ದಾವಣಗೆರೆ (www.vknews.in) : ಕನ್ನಡ ಸಾಂಸ್ಕೃತಿಕ ಗತವೈಭವ ಹಾಗೂ ವಿವಿಧೋದ್ದೇಶ ಸಂಸ್ಥೆ (ರಿ) ರಾಜ್ಯ ಘಟಕ-ದಾವಣಗೆರೆ ವತಿಯಿಂದ ರಾಜ್ಯದ ವಿವಿಧ ಲೇಖಕರಿಂದ ಕಥಾಸಂಕಲನ ಮತ್ತು ಕಾದಂಬರಿ ಸಾಹಿತ್ಯ ಕೃತಿಗಳಿಗೆ ಪ್ರತಿಷ್ಠಿತ ವಾರ್ಷಿಕ ಸಾಧಕ ಪ್ರಶಸ್ತಿಗೆ ಅರ್ಜಿ ಅಹ್ವಾನ ಮಾಡಲಾಗಿದ್ದು, ಪ್ರತಿ ಪ್ರಕಾರದಲ್ಲಿ ವಿಮರ್ಶಕರು ಆಯ್ಕೆ ಮಾಡಿದ ಎರಡು ಕೃತಿಗೆ ಪ್ರಶಸ್ತಿ ನೀಡಿ ಗೌರವಿಸಲಾಗುವುದು.
ಆಸಕ್ತರು೨೦೨೦-೨೦೨೧ನೆಯ ಸಾಲಿನಲ್ಲಿ ಪ್ರಕಟವಾಗಿರುವ ಕಥಾಸಂಕಲನ & ಕಾದಂಬರಿಯ ಎರಡು ಪ್ರತಿಗಳ (ಪುಸ್ತಕ) ಜೊತೆ ತಮ್ಮ ಪರಿಚಯ ಪತ್ರದೊಂದಿಗೆ ಆಗಸ್ಟ್ ೨೦ರೊಳಗೆ ಅಧ್ಯಕ್ಷರು ಕನ್ನಡ ಸಾಂಸ್ಕೃತಿಕ ಗತವೈಭವ ಹಾಗೂ ವಿವಿಧೋದ್ದೇಶ ಸಂಸ್ಥೆ (ರಿ) ನವಿಲೇಹಾಳ್, ಚನ್ನಗಿರಿ ತಾಲ್ಲೂಕ್, ದಾವಣಗೆರೆ ಜಿಲ್ಲೆ – ೫೭೭೫೪೪, ಸಂಚಾರಿ : ೯೭೪೩೯೩೦೧೭೮ ಈ ವಿಳಾಸಕ್ಕೆ ಕಳುಹಿಸುವಂತೆ ಸಂಸ್ಥೆಯ ಅಧ್ಯಕ್ಷರಾದ ಡಾ. ಷಕೀಬ್ ಎಸ್ ಕಣದ್ಮನೆ ನವಿಲೇಹಾಳ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ನಂಬರ್ ಗೆ ಸಂಪರ್ಕಿಸಬಹುದು. 97439 30178, 9535104785, 9164827122, 9741270125.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.