ಬಾಕ್ರಬೈಲು(www.vknews.in) : ಬಾಕ್ರಬೈಲು ಎ.ಯು.ಪಿ ಶಾಲೆಯ ಶಿಕ್ಷಕ ರಕ್ಷಕ ಸಂಘದ ಮಹಾಸಭೆಯು ದಿನಾಂಕ 01.7.2022ರಂದು ಬಾಕ್ರಬೈಲು ಶಾಲೆಯಲ್ಲಿ ಜರಗಿತು. ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷ ಅಬೂಬಕ್ಕರ್ ಸಿದ್ದೀಕ್ ಅಧ್ಯಕ್ಷತೆ ವಹಿಸಿದರು. ಮಾಜಿ ವೊರ್ಕಾಡಿ ಪಂಚಾಯತ್ ಅಧ್ಯಕ್ಷರೂ ವಾರ್ಡ್ ಸದಸ್ಯರಾದ ಬಿ.ಎ ಅಬ್ದುಲ್ ಮಜೀದ್ ಉದ್ಘಾಟಿಸಿದರು. ಮುಖ್ಯೋಪಾಧ್ಯಾಯರಾದ ಪಿ.ಬಿ ಶ್ರೀನಿವಾಸ್ ರಾವ್ ಸ್ವಾಗತಿಸಿದರು.
SSG ಸದಸ್ಯ ಹಾಗೂ ಪಂಚಾಯತ್ ಮಾಜಿ ಅಧ್ಯಕ್ಷ ಶ್ರೀ ಪಿ.ಬಿ ಅಬೂಬಕ್ಕರ್ ಪಾತೂರು, ಬ್ಲಾಕ್ ಪಂಚಾಯತ್ ಸದಸ್ಯರಾದ ಶ್ರೀ ಮೊಯಿದೀನ್ ಕುಂಞಿ, SSG ಸದಸ್ಯ ಇಸ್ಮಾಯಿಲ್ ಪಾತೂರು, ಸಭಾಂಗಣ ತೀರ್ಮಾನ ಸಮಿತಿ ಉಪಾಧ್ಯಕ್ಷ ಶಂಕರನಾರಾಯಣ ಭಟ್, MPTA ಅಧ್ಯಕ್ಷೆ ಲತಾ, ಉಪಾಧ್ಯಕ್ಷೆ ಶಶಿಕಲಾ ನಡಿಬೈಲ್, ಮೇನೆಜರ್ ಪ್ರತಿನಿಧಿ ರಾಂ ಪ್ರಸಾದ್ ಶುಭಹಾರೈಸಿದರು. ಹಿರಿಯ ಅಧ್ಯಾಪಕ ಮೋಹನ್ ಮಾಸ್ಟರ್ ಕಾರ್ಯಕ್ರಮ ನಿರೂಪಿಸಿದರು. ಅಧ್ಯಾಪಕಿ ದೀಪಾ 2021-2022 ರ ವಾರ್ಷಿಕ ವರದಿ ಮಂಡಿಸಿದರು. ಸ್ಟಾಫ್ ಸೆಕ್ರೆಟರಿ ಅಬ್ದುಲ್ ಕರೀಂ ಧನ್ಯವಾದಗೈದರು.
2022-2023 ನೇ ಸಾಲೀನ PTA ಅಧ್ಯಕ್ಷರಾಗಿ ಶ್ರೀ ಬಿ.ಎ ಅಬ್ದುಲ್ ಮಜೀದ್ ಆಯ್ಕೆಗೊಂಡರು. ಉಪಾಧ್ಯಕ್ಷರಾಗಿ ಶಂಕರ ನಾರಾಯಣ ಭಟ್ ನಡಿಬೈಲು, MPTA ಅಧ್ಯಕ್ಷಯಾಗಿ ಶಶಿಕಲಾ ನಡಿಬೈಲು, ಉಪಾಧ್ಯಕ್ಷೆಯಾಗಿ ಅಲೀಮ ಬಾಕ್ರಬೈಲು ಇವರನ್ನು ಆರಿಸಲಾಯಿತು.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.