(ವಿಶ್ವ ಕನ್ನಡಿಗ ನ್ಯೂಸ್) : ಮಸೂದ್ ಎಂಬ ಅಮಾಯಕ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ ಹತ್ಯೆ ನಡೆಸಿದ ಬಳಿಕ ಪ್ರವೀಣ್ ನೆಟ್ಟಾರು ಎಂಬ ಅಮಾಯಕನನ್ನು ನಿರ್ದಯವಾಗಿ ಕೊಲ್ಲಲಾಯಿತು. ಇದೀಗ ಯಾವುದೇ ಸಾಮಾಜಿಕ ಸಂಘಟನೆ ಗಳಲ್ಲಿ ಗುರುತಿಸಿಕೊಂಡಿರದ ಅಮಾಯಕ ಯುವಕ ಫಾಝಿಲ್ ನನ್ನು ದುಷ್ಕರ್ಮಿಗಳು ವಿನಾ ಕಾರಣ ಹತ್ಯೆ ಮಾಡಿದ್ದಾರೆ.
ಇಲ್ಲಿನ ಸರಕಾರ, ಇಲಾಖೆ, ಜಿಲ್ಲಾಡಳಿತ ಸಂಪೂರ್ಣ ವಿಫಲವಾಗಿರುವ ಈ ಸನ್ನಿವೇಶದಲ್ಲಿ ನಾಗರಿಕರು ಮೊತ್ತ ಮೊದಲು ಜಾಗರೂಕರಾಗಬೇಕು. ರಾಜಕೀಯ, ಸಂಘಟನೆ ಗಳ ಮೇಲಾಟದಿಂದ ನಡೆಯುವ ಈ ಕ್ರೂರ ಹತ್ಯೆ ಇನ್ನಾದರೂ ಕೊನೆಯಾಗಬೇಕು. ನಾಗರಿಕರು ಹಿಂದೂ ಮುಸ್ಲಿಂ ಕ್ರೈಸ್ತ ಎಂಬ ಬೇಧಭಾವವಿಲ್ಲದೆ ನಾಡಿನ ಸಾಮರಸ್ಯ ಕ್ಕಾಗಿ ಪರಸ್ಪರ ಕೈಜೋಡಿಸಬೇಕು. ಯಾರೂ ಕೂಡ ಪ್ರಚೋದನೆ ಗಳಿಗೆ ಒಳಗಾಗದೆ ಶಾಂತಿ ಕಾಪಾಡಲು ಪಣ ತೊಡಬೇಕು.
ಹೆಚ್.ಇಸ್ಮಾಯಿಲ್ ಶಾಫಿ ಬಬ್ಬುಕಟ್ಟೆ ಅಧ್ಯಕ್ಷರು, ಕರ್ನಾಟಕ ರಾಜ್ಯ ಟಿಪ್ಪು ಸುಲ್ತಾನ್ ಅಭಿಮಾನಿಗಳ ಮಹಾವೇದಿಕೆ, ದ.ಕ ಜಿಲ್ಲೆ
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.