ಸುಳ್ಯ (ವಿಶ್ವ ಕನ್ನಡಿಗ ನ್ಯೂಸ್) : ಡಿ ಕೆ ಎಸ್ ಸಿ ಜಿಲ್ಲಾ ಸಮಿತಿ ಇದರ ಸುಳ್ಯ ನೂತನ ಘಟಕದ ಉದ್ಘಾಟನಾ ಸಮಾರಂಭ ವು ಇದೇ ಬರುವ ದಿನಾಂಕ 03-07-2022 ರ ಭಾನುವಾರ ಮೂರು ಘಂಟೆಗೆ ಸರಿಯಾಗಿ ಉಡುಪಿ ಗಾರ್ಡನ್ ಹೊಟೇಲ್, ಪರಿವಾರ್ಕಾನ ಗಾಂಧಿನಗರ ಸುಳ್ಯ ಇಲ್ಲಿ ನಡೆಯಲಿರುವುದು.
ಕಾರ್ಯಕ್ರಮದ ಘನ ಅಧ್ಯಕ್ಷತೆಯನ್ನು ಬಹು|| ಅಸ್ಸಯ್ಯಿದ್ ಅಲ್ ಹಾಜ್ ಕೆ. ಎಸ್. ಆಟಕೋಯ ತಂಗಳ್ ಕುಂಬೋಳ್(ಅಧ್ಯಕ್ಷರು ಡಿ ಕೆ ಎಸ್ ಸಿ ಕೇಂದ್ರ ಸಮಿತಿ ಹಾಗೂ ಅಧ್ಯಕ್ಷರು ಡಿ ಕೆ ಎಸ್ ಸಿ ಮರ್ಕಝ್ ಸಮಿತಿ ಮೂಳೂರ್) ವಹಿಸಲಿದ್ದಾರೆ.
ಉದ್ಘಾಟನೆಯನ್ನು ಬಹು||ಅಸ್ಸಯ್ಯಿದ್ ಅಹ್ಮದ್ ಮುಖ್ತಾರ್ ತಂಗಳ್ ಕುಂಬೋಳ್ (ಅಧ್ಯಕ್ಷರು ಡಿ ಕೆ ಎಸ್ ಸಿ. ಜಿಲ್ಲಾ ಸಮಿತಿ ಮಂಗಳೂರು) ಅವರು ನೆರವೇರಿಸಲಿದ್ದು, ಬಹು|| ಅಲ್ ಹಾಜ್ ಎ. ಬಿ. ಹಸನುಲ್ ಫೈಝಿ, ಅಜ್ಜಾವರ (ಸ್ಥಾಪಕಾಧ್ಯಕ್ಷರು ದಕ್ಷಿಣ ಕರ್ನಾಟಕ ಸುನ್ನೀ ಸೆಂಟರ್ (ರಿ) ಮಂಗಳೂರು.) ಇವರ ಘನ ಉಪಸ್ಥಿತಿ ಇರಲಿದೆ.
ಮುಖ್ಯ ಅಥಿತಿಗಳಾಗಿ ತ್ವಾಹ ಭಾಫಕಿ ತಂಗಳ್ (ಗೌರವಧ್ಯಕ್ಷರು ಯು. ಏ.ಇ. ರಾಷ್ಟ್ರೀಯ ಸಮಿತಿ), ಮುಸ್ತಫಾ ಸಅದಿ (ವ್ಯವಸ್ಥಾಪಕರು ಮರ್ಕಝ್ ತಹ್ಲೀಮಿಲ್ ಇಹ್ಸಾನ್ ಮೂಳೂರು) ರವರು ಪ್ರಾಸ್ತಾವಿಕ ಭಾಷಣ ಮಾಡಲಿದ್ದಾರೆ. ಹಾಗೂ ಹಲವಾರು ಉಲಮಾ ಉಮರಾ ನೇತಾರರರು ಭಾಗವಹಿಸಲಿದ್ದಾರೆ.
ಈ ಕಾರ್ಯಕ್ರಮಕ್ಕೆ ಕೇಂದ್ರ ಸಮಿತಿ, ರಾಷ್ಟ್ರೀಯ ಸಮಿತಿ, ವಲಯ ಸಮಿತಿ, ಮತ್ತು ಘಟಕಗಳಿಂದ ಬಂದಂತಹಾ ಎಲ್ಲಾ ಸದಸ್ಯರೂ, ಜಿಲ್ಲಾ ಸಮಿತಿಯ ಸದಸ್ಯರು, ನೇತಾರರು, ಊರಿನ ಎಲ್ಲಾ ಘಟಕಗಳ ಸದಸ್ಯರೂ, ಡಿ ಕೆ ಎಸ್ ಸಿ. ಹಿತೈಷಿಗಳು ಭಾಗವಹಿಸಬೇಕಾಗಿ ಸಂಘಟಕರು ಪತ್ರಿಕಾ ಪ್ರಕಟಣೆಯಲ್ಲಿ ಕೇಳಿಕೊಂಡಿದ್ದಾರೆ.
ಅಧ್ಯಕ್ಷರು ಹಾಗೂ ಸರ್ವ ಸದಸ್ಯರು ಡಿ. ಕೆ. ಎಸ್. ಸಿ. ಜಿಲ್ಲಾ ಸಮಿತಿ. ಮಂಗಳೂರು.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.