ಒಂದೇ ಪ್ರಯತ್ನದಲ್ಲಿ ಉತ್ತೀರ್ಣಳಾದ ಬೆಳ್ಳಾರೆ ಜ್ಞಾನದೀಪದ ವಿದ್ಯಾರ್ಥಿನಿ..
ಬೆಳ್ಳಾರೆ (www.vknews.in) : ಈಕೆ ಕಲಿತದ್ದು 7ನೇ ತರಗತಿಯವರೆಗೆ ಮಾತ್ರ.. ವಿದ್ಯಾಭ್ಯಾಸ ತೊರೆದು ಬರೋಬ್ಬರಿ 18 ವರ್ಷ ಕಳೆದರೂ ಈ ವರ್ಷ ಎಸ್ ಎಸ್ ಎಲ್ ಸಿ ಪರೀಕ್ಷೆ ಬರೆದ ಬೆಳ್ಳಾರೆ ಜ್ಞಾನದೀಪ ಸಂಸ್ಥೆಯ ವಿದ್ಯಾರ್ಥಿನಿ ಪುಷ್ಪವತಿ ಒಂದೇ ಪ್ರಯತ್ನದಲ್ಲಿ ದ್ವಿತೀಯ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ.
ಕಡಬ ತಾಲ್ಲೂಕು ಕೊಂಬಾರು ಗ್ರಾಮದ ಕಟ್ಟೆ ಎಮರಡ್ಡ ಮುದ್ದಪ್ಪ ಗೌಡ ಮತ್ತು ಜಾನಕಿ ದಂಪತಿಯ ಪುತ್ರಿ ಪುಷ್ಪಾವತಿಗೆ ಈಗ 31 ವರ್ಷ ಪ್ರಾಯ. 2004 ರಲ್ಲಿ 7ನೇ ತರಗತಿಗೆ ಓದು ನಿಲ್ಲಿಸಿದ ಪುಷ್ಪವತಿ ಆರ್ಥಿಕ ಸಮಸ್ಯೆಯಿಂದ ಓದು ನಿಲ್ಲಿಸಿದರು. ಬಳಿಕ ಉಡುಪಿಯ ಕಂಪನಿಯೊಂದರಲ್ಲಿ 6-7 ವರ್ಷ ಉದ್ಯೋಗದಲ್ಲಿದ್ದರು.
ಓದು ನಿಲ್ಲಿಸಿ 18 ವರ್ಷದ ಬಳಿಕ ಮತ್ತೆ ಶಿಕ್ಷಣದಲ್ಲಿ ಆಸಕ್ತಿ ಮೂಡಿದ ಪುಷ್ಪವತಿ 2021-22ನೇ ಶೈಕ್ಷಣಿಕ ವರ್ಷದಲ್ಲಿ ಬೆಳ್ಳಾರೆಯ ಜ್ಞಾನದೀಪ ಸಂಸ್ಥೆಗೆ ಸೇರಿ ಖಾಸಗಿಯಾಗಿ ಎಸ್ ಎಸ್ ಎಲ್ ಸಿ ಪರೀಕ್ಷೆ ಬರೆದು ಒಂದೇ ಪ್ರಯತ್ನದಲ್ಲಿ ದ್ವಿತೀಯ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ.
ಮುಂದೆಯು ಶಿಕ್ಷಣ ಮುಂದುವರಿಸಿ ಉದ್ಯೋಗ ಪಡೆಯಬೇಕೆಂಬ ಅಭಿಲಾಷೆ ಇವರದ್ದು. ಇದೆ ಸಂಸ್ಥೆಯ ಇನ್ನೊರ್ವ ವಿದ್ಯಾರ್ಥಿ 6ನೇ ತರಗತಿಯಿಂದ ನೇರವಾಗಿ ಎಸ್ ಎಸ್ ಎಲ್ ಸಿ ಪರೀಕ್ಷೆ ಬರೆದ ಸುಳ್ಯ ತಾಲೂಕು ಕಳಂಜದ ಮಹಮ್ಮದ್ ಸ್ವಾದಿಕ್ 401 ಅಂಕಗಳೊಂದಿಗೆ ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.