(www.vknews.in) : ಹಿಮಾಯತುಲ್ ಇಸ್ಲಾಂ ಜಮಾಅತ್ ಕಮಿಟಿ ಬದ್ರಿಯಾ ಜುಮಾ ಮಸೀದಿ ಗೂನಡ್ಕ ಇದರ ವತಿಯಿಂದ ಹನ್ನೊಂದನೇ ಸ್ವಲಾತ್ ವಾರ್ಷಿಕ ಸಮಾರಂಭವು ಎರಡು ದಿನಗಳ ಆಧ್ಯಾತ್ಮಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ.
ಮಾರ್ಚ್ ಒಂಬತ್ತರಂದು ಮದನೀಯಂ ಮಜ್ಲಿಸ್ ನಡೆಯಲಿದ್ದು ಖ್ಯಾತ ವಾಗ್ಮಿ ಅಬ್ದುಲ್ ಲತೀಫ್ ಸಖಾಫಿ ಕಾಂತಪುರಂ ಭಾಗವಹಿಸಲಿದ್ದಾರೆ. ಮಾರ್ಚ್ ಹತ್ತರಂದು ಸ್ವಲಾತ್ ವಾರ್ಷಿಕ ಹಾಗೂ ಪ್ರಾರ್ಥನಾ ಸಂಗಮ ನಡೆಯಲಿದ್ದು ಅಸ್ಸಯ್ಯಿದ್ ಕಲ್ಲರಕಲ್ ತಂಙಳ್ ನೇತೃತ್ವ ವಹಿಸಲಿದ್ದಾರೆ. ಈ ಪ್ರಯುಕ್ತ ಪ್ರಚಾರಕ್ಕೆ ಚಾಲನೆ ನೀಡಲಾಯಿತು.
ಈ ಸಂಧಂರ್ಭ ಜಮಾಅತ್ ಅಧ್ಯಕ್ಷ ಅಬ್ದುಲ್ಲ ಹಾಜಿ ಕೊಪ್ಪತ್ತಕಜೆ, ಖತೀಬ್ ಮುಹಮ್ಮದ್ ಅಲಿ ಸಖಾಫಿ ಮಾದಾಪುರ,ಮುಅಲ್ಲಿಂ ಹಬೀಬ್ ಹಿಮಮಿ, ಅಲ್ ಅಮೀನ್ ವೆಲ್ಫೇರ್ ಅಸೋಸಿಯೇಷನ್ ರಿ. ಅಧ್ಯಕ್ಷ ಮುಹಮ್ಮದ್ ಕುಂಞಿ ಗೂನಡ್ಕ ,ಜಮಾಅತ್ ಪ್ರಧಾನ ಕಾರ್ಯದರ್ಶಿ ಉಮ್ಮರ್ ಪಿ ಎ, ಕೋಶಾಧಿಕಾರಿ ಅಬ್ದುಲ್ ಲತೀಫ್ ಸಖಾಫಿ,ಉಪಾಧ್ಯಕ್ಷ ಡಿ ಆರ್ ಖಾದರ್,ಎಸ್ ವೈ ಎಸ್ ಕೋಶಾಧಿಕಾರಿ ಅಶ್ರಫ್ ಎ ಟಿ, ಎಸ್ ಎಸ್ ಎಫ್ ಅಧ್ಯಕ್ಷ ಉನೈಸ್ ಪಿ ಯು,ಅಬ್ದುಲ್ಲ ಮುಸ್ಲಿಯಾರ್,ಮೂಸಾನ್ ಹಾಜಿ, ಎಂ ಬಿ ಇಬ್ರಾಹಿಂ, ಅಬ್ದುರ್ರಹೀಂ, ಮುನೀರ್ ಪ್ರಗತಿ, ಹಾರಿಸ್ ಝಂ ಝಂ, ಹಸೈನ್ ಎ ಟಿ ಮುಂತಾದವರು ಉಪಸ್ಥಿತರಿದ್ದರು.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.