ಅಮಾಯಕರ ಜೀವಕ್ಕೆ ಬೆಲೆ ಏನೆಂದು ಜನತೆಯು ಚುನಾವಣೆ ಮೂಲಕ ಉತ್ತರಿಸಬೇಕಾಗಿದೆ..
(ವಿಶ್ವ ಕನ್ನಡಿಗ ನ್ಯೂಸ್) : ಪುತ್ತೂರು ತಾಲೂಕಿನ ಬೆಲ್ಲಾರೆಯಲ್ಲಿ ನಡೆದಿರುವ ಎರಡು ಕೊಲೆಗಳನ್ನು ನಡೆಸಿದವರು ರಾಜಕೀಯ ಲಾಭಕ್ಕೋಸ್ಕರ ಎಂದು ನಾವು ಈ ಸಮಯದಲ್ಲಿ ತಿಳಿಯಬೇಕಾಗಿದೆ. ಕೋಮು ಸಂಘರ್ಷ ಎಂದು ಜನರು ಮೇಲ್ನೋಟಕ್ಕೆ ಭಾವಿಸಿದರೂ ಇದು ನಿಜವಾಗಿಯೂ ರಾಜಕೀಯ ಸಂಘರ್ಷದ ಅತಿ ಕ್ರೂರ ನಡೆ ಎಂದು ನಾವು ತಿಳಿಯಬೇಕು. ಇದನ್ನು ಕೇವಲ ಪ್ರತಿಭಟನೆಯ ಮೂಲಕ ಹತ್ತಿಕ್ಕಲು ಸಾಧ್ಯವಿಲ್ಲ. ಕೋಮುವಾದವನ್ನು ಪ್ರತಿಯೊಬ್ಬ ನಾಗರಿಕನೂ ತನ್ನ ಹ್ರದಯದಿಂದ ಕಿತ್ತು ಹಾಕಿ ಶಾಂತಿಯಿಂದ ಬದುಕುವ ಮುಖಾಂತರ ಅಲಿಸಿ ಹಾಕಬಹುದು.
ರಾಜಕೀಯ ನಾಯಕರಿಗೆ ತೀರಿ ಹೋದವರ ಕುಟುಂಬದವರ ಸದ್ಯದ ಪರಿಸ್ಥಿತಿಗಿಂತ ಹೆಚ್ಷಾಗಿ ಮತಗಳಿಸುವ ಬಗ್ಗೆ ಹೆಚ್ಚು ಆಸಕ್ತಿಯಿರುವುದು ಎದ್ದು ಕಾಣುತ್ತಿರುವುದೆಂದರೆ ಅದು ಅವರ ಹ್ರದಯದಲ್ಲಿ ಮಾನವೀಯತೆ ಸತ್ತಿರುವುದಕ್ಕೆ ದುರಂತ ಸಾಕ್ಷಿ. ಇನ್ನಾದರೂ ದಿನಗೂಳಿ ನೌಕರರಾಗಿ ಕೆಳಸಮಾಡುವವರೂ , ಮಧ್ಯಮ ವರ್ಗದವರೂ , ಸಾಮನ್ಯ ಕಾರ್ಯಕರ್ತರೂ ಈ ಬಗ್ಗೆ ಎಚ್ಚೆತ್ತು ಕೊಂಡು ಹಿಂದಿನ ಬಾಗಿಲಿನಿಂದ ಛೂ ಬಿಡುವ ನಾಯಕರ ವಿರುಧ್ದವೇ ತಿರುಗಿ ಬೀಳಬೇಕಾಗಿದೆ. ಇಲ್ಲವಾದರೆ ಮುಂದೆ ಅವರ ರಾಜಕೀಯ ಗುಲಾಮಗಿರಿಗೆ ಬಕ್ರಾಗಳಂತೆ ದುರಂತ ಕಾಣುವುದು ತಪ್ಪಿದ್ದಲ್ಲ. ಈ ಎರಡು ಕೊಲೆಗಳ ಕುಟುಂಬದವರ ಕಣ್ಣೀರಿಗೆ ಬೆಲೆ ಕಟ್ಟುವವರಾರು??
ನಮ್ಮ ದ.ಕ. ಜಿಲ್ಲೆಯಲ್ಲಿ ನಡೆಯುವಂತಹ ಇಂತಹ ದುರ್ಘಟನೆಗಳನ್ನು ಪೋಲಿಸ್ ಇಲಾಖೆ ಇನ್ನಾದರೂ ರಾಜಕೀಯ ಮುಕ್ತವಾಗಿ, ಹಾಗೂ ಪ್ರಾಮಾಣಿಕವಗಿ ಹಿಮ್ಮೆಟ್ಟಿಸಲು ತಯಾರಾಗಬೇಕಾಗಿದೆ. ಶಾಂತಿ, ಸೌಹಾರ್ದತೆಯಿಂದ ಬದುಕಲು ಪ್ರತಿಯೊಬ್ಬರೂ ಕೈಜೋಡಿಸಿ, ನಾಡನ್ನು ಪ್ರಗತಿಯತ್ತ ಕೊಂಡೊಯ್ಯಲು ಶ್ರಮಿಸಬೇಕಾಗಿದೆ.
ಡಾ.ಸುಮತಿ ಹೆಗ್ಡೆ ಜೆಡಿಎಸ್, ಮಂಗಳೂರು ದಕ್ಷಿಣ
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.