ಉಪ್ಪಿನಂಗಡಿ (www.vknews.in) : ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಇಲಾಖೆ ನವದೆಹಲಿ ಇದರ ಆಶ್ರಯದಲ್ಲಿ ,ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಇಲಾಖೆ ಬೆಂಗಳೂರು,ಇವರು 2021/22ನೇ ಸಾಲಿನಲ್ಲಿ 8ನೇ ತರಗತಿಯ ಪ್ರತಿಭಾವಂತ ವಿದ್ಯಾರ್ಥಿಗಳಿಗಾಗಿ ನಡೆಸಿದ NMMS ಪರೀಕ್ಷೆಗೆ ಭಾಗವಹಿಸಿದ ಸ. ಮಾ. ಉ.ಹಿ. ಪ್ರಾ.ಶಾಲೆ ಉಪ್ಪಿನಂಗಡಿಯ ವಿನೀತ್ ಕುಮಾರ್ ತನ್ನ ಪರಿಶ್ರಮದಿಂದ ಉತ್ತಮ ಅಂಕಪಡೆದು ವರ್ಷಕ್ಕೆ 12000ದಂತೆ ಒಟ್ಟು ನಾಲ್ಕುವರ್ಷಗಳಲ್ಲಿ 48 ಸಾವಿರ ರೂಪಾಯಿಗಳ ವಿದ್ಯಾರ್ಥಿವೇತನಕ್ಕೆ ಆಯ್ಕೆಯಾಗಿರುತ್ತಾನೆ.
ಇವನು ಬಲ್ಲಾಲಸಮುದ್ರ ಚಿತ್ರದುರ್ಗದ ನಿವಾಸಿಗಳಾದ ದಿವಂಗತ ನಾಗೇಶ್ ಮತ್ತು ಸರಸ್ವತಿ ದಂಪತಿಗಳ ಪುತ್ರನಾಗಿದ್ದು ಪ್ರಸ್ತುತ ಉಪ್ಪಿನಂಗಡಿಯಲ್ಲಿ ವಾಸವಾಗಿದ್ದಾರೆ. ಇವರಿಗೆ ಟಿ. ಜಿ. ಟಿ ಶಿಕ್ಷಕಿ ಕೃಷ್ಣವೇಣಿ ರೈ ಹಾಗೂ ಅತಿಥಿ ಶಿಕ್ಷಕಿಯಾದ ವಿನುತ ರವರು ತರಬೇತಿಯನ್ನು ನೀಡಿರುತ್ತಾರೆ,
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.