(www.vknews.com) : ಮಂಗಳೂರಿನ ನಡುಪದವಿನಲ್ಲಿರುವ ಪಿ.ಎ. ಕಾಲೇಜ್ ಆಫ್ ಫಾರ್ಮಸಿಯ ಸಿಬ್ಬಂದಿಗಳು ಹಾಗೂ ವಿದ್ಯಾರ್ಥಿಗಳು “ವಿಶ್ವ ಔಷಧ ತಜ್ಞರ ದಿನ”ದ ಅಂಗವಾಗಿ ದೇರಳಕಟ್ಟೆಯ ಬೆಲ್ಮಾದಲ್ಲಿರುವ ಸೇವಾಶ್ರಮದಲ್ಲಿ ಆರೋಗ್ಯ ತಪಾಸನಾ ಶಿಭಿರವನ್ನು ಏರ್ಪಡಿಸಿದರು.
ವೃದ್ಧಾಶ್ರಮದಲ್ಲಿದ್ದವರ ರಕ್ತದೊತ್ತಡ, ರಕ್ತದ ಗ್ಲೂಕೋಸ್, ಹಿಮೋಗ್ಲೋಬಿನ್ ಮಟ್ಟ ಮುಂತಾದ ಸರಳ ಪರೀಕ್ಷೆಗಳನ್ನು ನಡೆಸಿ ಅವರಿಗೆ ಆರೋಗ್ಯ ಸಂರಕ್ಷಣೆಯ ಮಾಹಿತಿಗಳನ್ನು ನೀಡಲಾಯಿತು. ಕಾಲೇಜಿನ ವತಿಯಿಂದ ಮಧ್ಯಾಹ್ನದ ಊಟ, ಹಣ್ಣುಹಂಪಲು ಮತ್ತು ಪಲ್ಸ್ ಆಕ್ಸಿಮೀಟರ್ಗಳನ್ನು ದಾನವಾಗಿ ನೀಡಲಾಯಿತು.
ಪಿ.ಎ. ಕಾಲೇಜಿನ ಪ್ರಾಂಶುಪಾಲ ಡಾ. ಸಲೀಮುಲ್ಲಾ ಖಾನ್ ಮಾತನಾಡಿ “ಆರೋಗ್ಯವು ಅತ್ಯಂತ ದೊಡ್ಡ ಅನುಗ್ರಹವಾಗಿದೆ ಅದನ್ನು ಕಾಪಾಡುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ. ಎಲ್ಲರಲ್ಲೂ ಸೇವಾ ಮನೋಭಾವ ಬೆಳೆದುಬರುವುದಾದರೆ ಉತ್ತಮ ಸಮಾಜ ನಿರ್ಮಾಣವಾಗಲು ಸಾಧ್ಯ” ಎಂದರು. ಪ್ರೊಫೆಸರ್ ಡಾ. ಮುಹಮ್ಮದ್ ಮುಬೀನ್ ‘ವಿಶ್ವ ಔಷಧ ತಜ್ಞರ ದಿನ’ದ ಮಹತ್ವವನ್ನು ತಿಳಿಸಿದರು. ಸೇವಾಶ್ರಮದ ಆಡಳಿತವೃಂದ ಉಪಸ್ಥಿತರಿದ್ದು ಪಿ. ಎ. ಫಾರ್ಮಸಿ ಕಾಲೇಜಿನವರು ನಡೆಸಿದ ಸೇವಾ ಕಾರ್ಯವನ್ನು ಶ್ಲಾಘಿಸಿದರು.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.