ಉಡುಪಿ (ವಿಶ್ವ ಕನ್ನಡಿಗ ನ್ಯೂಸ್) : ಉಡುಪಿ ಮಿಷನ್ ಆಸ್ಪತ್ರೆಯ ಮುಖ್ಯ ರಸ್ತೆಯಲ್ಲಿ ನಡುರಾತ್ರಿ ಯುವಕನೊಬ್ಬ ಚಡ್ಡಿಯಲ್ಲಿ ತಿರುಗಾಡುತ್ತಿದ್ದು ಆತನನ್ನು ವಿಶು ಶೆಟ್ಟಿಯವರು ಹೊಸಬೆಳಕು ಆಶ್ರಮದ ವಿನಯಚಂದ್ರ ಅವರ ಮುಖಾಂತರ ರಕ್ಷಣೆ ಮಾಡಿ ಆಶ್ರಮಕ್ಕೆ ದಾಖಲುಪಡಿಸಿದ್ದಾರೆ.
ಯುವಕನು ಮೇಲ್ನೋಟಕ್ಕೆ ಕೂಲಿ ಕಾರ್ಮಿಕನಾಗಿದ್ದು, ಅಸಹಾಯಕ ಸ್ಥಿತಿಯಲ್ಲಿದ್ದು ಮನನೊಂದು ಈ ಸ್ಥಿತಿಗೆ ಬಂದಿರಬಹುದೆಂದು ಶಂಕಿಸಲಾಗಿದೆ. ರಕ್ಷಣೆ ಮಾಡುವ ಸಮಯದಲ್ಲಿ ಈತ ಅನ್ನ ಆಹಾರವಿಲ್ಲದೆ ಬಳಲಿದ್ದು ತಿಳಿದುಬಂದಿದೆ.
ಯುವಕನು ಬಿಹಾರ ಮೂಲದವನಾಗಿದ್ದು ಹೆಸರು ಪದ್ದೂತ್ ಮುಂಡೋಲ್, ಸುಮಾರು 23 ವರ್ಷ ವಯಸ್ಸು. ಈ ಬಗ್ಗೆ ನಗರ ಠಾಣೆಗೂ ಮಾಹಿತಿ ನೀಡಲಾಗಿದೆ. ಯುವಕನ ಸಂಬಂಧಿಕರು ಅಥವಾ ಪರಿಚಯಸ್ಥರು ಇದ್ದಲ್ಲಿ ಮಣಿಪಾಲದ ಹೊಸಬೆಳಕು ಆಶ್ರಮ ಸಂಪರ್ಕಿಸಲು ಕೋರಲಾಗಿದೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.