(www.vknews.in) : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸತತವಾಗಿ ನಡೆಯುತ್ತಿರುವ ಅಮಾಯಕ ಯವಕರ ಹತ್ಯೆಯನ್ನು ವಿಷಯವಾಗಿ ತೆಗೆದುಕೊಂಡು ಪ್ರವಾದಿಯವರು ಐದು ಹೊತ್ತಿನ ನಮಾಝಿನ ನಂತರ ಹೇಳಲು ಸುನ್ನತಾಗಿಸಿದ ವಚನವನ್ನು ವಿವರಿಸಿದರು. ಅಲ್ಲಾಹುಮ್ಮ ವ ಅಂತಸ್ಸಲಾಂ, ವ ಮಿಂಕಸ್ಸಲಾಂ. ಅರ್ಥ ಸರ್ವಶಕ್ತನಾದ ಅಲ್ಲಾಹುವೇ ನಮಗೆ ಶಾಂತಿ ಮತ್ತು ಸಮಾಧಾನವನ್ನು ದಯಪಾಲಿಸು. ಅಂದರೆ ಇಸ್ಲಾಂ ಎಂದಿಗೂ ಹಿಂಸೆಯನ್ನು ಪ್ರಚೋದಿಸುವುದಿಲ್ಲ. ಸಂಸ್ಕೃತದಲ್ಲಿರುವ ಇನ್ನೊಂದು ವಚನವನ್ನು ಉಲ್ಲೇಖಿಸಿದ ಉಸ್ತಾದರು “ಲೋಕೋ ಸಮಸ್ತ ಸುಖೀನೋ ಭವಂತೋ”ಎಂಬುವುದು ಒಂದು ಧರ್ಮಕ್ಕೆ ಮಾತ್ರ ಸೀಮಿತವಾಗಿ ಹೇಳಿದ ವಚನವಲ್ಲ ಬದಲಾಗಿ ಈ ಜಗತ್ತಿನಲ್ಲಿ ಪ್ರತಿಯೊಬ್ಬರು ಸಂತೋಷದಲ್ಲಿರಬೇಕು ಎಂಬುವುದೇ ಈ ವಾಕ್ಯದ ಧ್ಯೇಯವಾಗಿದ್ದು ಯಾವುದೇ ಧರ್ಮವೂ ಕೊಲೆ, ಹಿಂಸೆ, ಅನ್ಯಾಯವನ್ನು ಸಹಿಸುವುದಿಲ್ಲವೆಂಬುವುದನ್ನು ಸ್ಪಷ್ಟಪಡಿಸಿದರು.
ನಮ್ಮ ನಾಡಿನಲ್ಲಿ ಹಿಂಸಾತ್ಮಕ ಕೃತ್ಯಗಳು ನಡೆಯಲು ರಾಜಕಾರಣಿಗಳು, ಸಂಘಟನೆಗಳ ನಾಯಕರ ಉದ್ರೇಕಕಾರಿ ಭಾಷಣಗಳು ಕಾರಣವಾಗಿದ್ದು ಅವುಗಳಿಗೆ ಸರಕಾರ ಕಡಿವಾಣ ಹಾಕಲು ಕರಡು ರೂಪಿಸಬೇಕಾದ ಅಗತ್ಯದ ಬಗ್ಗೆ ಸರಕಾರವನ್ನು ಎಚ್ಚರಿಸಿದರು.
ನಮ್ಮ ರಾಜ್ಯದ ಮುಖ್ಯಮಂತ್ರಿಯವರ ಬಗ್ಗೆ ನಮಗೆ ಅಪಾರವಾದ ಗೌರವವಿದೆ, ಅಭಿಮಾನವಿದೆ. ತಮ್ಮವರನ್ನು ಕಳೆದುಕೊಂಡ ಕುಟುಂಬದರನ್ನು ಸಾಂತ್ವಾನಿಸುವಾಗ ಒಂದು ವಿಭಾಗದ ಮನೆಗೆ ಭೇಟಿಕೊಟ್ಟು ಪರಿಹಾರವನ್ನು ಸಿಮೀತಗೊಳಿಸಿದ ಮುಖ್ಯಮಂತ್ರಿಗಳ ಧೋರಣೆ ಸರಿಯಲ್ಲ, ಅವರು ಇಡೀ ರಾಜ್ಯದ ಆರು ಕೋಟಿ ಜನರಿಗೆ ಮುಖ್ಯಮಂತ್ರಿಯಾಗಿದ್ದು ಇನ್ನೊಂದು ವಿಭಾಗದ ಕುಟುಂಬಕ್ಕೆ ಪರಿಹಾರ ನೀಡದಿದ್ದರೂ ಮಾನವೀಯತೆಯ ನೆಲೆಯಲ್ಲಿ ಕನಿಷ್ಠ ಸಮಾಧಾನಪಡಿಸುವ ಕೆಲಸವನ್ನಾದರೂ ಮಾಡುತ್ತಿದ್ದರೆ ಆ ಕುಟುಂಬದ ದುಃಖ, ನೋವು, ಸಂಕಟವನ್ನು ಸ್ಪಲ್ಪ ಮಟ್ಟಿಗೆ ಮರೆಮಾಚಬಹುದಿತ್ತು ಎಂದರು.
ಇಂತಹ ಸೂಕ್ಷ್ಮ ವಿಚಾರದಲ್ಲಿ ಜಾತಿ, ಮತ, ಭೇದಕ್ಕೆ ಸೀಮಿತಗೊಳಿಸಿ ತಾರತಮ್ಯ ಮಾಡುವುದು ಸರಿಯಲ್ಲ ಸರ್ವರನ್ನು ಒಂದಾಗಿ ಕಾಣುವಂತೆ ಸರಕಾರವನ್ನು ಕೇಳಿಕೊಂಡರು. ಯಾವುದೇ ಹಿಂಸಾತ್ಮಕ ಘಟನೆಗಳು ನಡೆದಾಗ ತಾಳ್ಮೆ ಕಳೆದುಕೊಳ್ಳದೇ, ಉದ್ರೇಕಗೊಳ್ಳದೇ ನಾಡಿನ ಶಾಂತಿ ಮತ್ತು ಸಮಾಧಾನಕ್ಕಾಗಿ ಕೈಜೋಡಿಸುವಂತೆ ಎಲ್ಲರಿಗೂ ಕರೆಕೊಟ್ಟರು. ಅಗಲಿದವರ ಕುಟುಂಬಕ್ಕೆ ದುಃಖ ಸಹಿಸುವ ಶಕ್ತಿಯನ್ನು ಸರ್ವಶಕ್ತನಾದ ಅಲ್ಲಾಹು ನೀಡಲಿ ಎಂಬ ದುವಾದೊಂದಿಗೆ ತಮ್ಮ ಜುಮಾಅ ಭಾಷಣವನ್ನು ಮುಕ್ತಾಯಗೊಳಿಸಿದರು.
✍️ ಮುಸ್ತಫಾ ನೆಕ್ಕರೆ
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.