ಸಣ್ಣ ಪುಟ್ಟ ವಿಚಾರಕ್ಕೆ ಆತ್ಮಹತ್ಯೆ ಮಾಡುವವರಿಗೆ ಮೊನಪ್ಪ ಒಬ್ಬ ಹೀರೋ..
(ವಿಶ್ವ ಕನ್ನಡಿಗ ನ್ಯೂಸ್) : ಮೋನಪ್ಪ ಎಂಬ ಡಯಾಲಿಸೀಸ್ ರೋಗಿಯೊಬ್ಬರು ಬುದವಾರದಂದು ಪುತ್ತೂರು ತಾಲೂಕು ಬಂದ್ ಕರೆ ಇದ್ದ ಸಮಯದಲ್ಲಿಯೂ ವಾಹನ ಸಂಚಾರ ಇಲ್ಲದ ಸಮಯದಲ್ಲಿ ಪುತ್ತೂರು ಬಸ್ ನಿಲ್ಧಾಣದಲ್ಲಿ ಬಾಕಿಯಾದಾಗ ಅಗತ್ಯ ಸ್ಪಂದನೆಗೆ ಸಹಕರಿಸಿ ತನ್ನ ವಾಹನದಲ್ಲಿ ಮಾಡಾವಿನ ಮನೆಗೆ ಕರೆದುಕೊಂಡು ಹೋದ ಬಪ್ಪಳಿಗೆ ಅಬ್ದುಲ್ ಅಝೀಝ್ ಪರ್ಲಡ್ಕ ಕಾರ್ಯ ನಿಜಕ್ಕೂ ಶ್ಲಾಘನೀಯ.
ಮೋನಪ್ಪ ಮಾಡಾವು ಒರ್ವ ಕಳೆದ 9 ವರ್ಷದಿಂದ ಡಯಾಲಿಸೀಸ್ ಮಾಡಿಸುತ್ತಾ ಅತ್ತ ಬದುಕಲು ಸಾದ್ಯವಾಗದೆ, ಇತ್ತ ಸಾಯಲೂ ಸಾದ್ಯವಾಗದೆ, ತನ್ನ ಜೀವನವನ್ನು ಎದುರಿಸಿ ನಡೆಯುವೂದರೊಂದಿಗೆ, ತನ್ನನ್ನು ಹೆಂಡತಿ ಮಗಳು ಬಿಟ್ಟು ಹೋದರೂ ದೂರದ ಸಂಭಂದಿಕರ ಮನೆಯಲ್ಲಿ ದಿನದೂಡುತ್ತಾ ಕಾಲ ಕಳೆಯುತ್ತಿದ್ದಾರೆ.
ವಾರಕ್ಕೆ 3 ಸಲ, ಪ್ರತೀಸಲ 4 ಗ0ಟೆ ಡಯಾಲಿಸೀಸ್ ಮಾಡಿಸುವ ಕಷ್ಟ ಕಾಣುವಾಗ ಆತ್ಮಹತ್ಯೆಯ ನೆನಪು ಆಗುವುದಿಲ್ಲವೇ. ಜೀವನದಲ್ಲಿ ಜಿಗುಪ್ಸೆ ಆಗುವುದಿಲ್ಲವೇ ಎಂದು ಕೇಳಿದರೆ.. ಮೊನಪ್ಪ ಹೇಳುತ್ತಾರೆ, ಸತ್ತು ತೋರಿಸುವುದಕ್ಕಿಂತ ಕೊನೇ ಉಸಿರಿರುವ ವರೆಗೆ ಬದುಕಿ ತೋರಿಸಬೇಕು ಎನ್ನುತ್ತಾರೆ.
ಒಂದು ರಕ್ತ ಪರೀಕ್ಷೇಗೂ ಕಷ್ಟ ಪಡುತ್ತಿದ್ದ ಮೊನಪ್ಪ, ತಿನ್ನಲೂ ಹಣ ಇಲ್ಲದೆ ಕಷ್ಟ ಪಡುತ್ತಿದ್ದ ಮೋನಪ್ಪ, ಆದರೆ ಮೋನಪ್ಪ ಒಂದು ರೂಪಾಯಿ ವರಮಾನ ಇಲ್ಲದೆ, ಕುಟುಂಬಸ್ತರಿಲ್ಲದೆ, ಕಳೆದ 9 ವರ್ಷದಿಂದ ದಿನ ಕಳೆಯುತ್ತಿದ್ದಾರೆಂದರೆ ಆವರಲ್ಲಿರುವ ದೈರ್ಯ ಸ್ತೈರ್ಯ ಕಾರಣವಾಗಿದೆ.
ಪ್ರಸಕ್ತ ಸನ್ನಿವೇಶದಲ್ಲಿ ಸಣ್ಣ ಪುಟ್ಟ ವಿಚಾರಕ್ಕೆ ಆತ್ಮಹತ್ಯೆ ಮಾಡಿಕೊಳ್ಳುವವರಿಗೆ ಮೊನಪ್ಪ ಒಬ್ಬ ಹೀರೋ ಎನ್ನಬೇಕು. ಜೀವನದ ಪಾಠ ಕಲಿಯಲು ಇಂತಹಾ ಡಯಾಲಿಸೀಸ್ ರೋಗಿಗಳೇ ನಮಗೆ ಮಾರ್ಗದರ್ಶಕರು ಎನ್ನಬೇಕು..
ಒಬ್ಬ ಡಯಾಲಿಸೀಸ್ ರೋಗಿಯ ಮನೆ ಪ್ರವೇಶಿಸಿ ಅವರ ಪರಿಸ್ಥಿತಿ ಅರ್ಥ ಮಾಡಿ.. ಮುಂದೆ ಸಾದ್ಯವಾದರೆ ಇಂತಹಾ ಡಯಾಲಿಸೀಸ್ ರೋಗಿಗಳಿಗೆ ಸಹಕಾರಿಯಾಗೋಣ..
– ರಫ಼ೀಕ್ ದರ್ಬೆ ಆರೋಗ್ಯ ರಕ್ಷಾ ಸಮೀತಿ ಸದಸ್ಯ ಸರಕಾರಿ ಆಸ್ಪತ್ರೆ, ಪುತ್ತೂರು.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.