(www.vknews.in) : ವಿಟ್ಲ ಪಡ್ನೂರು ಗ್ರಾಮ ಪಂಚಾಯತಿಯ ಕೇಂದ ಭಾಗವಾದ ಕೊಡಂಗಾಯಿ ಯಲ್ಲಿ ದಿನಕ್ಕೊಂದು ಅಣಬೆಗಳಂತೆ ಅಕ್ರಮ ವಾಣಿಜ್ಯ ಕಟ್ಟಡಗಳು ಉದಯವಾಗುತ್ತಿದೆ. ಇಲ್ಲಿ ಯಾರೂ “ಹೇಳುವವರು-ಕೇಳುವವರಿಲ್ಲವಾಗಿದೆ”. ವಿಟ್ಲ ಪಡ್ನೂರು ಗ್ರಾಮ ಪಂಚಾಯತಿ ಹಾಗೂ ಅಧಿಕಾರಿ ವರ್ಗ ಗಾಢ ನಿದ್ರೆಯೊಂದಿಗೆ ನಿಷ್ಕ್ರಿಯವಾಗಿದೆ. ವಿಟ್ಲ ಪಡ್ನೂರು ಗ್ರಾಮ ಪಂಚಾಯತಿ ಅಧ್ಯಕ್ಷರ ಕೊಠಡಿಯ ಪಕ್ಕದಲ್ಲೇ ಅಕ್ರಮ ವಾಣಿಜ್ಯ ಕಟ್ಟಡವೊಂದು ಈ ದಿನ ನಿರ್ಮಾಣವಾಗುತ್ತಿರೋದು ಅಧ್ಯಕ್ಷರ ಕೊಠಡಿಯ ಕಿಟಕಿಯಿಂದಲೇ ನೇರ ದರ್ಶನವಾದರೂ ಯಾವುದೇ ಕ್ರಮ ಕೈಗೊಳ್ಳಲು ಗ್ರಾಮ ಪಂಚಾಯತಿಗೆ ಸಾಧ್ಯವಾಗಿಲ್ಲ.
ಗ್ರಾಮ ಪಂಚಾಯತಿ ಪಿಡಿಓ,ಕಾರ್ಯದರ್ಶಿಗಳು ಸಾರ್ವಜನಿಕರ ಕರೆಯನ್ನು ಸ್ವೀಕರಿಸಲು ಬಹಳ ಪಾಡು ಪಟ್ಟಿರೋದು ಅಕ್ರಮಗಳ ಸಾಥ್ ಗೆ ತಮ್ಮ ಪರಿಪೂರ್ಣ ಬೆಂಬಲವನ್ನು ಸೂಚಿಸಿರುವ ಭ್ರಷ್ಟರ ಗಬ್ಬು ವಾಸನೆ ನಾರುತ್ತಿತ್ತು. ಕೊನೆಗೂ ಕರೆ ಸ್ವೀಕರಿಸಿದಾಗ ಅದು ಪಿಡಬ್ಲ್ಯೂಡಿ ವ್ಯಾಪ್ತಿಗೆ ಬರುತ್ತದೆಯೆಂಬ ಉಡಾಫೆಯ ಉತ್ತರದೊಂದಿಗೆ ಅಕ್ರಮ ಕಟ್ಟಡ ನಿರ್ಮಾಣದ ಸ್ಥಳಕ್ಕೆ ಕಾಟಚಾರಕ್ಕೆ ಬೇಟಿ ನೀಡಿ ಒಂದು ಪೋಟೊ ಕ್ಲಿಕ್ಕಿಸಿ ನಾವು ಪಿಡಬ್ಲ್ಯೂಡಿ ಗೆ ವರದಿ ಮಾಡುತ್ತೇವೆಂದು ತಮ್ಮ ಕರ್ತವ್ಯದಿಂದ ಹಿಂದಕ್ಕೆ ಸರಿದಿರುವ ಪ್ರಸಂಗ ನಡೆಯಿತು.
ಮಾನ್ಯ ಪಂಚಾಯತ್ ಅಭಿವೃದ್ಧಿ ಅಧಿಕಾರಿಯವರೇ..??, ಪಿಡಬ್ಲ್ಯೂಡಿ ವ್ಯಾಪ್ತಿಗೆ ಬರುವ ನಿಮ್ಮ ಗ್ರಾಮ ಪಂಚಾಯತಿ ವ್ಯಾಪ್ತಿಯ ಎಷ್ಟು ಮನೆ ನಿರ್ಮಾಣಕ್ಕೆ ಪರವಾನಿಗೆ ನೀಡಲು PWD ಇಲಾಖೆಯಿಂದ ನಿರಾಪೇಕ್ಷಣ ಪ್ರಮಾಣ ಪತ್ರ ಪಡೆದು ಅನುಮತಿ ನೀಡಿದ್ದೀರಿ. PWD ವ್ಯಾಪ್ತಿಯಲ್ಲಿ ಎಷ್ಟು ಅನಧಿಕೃತ ಅಂಗಡಿ ಕೋಣೆಗಳಿಗೆ, ಗೂಡು ಅಂಗಡಿಗಳಿವೆ??, ಇವುಗಳಿಗೆ ವ್ಯಾಪರ/ವಾಣಿಜ್ಯ ಲೈಸೆನ್ಸ್ ನೀಡಲು, ವಿದ್ಯುತ್ ನಿರಾಪೇಕ್ಷಣ ಪತ್ರ ನೀಡಲು PWD ಇಲಾಖೆಯಿಂದ ಎಷ್ಟು ಅರ್ಜಿಗಳಿಗೆ ನಿರಾಪೇಕ್ಷಣ ಪ್ರಮಾಣ ಪತ್ರ ಪಡೆದಿದ್ದೀರಿ. ಈ ಮೇಲಿನ ಎಲ್ಲಾ ಕಟ್ಟಡಗಳ ಎಲ್ಲಾ ರೀತಿಯ ತೆರಿಗೆಗಳನ್ನು ಗ್ರಾಮ ಪಂಚಾಯತಿ ಪಡೆಯುತ್ತೇವೆಯೇ ಹೊರತು, PWD ಇಲಾಖೆಗೆ ಯಾರೂ ತೆರಿಗೆ ಸಲ್ಲಿಸುತ್ತಿಲ್ಲ, ಅದ್ದರಿಂದ ಕೇವಲ ಅಕ್ರಮ ಕಟ್ಟಡ ತನ್ನ ಗ್ರಾಮ ಪಂಚಾಯತಿಯ ಕೂಗಳತೆಯ ಹತ್ತಿರದಲ್ಲಿದ್ದರೂ ತೆರವುಗೊಳಿಸಲು PWD ಇಲಾಖೆಗೆ ವರದಿ ಮಾಡುವುದಂತೆ. ಇಂತಹ ಭ್ರಷ್ಟ ಹಾಗೂ ನಿಷ್ಕ್ರಿಯ ಅಡಳಿತ ವ್ಯವಸ್ಥೆಯಿಂದ ಸ್ವಸ್ಥ ಸಮಾಜದ ನಾಗರಿಕರು ಯಾವ ರೀತಿಯ ನ್ಯಾಯವನ್ನು ನಿರೀಕ್ಷಿಸಬಹುದು..
ಒಬ್ಬ ಬಡಪಾಯಿ ವ್ಯಕ್ತಿ ತನ್ನ ವರ್ಗ ಸ್ಥಳದಲ್ಲಿ ಒಂದು ವಾಸ್ತವ್ಯದ ಮನೆ ನಿರ್ಮಿಸಲು ಕಾನೂನು ಬದ್ದವಾಗಿ ಅನುಮತಿಗಾಗಿ ಗ್ರಾಮ ಪಂಚಾಯತಿಗೆ ಬೇಟಿ ನೀಡಿ,ನಾಯಿಗಳ ತರಹ ಕಾದು ಕುಳಿತು,ಎಲ್ಲಾ ದಾಖಲೆ ಪತ್ರಗಳು ಸರಿಯಾಗಿದ್ದರೂ,ಮತ್ತೆ ಮತ್ತೆ ಕಾರಣಗಳನ್ನು ಹುಡುಕಿ,ಮೂಲ ದಾಖಲೆ,ಭೂ ಪರಿವರ್ತನೆ ಆದೇಶ ಪ್ರತಿ(ವಾಸ್ತವ್ಯ ಕನ್ವರ್ಷನ್),ನಮೂನೆ 9 ಮತ್ತು 11,ಬ್ಲೂ ಪ್ರಿಂಟ್,ಕಟ್ಟಡ ವಿನ್ಯಾಸದ ನಿಲಾ ನಕಾಶೆ,ವಾಸ್ತವ್ಯದ ಮನೆ ನಿರ್ಮಾಣದ ಲೈಸೆನ್ಸ್,ಕಟ್ಟಡದ ವಿಸ್ತೀರ್ಣ 900 ಚದರ ಆಡಿ ಮಿರಿದರೇ 15000/-ರೂಪಾಯಿ ರಾಜ್ಯ ಕಾರ್ಮಿಕರ ಕಲ್ಯಾಣ ನಿಧಿಗೆ ಪಾವತಿ,ಈಗೇ ಹತ್ತಾರು ದಾಖಲೆಗಳು ಇದ್ದರೂ ಅನುಮತಿ ನೀಡಲು ತಿಂಗಳ ಸಾಮನ್ಯ ಸಭೆಗೆ ಕಾಯಬೇಕಾಗುತ್ತದೆ..
ಅದರೇ ಇಲ್ಲಿ ಇಂತಹ ಅಕ್ರಮ ಕಟ್ಟಡ ನಿರ್ಮಾಣಕ್ಕೆ ಇದ್ಯಾವುದೇ ದಾಖಲೆಯ ಅವಶ್ಯಕತೆ ಇಲ್ಲವಾಗಿದೆ.ನಿಷ್ಕ್ರಿಯ ಗ್ರಾಮ ಪಂಚಾಯತಿ ಅಡಳಿತ ವ್ಯವಸ್ಥೆ ಹಾಗೂ ಭ್ರಷ್ಟ ಅಧಿಕಾರಿಗಳಿದ್ದರೇ ಸಾಕು.ಯಾವುದೇ ದಾಖಲೆಯಿಲ್ಲದೇ ಅಕ್ರಮ ಕಟ್ಟಡ ನಿರ್ಮಾಣ ಮಾಡಬಹುದಾಗಿದೆ..
ಅಕ್ರಮ ಕಟ್ಟಡಗಳಿಗೆ ತಡೆ ನೀಡದಿದ್ದಲ್ಲಿ,ಇನ್ನೂ ಮುಂದಕ್ಕೆ ವಿಟ್ಲ ಪಡ್ನೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ಯಾವುದೇ ಕಟ್ಟಡಗಳಿಗೆ ಅನುಮತಿ ಪಡೆಯದೇ ಅನಧಿಕೃತವಾಗಿಯೇ,ಯಾವುದೇ ತೆರಿಗೆ ಪಾವತಿಸದೇ,ಯಾವುದೇ ದಾಖಲೆಯಿಲ್ಲದೇ ಅಕ್ರಮವಾಗಿ ಕಟ್ಟಡ ನಿರ್ಮಾಣ ಮಾಡುವುದಾಗಿ ಗ್ರಾಮಸ್ಥರು ಬಹಿರಂಗವಾಗಿ ಎಚ್ಚರಿಕೆ ನೀಡಿದ್ದಾರೆ.ಸಂವಿಧಾನದ 14 ನೇ ವಿಧಿ ಪ್ರಕಾರ ಕಾನೂನಿನಲ್ಲಿ ಎಲ್ಲರಿಗೂ ಸಮಾನ ಅವಕಾಶ (Right To equality) ಯಾಗಿದೆ.ಹಾಗಾಗಿ ರಾಜಕೀಯ ಭಿಕ್ಷೆಗಾಗಿ ಯಾವುದೇ ಅಧಿಕಾರಿಗಳು ತಮ್ಮ ಕರ್ತವ್ಯ ಹಾಗೂ ಅಧಿಕಾರ ವನ್ನು ತುಚ್ಚವಾದ ಬೆಲೆಗೆ ಮಾರಟ ಮಾಡದಿರಿ.ಪ್ರತಿಯೊಂದಕ್ಕೂ ಸಮಯ ಮತ್ತು ಕಾನೂನು ಉತ್ತರಿಸಲಿದೆ.ಎಷ್ಟೇ ದೊಡ್ಡ ಅಧಿಕಾರಿಯಾದರೂ,ಎಷ್ಟೇ ದೊಡ್ಡ ಪ್ರಭಾವ ಹೊಂದಿದ್ದರೂ ಕಾನೂನಿನ ಮುಂದೆ ಶೂನ್ಯವೆಂದು ಪ್ರಸ್ತುತ ನಡೆಯುತ್ತಿರುವ ರಾಜ್ಯದ ಹಲವು ಪ್ರಕರಣಗಳ ಸನ್ನವೇಶಗಳನ್ನು ಅರ್ಥಮಾಡಿಕೊಳ್ಳಬಹುದಾಗಿದೆ..
ಅದ್ದರಿಂದ ಈ ಕೂಡಲೇ ಅಕ್ರಮ ಕಟ್ಟಡವನ್ನು ತೆರವುಗೊಳಿಸಿ,ಕಾನೂನು ಎಲ್ಲರಿಗೂ ಸಮಾನವೆಂದು ಬಹಿರಂಗಪಡಿಸುವಂತೆ ನಾಗರಿಕರು ಒತ್ತಾಯಿಸಿದ್ದಾರೆ.
ನೊಂದ ನಾಗರಿಕರು ವಿಟ್ಲ ಪಡ್ನೂರು ಗ್ರಾಮ
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.