ಮಂಜೇಶ್ವರ (www.vknews.in) : ಖಾಝಿ ಸಯ್ಯಿದ್ ಮುಹಮ್ಮದ್ ಉಮರುಲ್ ಫಾರೂಖ್ ಅಲ್-ಬುಖಾರಿ 7ನೇ ಉರೂಸ್ ಮುಬಾರಕ್ ಹಾಗೂ ಸನದುದಾನ ಸಮ್ಮೇಳನಕ್ಕೆ ಇಂದು ಗುರುವಾರ ಸಂಜೆ 4.30 ಕ್ಕೆ ಮಖಾಂ ಝಿಯಾರತಿನೊಂದಿಗೆ ಆರಂಭಿಸುವುದು. ಝಿಯಾರತಿಗೆ ಸಯ್ಯಿದ್ ಹಾಮಿದ್ ಇಂಬಿಚ್ಚಿಕೋಯ ಅಲ್-ಬುಖಾರಿ ಕೊಇಲಾಂಡಿ ನೇತ್ರತ್ವ ನೀಡುವರು.
ನಂತರ ಸ್ವಾಗತ ಸಂಘ ಚೆಯರ್ಮಾನ್ ಸಯ್ಯಿದ್ ಅತಾವುಲ್ಲ ತಂಙ್ಞಳ್ ಧ್ವಜಾರೋಹಣ ನೆರವೇರಿಸುವರು. 5 ಗಂಟೆಗೆ ನಡೆಯುವ ಉದ್ಘಾಟನೆ ಸಂಗಮಕ್ಕೆ ಝೈನುಲ್ ಉಲಮಾ ಮಾಣಿ ಉಸ್ತಾದರ ಅಧ್ಯಕ್ಷತೆಯಲ್ಲಿ ಸಮಸ್ತ ಉಪಾಧ್ಯಕ್ಷರಾದ ಸಯ್ಯಿದ್ ಕೆ.ಎಸ್.ಆಟಕೋಯ ತಂಙ್ಞಲ್ ಕುಂಬೋಲ್ ಉದ್ಘಾಟನೆ ನಿರ್ವಹಿಸುವರು.
ರಾತ್ರಿ 7.30 ಕ್ಕೆ ನಡೆಯುವ ಬುರ್ದಾ ಸ್ವಲಾತ್ ಮಜ್ಲಿಸಿನಲ್ಲಿ ಸಯ್ಯಿದ್ ಮುಖ್ತಾರ್ ತಂಙ್ಞಳ್ ಕುಂಬೋಲ್ ಪ್ರಾರಂಭ ಪ್ರಾರ್ಥನೆ ಮಾಡುವರು. ಹಾಫಿಳ್ ಸ್ವಾದಿಖಲಿ ಫಾಳಿಲಿ ಗೂಡಲ್ಲೂರ್ ಬುರ್ದಾ ಮಜ್ಲಿಸ್ ನೇತೃತ್ವ ವಹಿಸುವರು. ಸ್ವಲಾತ್ ಮಜ್ಲಿಸಿಗೆ ಸಯ್ಯಿದ್ ಅಬ್ದುರ್ರಹ್ಮಾನ್ ಶಹೀರ್ ಅಲ್-ಬುಖಾರಿ, ಸಯ್ಯಿದ್ ಅಹ್ಮದ್ ಜಲಾಲುದ್ದೀನ್ ಸಅದಿ ಅಲ್-ಬುಖಾರಿ ನೇತೃತ್ವ ನೀಡುವರು.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.