ಪುತ್ತೂರು (www.vknews.in) : ದೆಹಲಿಯಲ್ಲಿ ನಡೆಯಲಿರುವ ಸುಪರ್ ಲೀಗ್ ಕ್ರಿಕೇಟ್ ಪಂದ್ಯಾಟದಲ್ಲಿ ಆಡಲು ಬೆಂಗಳೂರಿನ ಬುಲ್ಸ್ ತಂಡಕ್ಕೆ ಆಯ್ಕೆಯಾಗಿರುವ ಪುತ್ತೂರು ತಾಲೂಕಿನ ವಿದ್ಯಾರ್ಥಿಗಳಾದ ಕೂರ್ನಡ್ಕದ ನಿಶಾದ್, ಕಬಕದ ರಿಹಾನ್ ರಿಗೆ ಪುತ್ತೂರು ಕಮ್ಯೂನಿಟಿ ಸೆಂಟರ್ ಮೂಲಕ ಅಭಿನಂಧಿಸಿ ಬಿಳ್ಕೊಡಲಾಯಿತು. ಪುತ್ತೂರು ಪಾಣಾಜೆ ಲಯನ್ಸ್ ಕ್ಲಬ್ ನ ಅಧ್ಯಕ್ಷರಾದ ಮಹಮ್ಮದ್ ಕುಕ್ಕುವಳ್ಳಿ ಮತ್ತು ಕಮ್ಯೂನಿಟಿ ಸೆಂಟರ್ ನ ವಿದ್ಯಾರ್ಥಿಗಳು ಈ ಅಭಿನಂದನೆ ಕಾರ್ಯಕ್ರಮ ನಡಸಿಕೊಟ್ಟರು.
ಸಂಜಯ್ ನಗರದ ನಿವಾಸಿ ಹಮೀದ್ ಮತ್ತು ಮಿಸ್ರಿಯಾ ದಂಪತಿಗಳ ಪುತ್ರನಾಗಿರುವ ಪುತ್ತೂರು ಪಾಂಗ್ಲೈ ಬೆಥನಿ ಹೈಸ್ಕೂಲ್ ನಲ್ಲಿ ಹತ್ತನೇ ತರಗತಿ ಕಲಿಯುತ್ತಿರುವ ನಿಶಾದ್ ರವರು ಬ್ಯಾಟಿಂಗ್, ಬೌಲಿಂಗ್ ಸೇರಿದಂತೆ ಆಲ್ ರೌಂಡರ್ ಆಗಿ ಅಂಡರ್ -16 ರ ತಂಡಕ್ಕೆ ಆಯ್ಕೆಯಾಗಿದ್ದಾರೆ. ಮಡಿಕೇರಿ ಸೋಮವಾರ ಪೇಟೆ ನಿವಾಸಿಯಾಗಿರುವ ಅಬ್ದುಲ್ ರಝಾಕ್ ಮತ್ತು ರಶೀದಾ ದಂಪತಿಗಳ ಪುತ್ರ, ಪ್ರಸ್ತುತ ಕಬಕದಲ್ಲಿದ್ದು, ಫಿಲೋಮಿನಾದಲ್ಲಿ ದ್ವಿತೀಯ ಪಿಯುಸಿ ಓದುತ್ತಿರುವ ಮಹಮ್ಮದ್ ರಿಹಾಂ ಅಂಡರ್ -19 ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಇವರು ಅತ್ಯುತ್ತಮ ಬ್ಯಾಟ್ಸ್ ಮೇನ್ ಮತ್ತು ವಿಕೇಟ್ ಕೀಪರ್ ಆಗಿರುತ್ತಾರೆ.
ಪುತ್ತೂರು ಕ್ರಿಕೇಟ್ ಆಖಾಡಮಿಯ ಕೋಚ್ ಹರಿಶ್ಚಂದ್ರ ಆಚಾರ್ಯರಿಂದ ತರಬೇತಿ ಪಡೆದ ಈ ವಿದ್ಯಾರ್ಥಿಗಳು ಬೆಂಗಳೂರಿನ ವೈಟ್ ಫೀಲ್ಡ್ ನಲ್ಲಿ ನಡೆದ ಆಯ್ಕೆ ಪ್ರಕ್ರಿಯೆಯಲ್ಲಿ ಸ್ಥಾನಪಡೆದು ದೆಹಲಿಯಲ್ಲಿ ನಡೆಯುವ ಕ್ರಿಕೇಟ್ ಸರಣಿಗೆ ಆಯ್ಕೆ ಆಗಿದ್ದಾರೆ. ಇವರಂತ ಹಲವು ಕ್ರೀಡಾಪಟುಗಳು ತಾಲೂಕಿನಲ್ಲಿ ಬೆಳಗಲಿ ಎಂಬ ಉದ್ದೇಶದಿಂದ ಪುತ್ತೂರು ಕಮ್ಯೂನಿಟಿ ಸೆಂಟರ್ ಇವರನ್ನು ಸನ್ಮಾನಿಸಿ ಗೌರವಿಸಿ, ಅಭಿನಂದಿಸಿದೆ..
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.