(www.vknews.com) ; ಇಂಡಿಯನ್ ಸೋಶಿಯಲ್ ಫಾರಂ ಜಿದ್ದಾ ಕರ್ನಾಟಕ ವಲಯ ಸಮಿತಿ ವತಿಯಿಂದ 132ನೇ ಮಕ್ಕಳ ದಿನಾಚರಣೆ ಕಾರ್ಯಕ್ರಮವು ಜಿದ್ದಾದ ಇಸ್ತಿರಾಹದಲ್ಲಿ ನಡೆಯಿತು.
ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಇಂಡಿಯಾ ಫ್ರೆಟರ್ನಿಟಿ ಫಾರಂ ಜಿದ್ದಾ ಜಿಲ್ಲಾಧ್ಯಕ್ಷರಾದ ಆರಿಫ್ ಬಜ್ಪೆ ಮಕ್ಕಳ ದಿನಾಚರಣೆಯ ಮಹತ್ವ, ಮಕ್ಕಳ ಹಕ್ಕುಗಳು, ಆರೈಕೆ, ಶಿಕ್ಷಣ ಮತ್ತು ಜವಾಬ್ಧಾರಿಗಳ ಕುರಿತು ಅರಿವು ಮೂಡಿಸಿದರು.
ಸಭಾಧ್ಯಕ್ಷತೆ ವಹಿಸಿದ್ದ ಇಂಡಿಯನ್ ಸೋಷಿಯಲ್ ಫೋರಂ ರಾಜ್ಯಾಧ್ಯಕ್ಷರಾದ ಆಸಿಫ್ ಗಂಜಿಮಠ ಮಾತನಾಡಿ ಮಕ್ಕಳ ಭವಿಷ್ಯವನ್ನು ರೂಪಿಸುವ ಶಿಕ್ಷಣವು ಇಂದು ಭಾರತದ ಆಡಳಿತ ವರ್ಗದವರ ಕೇಸರೀಕರಣಕ್ಕೆ ಒಳಗಾಗಿದೆ, ಇದು ಮಕ್ಕಳ ಭವಿಷ್ಯಕ್ಕೆ ಅಪಾಯಕಾರಿ ಎಂದು ಆತಂಕ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಇಂಡಿಯನ್ ಸೋಶಿಯಲ್ ಫಾರಂ ರಾಷ್ಟ್ರೀಯ ಸಮಿತಿ ಸದಸ್ಯರಾದ ನಾಸಿರ್ ಬಿ.ಸಿ ರೋಡ್, ರಾಜ್ಯ ಪ್ರಧಾನ ಕಾರ್ಯದರ್ಶಿ ಹಸನ್ ಕಾಪು, ಐ.ಎಫ್,ಎಫ್ ಪ್ರಧಾನ ಕಾರ್ಯದರ್ಶಿ ಹುಸೈನ್ ಜೋಕಟ್ಟೆ ಮತ್ತಿತರರು ಉಪಸ್ಥಿತರಿದ್ದರು.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.