(www.vknews.com) : SDPI ಪದವು ಬೂತ್ ಸಮಿತಿ ಕಾರ್ಯದರ್ಶಿ ಶಫೀಕ್ ಕುಕ್ಕಾಜೆ ನೇತೃತ್ವದಲ್ಲಿ ಮಂಚಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಒಂದನೇ ಬ್ಲಾಕ್ ಆದ ಪದವು ಪ್ರದೇಶದಲ್ಲಿ ಮಸೀದಿ ಮದರಸ ಸಂಪರ್ಕಿಸುವ ಕಾಲುದಾರಿ ಮೆಟ್ಟಿಲುಗಳು ಸಂಪೂರ್ಣ ವಾಗಿ ಹದಗೆಟ್ಟಿದೆ ಸ್ಥಳೀಯರು ನಡೆದಾಡುವ ತುಂಬಾ ಪ್ರಯಾಸ ಪಡುತ್ತಾರೆ ಅಲ್ಲದೆ ಇತ್ತೀಚೆಗೆ 2 ಮಕ್ಕಳು ಮೆಟ್ಟಿಲಿನಿಂದ ಜಾರಿಬಿದ್ದು ಸಣ್ಣ ಪುಟ್ಟ ಗಾಯಗಳಾಗಿದ್ದು SDPI ಯ ಗಮನಕ್ಕೆ ಬಂದಿದೆ ಆದ್ದರಿಂದ ಹೆಚ್ಚಿನ ಪ್ರಮಾಣ ದುರಂತ ಸಂಭವಿಸುವ ಮುಂಚೆ ಮೆಟ್ಟಿಲುಗಳನ್ನು ಸರಿಪಡಿಸಲು ಮಂಚಿ ಗ್ರಾಮದ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಗೆ ಮನವಿ ಸಲ್ಲಿಸಲಾಯಿತು.
ಸರ್ಕಾರಿ ಪ್ರೌಢ ಶಾಲೆ ಮಂಚಿ ಕುಕ್ಕಾಜೆ ಇದರ ಮುಂಭಾಗ ದ ರಸ್ತೆಯು ವಾಹನ ಸಂಚಾರ ಹೆಚ್ಚಾಗಿ ಇರುವುದರಿಂದ ಶಾಲಾ ಮಕ್ಕಳಿಗೆ ರಸ್ತೆ ದಾಟಲು ಹರ ಸಾಹಸ ಪಡಬೇಕಾಗುತ್ತದೆ ಆದ್ದರಿಂದ ಅಲ್ಲಿಗೆ 2 ಬ್ಯಾರಿಗೇಟ್ ಗಳನ್ನು ಅಳವಡಿಸಲು ಅನುಮತಿ ನೀಡಬೇಕಾಗಿ ಮನವಿಯನ್ನು ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ SDPI ಪದವು ಬೂತ್ ಸಮಿತಿ ಅಧ್ಯಕ್ಷ ಶರೀಫ್ ಶೈನ್ SDPI ಮಂಚಿ ಗ್ರಾಮ ಸಮಿತಿ ಅಧ್ಯಕ್ಷ ನವಾಜ್ ಕೋಡಿಬೈಲ್ ಫಯಾಜ್ ಕುಕ್ಕಾಜೆ ಅನ್ಸಾರ್ ಪದವು ಇರ್ಷಾದ್ ಬಶೀರ್ ಪದವು ಇರ್ಫಾನ್ ಪದವು ಶರೀಫ್ ಕುಕ್ಕಾಜೆ ಉಪಸ್ಥಿತರಿದ್ದರು.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.