ಕೋಲಾರ( ವಿಶ್ವಕನ್ನಡಿಗ ನ್ಯೂಸ್ ): ಸಮಾಜ , ದೇಶ ಕಟ್ಟುವ ಕಾಯಕದಲ್ಲಿ ಪ್ರಮುಖ ಪಾತ್ರ ವಹಿಸುವ ಮತ್ತು ದೇಶಕ್ಕೆ ಅಗತ್ಯವಾದ ಸಂಸ್ಕಾರಯುತ ಮಾನವ ಸಂಪನ್ಮೂಲ ನೀಡುವ ಶಿಕ್ಷಕರ ಪಾತ್ರ ಅತಿ ಮಹತ್ವದ್ದು ಎಂದು ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಜಿ.ಸುರೇಶ್ಬಾಬು ತಿಳಿಸಿದರು .
ನಗರದ ಕೆಇಬಿ ಸಮುದಾಯ ಭವನದಲ್ಲಿ ಶನಿವಾರ ಶಿಕ್ಷಕ ಗೆಳೆಯರ ಬಳಗದ ಆಶ್ರಯದಲ್ಲಿ ನಡೆದ ಶಿಕ್ಷಕರ ಪ್ರತಿಭಾನ್ವಿತ ಮಕ್ಕಳಿಗೆ ಪುರಸ್ಕಾರ , ಗುರುಶ್ರೇಷ್ಠ ಪುರಸ್ಕಾರ , ನಿವೃತ್ತ ಶಿಕ್ಷಕರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡುತ್ತಿದ್ದರು .
ಕಳೆದ ೧೫ ವರ್ಷಗಳಿಂದ ಶಿಕ್ಷಕ ಗೆಳೆಯರ ಬಳಗ ಇಂತಹ ಸಾಮಾಜಿಕ , ಶಿಕ್ಷಕ ಪರ ಕಾಳಜಿಯ ಕಾರ್ಯಕ್ರಮ ಮಾಡುತ್ತಿರುವುದು ಶ್ಲಾಘನೀಯವಾಗಿದೆ . ಇದೀಗ ಗುರುಶ್ರೇಷ್ಠಪುರಸ್ಕಾರ ನೀಡುವ ಮೂಲಕ ಶಿಕ್ಷಕರ ಪರಿಶ್ರಮವನ್ನು ಗುರುತಿಸುವ ಕೆಲಸ ಮಾಡಿದೆ ಎಂದು ಬಳಗದ ಪದಾಧಿಕಾರಿಗಳನ್ನು ಅಭಿನಂದಿಸಿ , ಇಂತಹ ಕಾರ್ಯಕ್ರಮಕ್ಕೆ ಸಹಕಾರ ನೀಡುತ್ತಿರುವ ದಾನಿಗಳನ್ನು ಅಭಿನಂದಿಸಿದರು .
ಜಿಲ್ಲೆಗೆ ಮಾದರಿ ಶಿಕ್ಷಕಗೆಳೆಯರಬಳಗ ಬೆಂಗಳೂರು ವಿವಿ ಸೆನೆಟ್ ಸದಸ್ಯ ಹಾಗೂ ಸಹ್ಯಾದ್ರಿ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಉದಯಕುಮಾರ್ ಮಾತನಾಡಿ , ಸರ್ಕಾರದಿಂದ ನಾವು ಕಟ್ಟಡವೊಂದನ್ನು ಕಟ್ಟಲು ಹತ್ತಾರು ಬಾರಿ ಕ್ರಿಯಾಯೋಜನೆ ಮಾಡಿ , ಇಂಜಿನಿಯರ್ಗಳಿಂದ ನಕ್ಷೆ ಪಡೆದು ವಿವಿಧ ಪ್ರಕ್ರಿಯೆ ನಡೆಸುತ್ತೇವೆ ಆದರೆ ಮಕ್ಕಳ ಭವಿಷ್ಯ ರೂಪಿಸಿ ದೇಶ ಕಟ್ಟುವ ಶಿಕ್ಷಕರಿಗೆ ಸಮಗ್ರ ಯೋಜನೆ ಬೇಕು , ಹೊಣೆಗಾರಿಕೆ ಬೇಕು ಎಂದರು . ಮಕ್ಕಳಿಗಾಗಿ ಆಸ್ತಿ ಮಾಡಬೇಡಿ , ಆ ಮಕ್ಕಳನ್ನು ಈ ದೇಶದ ಆಸ್ತಿಯಾಗಿಸಿ ಎಂದು ಕಿವಿಮಾತು ಹೇಳಿದ ಅವರು , ಯಾವುದೇ ಸಾಧಕನಿಗೆ ಪೋಷಕರು , ಗುರು , ಸ್ನೇಹಿತ ಈ ಮೂರು ಶಕ್ತಿಗಳ ನೆರವು ಅಗತ್ಯ .
ಈ ಮೂರು ಶಕ್ತಿಗಳಿಂದಲೇ ಅವನು ಒಳ್ಳೆಯವ , ಕೆಟ್ಟವ ಎಂಬ ಬದುಕು ರೂಪುಗೊಳ್ಳುತ್ತದೆ , ಶಿಕ್ಷಕ ಗೆಳೆಯರ ಬಳಗ ಜಿಲ್ಲೆಗೆ ಮಾದರಿಯಾಗಿದೆ ಎಂದರು . ಉಪಪ್ರಾಂಶುಪಾಲ ರಾಮಕೃಷ್ಣಪ್ಪ ಮಾತನಾಡಿ , ಶಿಕ್ಷಕರ ಗೆಳೆಯರ ಬಳಗ ದೊಡ್ಡದೊಡ್ಡ ಕಂಪನಿಗಳ ಸಹಕಾರ ಪಡೆಯುವಲ್ಲಿ ಸಫಲವಾಗಿದೆ. ಜಿಲ್ಲೆಯ ಸರ್ಕಾರಿ ಶಾಲೆಗಳ ಮಕ್ಕಳಿಗೆ ಕೊರತೆಯಿಲ್ಲದಂತೆ ಶೈಕ್ಷಣಿಕ ಸೌಲಭ್ಯ ಒದಗಿಸುತ್ತಿದೆ ಎಂದು ಅಭಿನಂದಿಸಿದರು . ತಮ್ಮ ಮಕ್ಕಳು ಶೇ .೧೦೦ ಸಾಧಿಸಿ ಡಾಕರ್ ಇಂಜಿನಿಯರ್ ಆಗಬೇಕೆಂದು ಬಯಸುವವರು ಒಳ್ಳೆಯ ಶಿಕ್ಷಕರೂ ಆಗಲಿ ಎಂದು ಹಾರೈಸಬೇಕು ಎಂದು ಸಲಹೆ ನೀಡಿದರು .
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಿಕ್ಷಕ ಗೆಳೆಯರ ಬಳಗದ ಅಧ್ಯಕ್ಷ ನಾರಾಯಣಸ್ವಾಮಿ , ಶಿಕ್ಷಕ ಗೆಳೆಯರ ಬಳಗ ಸರ್ಕಾರಿ ಶಾಲೆಗಳ ಮಕ್ಕಳಿಗೆ ನೊಟ್ ಪುಸ್ತಕ ವಿತರಿಸಿದೆ , ಜಿಲ್ಲೆಯ ಶಾಲೆಗಳಿಗೆ ವಾಟರ್ಫಿಲ್ಟರ್ ನೀಡಿಕೆ , ಈ ಕಾರ್ಯಕ್ಕೆ ಸ್ಯಾಮ್ಸಂಗ್ , ಎಫ್ಸನ್ ಮತ್ತಿತರ ಸಂಸ್ಥೆಗಳ ಸಹಕಾರ ಪಡೆಯುವಲ್ಲಿ ಯಶಸ್ವಿಯಾಗಿದೆ ಎಂದು ತಿಳಿಸಿದರು .
ಪ್ರಾಸ್ತಾವಿಕವಾಗಿ ಮಾತನಾಡಿದ ಶಿಕ್ಷಕ ಗೆಳೆಯರ ವೀರಣ್ಣಗೌಡ , ಸರ್ಕಾರಿ ಶಾಲೆಗಳ ಸಬಲೀಕರಣಕ್ಕೆ ಕೈಗೊಂಡಿರುವ ಕಾರ್ಯಕ್ರಮಗಳ ಕುರಿತು ಮಾಹಿತಿ ನೀಡಿ , ಬಳಗದ ಕಾರ್ಯಗಳಿಗೆ ಸಹಕಾರ ನೀಡಿರುವ ದಾನಿಗಳು ಮತ್ತು ಎಪಿಎಮ್ಸಿ ಮಂಡಿ ಮಾಲೀಕರಾದ ಎ.ಎನ್.ಆರ್.ದೇವರಾಜ್ , ಮಂಜುನಾಥರೆಡ್ಡಿ , ಆರ್.ನಾಗೇಶ್ಗೌಡ ಮತ್ತಿತರರಿಗೆ ಧನ್ಯವಾದ ಸಲ್ಲಿಸಿದರು .
ಇದೇ ಸಂದರ್ಭದಲ್ಲಿ ತಾಲ್ಲೂಕಿನ ಎಂ.ಕೃಷ್ಣಬಾಬು , ಶ್ರೀನಿವಾಸಪ್ಪ , ಎಂ.ನಾರಾಯಣಸ್ವಾಮಿ , ಕೊಳ್ಳಪ್ಪ , ಮುನಿಶಾಮಪ್ಪ , ಮುನಿಬೈರಪ್ಪ , ಮುನಿಸ್ವಾಮಿಗೌಡ , ಸಂಘರ್ಷ , ಚುಂಚುದೇನಹಳ್ಳಿಯ ಎಸ್.ಬಸವರಾಜ್ , ಎಂ.ಕೃಷ್ಣಪ್ಪರವಿಕುಮಾರ್ , ಯೂನಿಸ್ ಖಾನ್ ಸೇರಿದಂತೆ ಒಟ್ಟು ೩೫ ಶಿಕ್ಷಕರಿಗೆ ಗುರುಶ್ರೇಷ್ಠ ಪುರಸ್ಕಾರ ನೀಡಿ ಗೌರವಿಸಲಾಯಿತು . ನಿವೃತ್ತ ಶಿಕ್ಷಕರನ್ನೂ ಸನ್ಮಾನಿಸಲಾಯಿಉತ ಇದೇ ಸಂದರ್ಭದಲ್ಲಿ ತಾಲ್ಲೂಕಿನ ಎಲ್ಲಾ ೩೫ ಕ್ಲಸ್ಟರ್ ಸಂಪನ್ಮೂಲ ವ್ಯಕ್ತಿಗಳಿಗೆ ಬ್ಯಾಗ್ ಕೊಡುಗೆಯಾಗಿ ನೀಡಿದ್ದು , ತಾಲ್ಲೂಕಿನ ಶಿಕ್ಷಕರ ಎಸ್ಸೆಸ್ಸೆಲ್ಸಿ , ಪಿಯುಸಿ ಸಾಧಕರನ್ನು ಸನ್ಮಾನಿಸಲಾಯಿತು .
ಕಾರ್ಯಕ್ರಮದಲ್ಲಿ ಸಿಆರ್ಪಿ ಬಳಗದ ಕಾರ್ಯದರ್ಶಿ ಗೋವಿಂದು ನಿರೂಪಿಸಿದ್ದು , ವೇದಿಕೆಯಲ್ಲಿ ಎಪಿಎಂಸಿ ಎಎನ್ಆರ್ ಮಂಡಿ ಮಾಲೀಕ ದೇವರಾಜ್ , ಎಂ.ಎನ್.ಆರ್.ತರಕಾರಿ ಮಂಡಿ ಮಾಲೀಕ ಮಂಜುನಾಥರೆಡ್ಡಿ , ಆರ್.ಎನ್.ಜಿ.ಮಂಡಿಮಾಲೀಕ ಆರ್.ನಾಗೇಶ್ಗೌಡ , ಶಿಕ್ಷಣ ಸಂಯೋಜಕ ಆರ್.ಶ್ರೀನಿವಾಸನ್ , ಬಳಗದ ಗೌರವ ಸಲಹೆಗಾರ ಚಿಕ್ಕಣ್ಣ , ಶಿಕ್ಷಕ ಸಂಘದ ಕೆ.ವಿ.ಜಗನ್ನಾಥ್ , ಬಳಗದ ವೆಂಕಟಾಚಲಪತಿಗೌಡ , ಸೋಮಶೇಖರ್ , ಶ್ರೀನಿವಾಸ್ , ನಂಜಮ್ಮ , ನಾರಾಯಣಶಾಸ್ತ್ರಿ ಚಾರಿಟಬಲ್ ಟ್ರಸ್ಟ್ನ ಪುಟ್ಟ ನರಸಿಂಹಮೂರ್ತಿ ಮತ್ತಿತರರಿದ್ದರು .
ವರದಿ ಶಬ್ಬೀರ್ ಅಹ್ಮದ್ ಶ್ರೀನಿವಾಸಪುರ
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.