ಮಾಲೂರು (ವಿಶ್ವ ಕನ್ನಡಿಗ ನ್ಯೂಸ್):
ವಿಶ್ವಮಾನವ ಕುವೆಂಪು ಫೌಂಡೇಶನ್ ವಿ.ಕೆ.ಎಫ್ ವತಿಯಿಂದ ರಾಷ್ಟ್ರಕವಿ, ಯುಗದ ಕವಿ, ವಿಶ್ವಮಾನವ ಸಂದೇಶ ಸಾರಿದ ಕುವೆಂಪುರವರ 117 ನೇ ಜನುಮದಿನದ ಪ್ರಯುಕ್ತವಾಗಿ ರಾಜ್ಯ ಮಟ್ಟದ ಭಾಷಣ ಸ್ಪರ್ಧೆಯನ್ನು ಯೂಟ್ಯೂಬ್ ಚಾನೆಲ್ ಮೂಲಕ ಆಯೋಜಿಸಲಾಗಿದೆ.
ಈ ಬಗ್ಗೆ ವಿ.ಕೆ.ಎಫ್ ಸಂಸ್ಥಾಪಕ ಅಧ್ಯಕ್ಷರಾದ ಶ್ವೇತನಾಗರಾಜ್ ಮಾತನಾಡಿ “ಮಕ್ಕಳ ಪ್ರತಿಭೆಯನ್ನು ಪ್ರದರ್ಶಿಸಲು ವಿದ್ಯಾರ್ಥಿ/ವಿದ್ಯಾರ್ಥಿನಿಯರಿಗೆ ರಾಜ್ಯ ಮಟ್ಟದ ಭಾಷಣ ಸ್ಪರ್ಧೆಯ ವಿಷಯ: ಕನ್ನಡ ಸಾಹಿತ್ಯಕ್ಕೆ ವಿಶ್ವಮಾನವ ಕುವೆಂಪುರವರ ಕೊಡುಗೆ. ಈ ವಿಷಯದ ಬಗ್ಗೆ 2 ನಿಮಿಷಗಳ ಭಾಷಣವನ್ನು ಮಾಡಿ ನಮಗೆ ಕಳುಹಿಸಿದರೆ ನಾವು ಲಿಂಕ್ ಅವರಿಗೆ ಕಳುಹಿಸುತ್ತೇವೆ. ಅತಿ ಹೆಚ್ಚು ಲೈಕ್ ಪಡೆದ ಭಾಷಣ ಸ್ಪರ್ಧೆಯ ಸ್ಪರ್ಧಾಳುವಿಗೆ ಪ್ರಥಮ ಬಹುಮಾನ ನೀಡಲಾಗುವುದು, ಪ್ರಥಮ 3.117 ರೂ, ದ್ವೀತಿಯ ಬಹುಮಾನ 2,117 ರೂ, ತೃತೀಯ ಬಹುಮಾನ 1.117 ರೂ ಹಾಗೂ ಸಮಾಧಾನಕರ ಬಹುಮಾನ ಜೊತೆಗೆ ನೆನಪಿನ ಕಾಣಿಕೆ, ಪ್ರಶಸ್ತಿ ಪತ್ರದ ಜೊತೆ ಡಿಸೆಂಬರ್ 29 ರಂದು ಕುವೆಂಪುರವರ ಜನ್ಮದಿನಾಚರಣೆ ಸಂದರ್ಭದಲ್ಲಿ ನೀಡಿ ಗೌರವಿಸಲಾಗುವುದು” ಎಂದರು.
ರಾಜ್ಯವ್ಯಾಪಿ ಯಾರೂ ಬೇಕಾದರೂ 1 ರಿಂದ 10 ನೇ ತರಗತಿ ವಿದ್ಯಾರ್ಥಿಗಳು ಭಾಗವಹಿಸಬಹುದು. ವಿಡಿಯೋ ಕಳುಹಿಸಬಹುದಾದ ವಾಟ್ಸಪ್ ಸಂಖ್ಯೆ : 8277094649, 9900538954.
ವರದಿ: ಲಕ್ಕೂರು ಎಂ.ನಾಗರಾಜ್
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.