ಕನ್ನಡಿಗರ ಅದರಲ್ಲೂ ವಿಶೇಷವಾಗಿ ಅನಿವಾಸಿಯರ ಮನೆಮಾತಾಗಿ ಬೆಳೆದು ನಿಂತು ಹನ್ನೆರಡು ವರ್ಷಗಳನ್ನು ಪೂರೈಸಿ ಹದಿಮೂರನೇ ವರ್ಷಕ್ಕೆ ಕಾಲಿಡುತ್ತಿರುವ ವಿಕೆ ನ್ಯೂಸ್ ಗೆ ಹೃದಯ ತುಂಬಿದ ಶುಭ ಕಾಮನೆಗಳು.
ಇಂದಿನ ಕಾಲದಲ್ಲಿ ದ್ವನಿ ಇಲ್ಲದವರ ದ್ವನಿಯಾಗಿ ಜನರಿಗೆ ಸತ್ಯವನ್ನು ತಲುಪಿಸುವಲ್ಲಿ ಸಾಮಾಜಿಕ ಮೀಡಿಯಾಗಳು ಸಲ್ಲಿಸುತ್ತಿರುವ ಕೊಡುಗೆ ಸಣ್ಣದೇನಲ್ಲ. ಬಂಡವಾಳಶಾಹಿ, ಪಕ್ಷಪಾತಿ ಮಾದ್ಯಮಗಳಿಗೆ ಇಂದು ಸೆಡ್ಡು ಹೊಡೆಯುವ ಪಕ್ವತೆಯಯನ್ನು ವಿವಿಧ ವೆಬ್ ಸೈಟ್ ನ್ಯೂಸ್ ಪೇಪರ್ ಗಳು ಬೆಳೆಸಿಕೊಂಡಿದೆ ಎಂಬುದು ಸಮಾಧಾನದ ಸಂಗತಿ. ದೈತ್ಯ ನ್ಯೂಸ್ ಚಾನಲ್ ಗಳು ಕೂಡಾ ಇಂದು ತಾನು ಬದುಕಬೇಕಾದರೆ ಸಾಮಾಜಿಕ ಮೀಡಿಯಾದ ಚರ್ಚೆಗಳ ಆಶ್ರಯ ಪಡೆಯಬೇಕಾಗಿದೆ. “ನಮಗೆ ನಾವೇ ಮಾದ್ಯಮ” ಎಂಬ ಆ ವಾಕ್ಯವನ್ನು ಮೊದಲು ಯಾರು ಕಂಡುಹಿಡಿದನೋ ಗೊತ್ತಿಲ್ಲ. ಆದರೆ ಅದೊಂದು ಕ್ರಾಂತಿಯಾಗಿ ಮಾರ್ಪಟ್ಟಿದೆ. ಈಗ ಹಿಂದಿನಂತೆ ಸುಳ್ಳನ್ನು ಬಡಬಡಿಸಲು ಹಿಂದೆ ಮುಂದೆ ನೋಡ ಬೇಕಾದ ಸ್ಥಿತಿ ಇದೆ.
ಈ ನಿಟ್ಟಿನಲ್ಲಿ ವಿಕೆ ನ್ಯೂಸ್ ಕೂಡಾ ತನ್ನದೇ ಆದ ಕೊಡುಗೆಯನ್ನು ನೀಡಿದೆ. ಇದರ ಬೆಳವಣಿಗೆಯಲ್ಲಿ ಸ್ವಾರ್ಥ ರಹಿತ ಬಲಿಷ್ಟ ತಂಡ ಕೆಲಸ ಮಾಡುತ್ತಿದ್ದು, ಆರ್ಥಿಕ ಲಾಭಾಂಶದ ಗುರಿ ಇಲ್ಲದೇ ಕೇವಲ ದೇಶದ ಜನರ ಸೇವೆಗೈಯ್ಯುವ ಗುರಿಯನ್ನು ಮಾತ್ರ ಹೊಂದಿದ ಒಂದಿಷ್ಟು ಯುವಕರ ತಂಡ ರೂಪು ನೀಡಿ ಈ ವಿ ಕೆ ನ್ಯೂಸ್ ಇನ್ನಷ್ಟು ವಿಸ್ತರಣೆಗೊಂಡು ಒಂದು ದೊಡ್ಡ ದೃಶ್ಯ ಮೀಡಿಯಾ ಆಗಿ ಬೆಳೆದು ಬರಲಿ ಎಂದು ಪ್ರಾರ್ಥಿಸುತ್ತೇನೆ.
ವಿಕೆ ನ್ಯೂಸ್ ಹಲವು ಉದಯೋನ್ಮುಖ ಬರಹ ಗಾರರ ಲೇಖನಗಳನ್ನು ಪ್ರಕಟಿಸುವ ಮೂಲಕ ಸಾಹಿತ್ಯ ಕ್ಷೇತ್ರಕ್ಕೆ ಕೂಡಾ ದೊಡ್ಡದಾದ ಕೊಡುಗೆಯನ್ನು ನೀಡುತ್ತಿದೆ. ಪಕ್ಷ, ಗ್ರೂಪ್ ನೋಡದೇ ಎಲ್ಲಾ ಸಂಘ ಸಂಸ್ಥೆಗಳ ಸೇವಾ ಕಾರ್ಯ ಚಟುವಟಿಕೆಗಳ ವಿಸ್ತ್ರತ ವರದಿಗಳನ್ನು, ನಾಯಕರ ಪರಿಚಯಗಳನ್ನು ನಿರಂತರ ಪ್ರಕಟಿಸುತ್ತಿರುವ ವಿ ಕೆ ನ್ಯೂಸ್ ನ ನಿಲುವು ನಿಜಕ್ಕೂ ಶ್ಲಾಘನೀಯ ಮತ್ತು ಮಾದರಿಯುಕ್ತವಾಗಿದೆ.
– ಎಸ್ ಬಿ ದಾರಿಮಿ
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.