮೇಶ್ವರ ಸ್ವಾಮಿ ಕ್ಷೇತ್ರವಾಗಿ ಹೆಸರು ಮಾಡಿದ್ದಾನೆ.ಇಲ್ಲಿ 1200 ವರ್ಷಗಳ ಹಿಂದೆ ಬಸವಲಿಂಗಾಚಾರ್ಯಾರು ಶಿಲ್ಪಕಲೆಗೆ ಸಂಸ್ಥಾಪನೆ ಮಾಡಿದ ಹೆಗ್ಗಳಿಕೆ ಸಲ್ಲುತ್ತೆ, ಮಾಲೂರು ತಾಲ್ಲೂಕಿನ ಶಾಸಕರಾದ ಕೆ.ವೈ.ನಂಜೇಗೌಡ ವಿಶೇಷ ಕಾಳಜಿಯಿಂದ ಊರಿನವರ ಶುಭ ಕಾರ್ಯಗಳಿಗೆ ಸುಮಾರು 25 ಲಕ್ಷ ವೆಚ್ಚದಲ್ಲಿ ಸಮುದಾಯ ಭವನವನ್ನೂ ಹಾಗೇ ಹೆಚ್ಚುವರಿಯಾಗಿ ಅನ್ನದಾಸೋಹ ಕಾರ್ಯಕ್ರಮದ ಭವನಕ್ಕೆ 5 ಲಕ್ಷ ರೂಪಾಯಿಗಳನ್ನು ನೀಡುವ ಮೂಲಕ ದೇವರ ಕೃಪೆಗೆ ಪಾತ್ರರಾಗಿರುವುದು ಬಹಳ ಹೆಮ್ಮೆ,ಇದನ್ನು ಕಾರ್ತಿಕ ಮಾಸದಲ್ಲಿ ಉದ್ಘಾಟನೆ ಮಾಡುವ ಕಾಳಜಿ ಇದೆ” ಎಂದರು.
ಈ ಬಗ್ಗೆ ಶ್ರೀ ಸೋಮೇಶ್ವರ ದೇವಾಲಯದ ಸೇವಾಕರ್ತರಾಗಿರುವ ಶಮಹದೇವಪಾಂಚಾಲ್ ರವರು ಮಾತನಾಡಿ “ಈ ನಮ್ಮೂರಿನ ದೇವಾಲಯದಲ್ಲಿ ಪ್ರತಿ ಸೋಮವಾರ ವಿಶೇಷ ಪೂಜೆ ಇರುತ್ತದೆ ಇಲ್ಲಿ ಭಕ್ತಧಿಗಳು 9 ಸೋಮವಾರಗಳು ಬಂದು ದೇವರ ಪೂಜೆಗೆ ಪಾತ್ರರಾದರೆ ಬೇಡಿಕೆ ಇಟ್ಟಿದ್ದನ್ನು ಪೂರೈಸುವ ಮಹಾನ್ ದೇವರ ಪುಣ್ಯಭೂಮಿ ಇದಾಗಿದೆ, ಸಂತಾನಭಾಗ್ಯ, ವಿವಾಹಗಳು ಸಹ ಆಗಿದೆ” ಎಂದರು.
ಊರಿನ ಯುವ ಮುಖಂಡ ಶಿವು ವಿಶ್ವಕರ್ಮ ಮಾತನಾಡಿ “ಇಲ್ಲಿ ಯಾವುದೇ ಜಾತಿ-ಮತ ಭೇದಭಾವ ಇಲ್ಲದೇ ಧಾರ್ಮಿಕ ಕಾರ್ಯಗಳು ನಡೆಯುತ್ತೀವೆ. ಇದು ನಮ್ಮ ರಾಜ್ಯದಲ್ಲಿ ಎರಡನೇ ಧರ್ಮಸ್ಥಳವಾಗಿ ರೂಪವಾಗಿ ಅಭಿವೃದ್ದಿಯಾಗಿ ಅಧಿಕ ಮಂದಿ ಭಕ್ತಧಿಗಳು ಭಾಗವಹಿಸಲಿ” ಎಂದು ಹೇಳಿದರು.
ಈ ಸಂದರ್ಭದಲ್ಲಿ ಪುರುಷೋತ್ತಮಚಾರಿ,ದಕ್ಷಿಣಮೂರ್ತಚಾರ್ಯರು, ಎಸ್.ಎನ್,ಪುರುಷೋತ್ತಮಚಾರರು, ವೀರಭದ್ರಚಾರರು, ಪ್ರಭಾಕರಚಾರ್ಯ, ಲಕ್ಷ್ಮಿ ಕಾಂತ ಚಾರ್, ನರೇಂದ್ರನಾಥ ವಿಶ್ವಕರ್ಮ, ಸೂರ್ಯನಾರಾಯಣ ಚಾರ್ಯ, ಸುಬ್ರಮಣ್ಯ ಶೆಟ್ಟಿ, ನಾರಾಯಣಸ್ವಾಮಿ ಕೆ.ಎಸ್.ಆರ್.ಟಿಸಿ, ಎಸ್.ಕೆ ಗಂಗಾಥರ್, ಅನಂತನಾಕ್, ಎಸ್.ಎಂ.ಮುನಿಯಪ್ಪ ಎಸ್.ಕೆ.ಶ್ರೀನಿವಾಸ್, ಮೋಹನ್ ಕುಮಾರ್.ಎಸ್.ಎನ್, ಎಸ್.ಎಂ.ರಾಜಣ್ಣ, ಮಂಜುನಾಥ್.ಎಸ್ಆರ್,ದೊಡ್ಡ ಮುನಿಯಪ್ಪನ ಮುನೇಗೌಡ, ಕೇಶವ ಗೌಡರು, ದೇವಾಲಯದ ಪ್ರಧಾನ ಆಚ್ರ್ಕಕರಾದ ಪ್ರಕಾಶ್ ದೀಕ್ಷಿತ, ಮಗ ಶ್ರೀಕಾಂತ್ ದಿಕ್ಷೀತ್.ಶಿವು, ವಿಶ್ವಕರ್ಮ, ಶಿವಾರಪಟ್ಟಣ್ಣ. ಶಿಲ್ಪಿ ಹಾಗೂ ಪುರೋಹಿತರು.
ವರದಿ: ಲಕ್ಕೂರು ಎಂ.ನಾಗರಾಜ್
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.