(www.vknews.in) : ಬೆಳ್ಳಾರೆಯ ಪ್ರವೀಣ್ ನೆಟ್ಟಾರ್ ಅವರ ಬರ್ಬರ ಹತ್ಯೆಯನ್ನು ಕೆಪಿಸಿಸಿ ಕಾರ್ಯದರ್ಶಿ ಟಿ ಎಂ ಶಾಹೀದ್ ತೆಕ್ಕಿಲ್ ತೀವ್ರವಾಗಿ ಖಂಡಿಸಿದ್ದಾರೆ. ಜಿಲ್ಲೆಯ ಜನ ಹಳೇಯ ಕಾಲದಲ್ಲಿ ಕೋಮು ಸೌಹಾರ್ದತೆಯಿಂದ ಇದ್ದ ದಿನಗಳನ್ನು ಮೆಲುಕು ಹಾಕಿ ಇಂದು ದಿನೇ ದಿನೇ ಪರಸ್ಪರ ದ್ವೇಷ ಅಸೂಯೆಗಳಿಂದ ಸಮುದಾಯಗಳು ದೂರವಾಗುತ್ತಿರುವ ಧಾರ್ಮಿಕ ಭಾವನೆಗಳಿಗೆ ಜನ ಬಲಿಯಾಗುತ್ತಿರುವುದು ಹಾಗೂ ಈ ರೀತಿಯಲ್ಲಿ ಹತ್ಯೆ ಆಗುತ್ತಿರುವುದು ಖೇದಕರ ಅತ್ಯಂತ ದುಖಃ ಹಾಗೂ ಕಳವಳಕಾರಿ ವಿಷಯವಾಗಿದೆ.
ಭಯ ಭೀತ ಸಮಾಜದ ಮುಂದೆ ನಮ್ಮ ದೇಶದ ಪರಿಸ್ಥಿತಿ ನೋಡಿ ಭಾರತ ಮಾತೆಯೇ ದುಖಿತವಾಗಿದೆ, ಭಾರತದ ಪ್ರತಿಯೊಬ್ಬ ವ್ಯಕ್ತಿಯೂ ದೇಶದ ಒಂದು ಆಸ್ತಿ, ಯಾರೇ ಈ ರೀತಿ ಕೃತ್ಯ ಮಾಡುವುದು ಖಂಡನೀಯ, ಕೋಮುವಾದಿಗಳು ಸ್ವಾರ್ಥಕ್ಕಾಗಿ ಈ ರೀತಿಯ ಕೃತ್ಯವನ್ನು ಎಸಗುತಿದ್ದು, ಸಮಾಜ ಒಗ್ಗಟ್ಟಾಗಿ ಇಂತಹ ಶಕ್ತಿಗಳ ವಿರುದ್ದ ಹೊರಡಿದಾಗ ಮಾತ್ರ ಸಮಾಜ ಘಾತಕರನ್ನು ಹದ್ದುಬಸ್ತಲ್ಲಿಡಲು ಸಾಧ್ಯ, ಮೊನ್ನೆ ಅಮಾಯಕ ಮಸೂದ್ ಎಂಬ ಯುವಕನ ಕೊಲೆ ನಮ್ಮ ಮುಂದೆ ಇದೆ.
ಇಂತಹ ಸಂದರ್ಭದಲ್ಲಿ ಸರಕಾರ, ಪೊಲೀಸ್ ಇಲಾಖೆ ಮತ್ತು ಗುಪ್ತಚರ ಇಲಾಖೆ ಇದನ್ನು ಗಂಭೀರವಾಗಿ ಪರಿಗಣಿಸದೆ ಇರುವುದು ಖೇದಕರ. ಪ್ರವೀಣ್ ನೆಟ್ಟರ್ ಅವರ ಹತ್ಯೆ ಸಮಾಜಕ್ಕೆ ಕಳಂಕ, ಈ ರೀತಿ ಕೃತ್ಯ ಎಸಗಿದ ಆರೋಪಿಗಳನ್ನು ಹಾಗೂ ಅದರ ಹಿಂದೆ ಇರುವ ಶಕ್ತಿಗಳನ್ನು ಕಾನೂನಿನ ಮುಂದೆ ಕಠಿಣ ಶಿಕ್ಷೆಗೆ ಒಳಪಡಿಸಲು ಟಿ ಎಂ ಶಾಹೀದ್ ತೆಕ್ಕಿಲ್ ಸರಕಾರಕ್ಕೆ ಆಗ್ರಹಿಸಿದ್ದಾರೆ.
ಬೆಳ್ಳಾರೆಯಲ್ಲಿ ನಡೆದ ಎರಡು ಕೊಲೆಯ ಬಗ್ಗೆ ಸರಕಾರ ಗಂಭೀರವಾಗಿ ಪರಿಗಣಿಸಿ ಸಿ ಬಿ ಐ ತನಿಖೆಗೆ ಶಿಫಾರಸ್ಸು ಮಾಡಲು ಕೆಪಿಸಿಸಿ ಕಾರ್ಯದರ್ಶಿ ಟಿ ಎಂ ಶಾಹೀದ್ ತೆಕ್ಕಿಲ್ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರನ್ನು ಒತ್ತಾಯಿಸಿದ್ದಾರೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.