ಚಳ್ಳಕೆರೆ (www.vknews.in) : ಗಣೇಶ ಚತುರ್ಥಿಗೆ ಇನ್ನೂ 14 ದಿನ ಬಾಕಿ ಇರುವಾಗಲೇ ಆಂದ್ರಪ್ರದೇಶದಿAದ ನಿಷೇಧದ ನಡುವೆಯೂ ಬೃಹತ್ ಪಿಒಪಿ ಗಣೇಶವಮೂರ್ತಿಗಳು ಸದ್ದಿಲ್ಲದೆ ಮಾರುಕಟ್ಟೆಗೆ ಎಂಟ್ರಿಕೊಟ್ಟಿವೆ. ಚಳ್ಳಕೆರೆ ನಗರದ ನೆಹರು ವೃತ್ತದ ಮಳಿಗೆಯೊಂದರಲ್ಲಿ ಗುಂತ್ತಕಲ್ಲು ನಿಂದ ಬೃಹತ್ ಗಣೇಶ ಮೂರ್ತಿಗಳು ಮಾರಾಟಕ್ಕೆ ಬಂದಿದ್ದು, ಇನ್ನು ಬೆಂಗಳೂರು ರಸ್ತೆ ಸೇರಿದಂತೆ ವಿವಿಧ ಕಡೆಗಳಲ್ಲಿ ನಿಷೇಧದ ನಡುವೆಯೂ ಗೌರಿ ಪ್ರತಿಷ್ಠಾಪನೆ ಆ.೩೦, ಗಣೇಶ ಪ್ರತಿಷ್ಠಾಪನೆ ಆ. ೩೧ ರಂದು ಪ್ರತಿಷ್ಠಾಪನೆಗೆ ಇನ್ನು ೧೪ ದಿನಗಳ ಮುಂದಿತವಾಗಿಯೇ ಪಿಒಪಿ ಗಣೇಶ ಮೂರ್ತಿಗಳನ್ನು ಬೇರೆ ಕಡೆಯಿಂದ ತರಿಸಿರುವುದು ಕಂಡು ಬಂದಿದೆ.
ಸುಮಾರು ವರ್ಷಗಳಿಂದ ವಂಶ ಪಾರಂಪರ್ಯವಾಗಿ ಮಣ್ಣಿನಲ್ಲಿ ಮಾಡಿಕೊಂಡು ಬರುತಿದ್ದ ಅನೇಕ ಕುಂಬಾರಿಕೆಯ ಕಲಾವಿದರೂ ಈ ಬಾರಿ ಬೇಸರ ವ್ಯಕ್ತ ಪಡಿಸುತ್ತಿದ್ದಾರೆ. ನಿಷೇಧದ ನಡುವೆ ಪ್ಲಾಸ್ಟರ್ ಆಫ್ ಪ್ಯಾರೀಸ್ನಲ್ಲಿ ತಯಾರಿಸುತ್ತಿರುವ ಮೂರ್ತಿಗಳ ಆರ್ಭಟ ಎಗ್ಗಿಲ್ಲದೆ ಮಾರುಕಟ್ಟೆಗೆ ಬಂದಿರುವುದು ಕಂಡು ಬಂದಿದೆ.
ವಿಗ್ರಹ ಮಾರಾಟಗಾರ ಬಡಗಿ ಬಸವರಾಜ್ ಮಾತನಾಡಿ ಗ್ರಾಹಕರಿಂದ ಮುಂಚಿತವಾಗಿಯೇ ಮುಂಗಡವಾಗಿ ಬೇಡಿಕೆ ಬಂದಿರುವು ಪ್ರಯುಕ್ತ ಗುಂತಕಲ್ಲು ನಿಂದ ವಿಗ್ರಹಗಳನ್ನು ತರಿಸಲಾಗಿದೆ ೪ ರಿಂದ ೨೧ ಸಾವಿರದ ರೂಗಳವರೆಗೆ ವಿಗ್ರಹಗಳಬೆಲೆ ಇದೆ ಈಗಾಗಲೆ ೧೫ ಸಾವಿರ ರೂಹಾಗೂ ೧೨ ಸಾವಿರ ರೂ ಬೆಲೆಯ ಎರಡು ಗಣೇಶ ಮೂರ್ತಿಗಳಿಗೆ ಹಣ ನೀಡಿ ಹೋಗಿದ್ದಾರೆ ಭಕ್ತರು ಹಣ ನೀಡಿ ಬುಕ್ಕಿಂಗ್ ಮಾಡಿ ಹೋಗುತ್ತಿದ್ದಾರೆ ಎಂದು ತಿಳಿಸಿದರು.
ಪೌರಾಯುಕ್ತ ಸಿ.ಚಂದ್ರಪ್ಪ ಮಾತನಾಡಿ ಪರಿಸರಕ್ಕೆ ಹಾನಿಯಾಗುವ ಪಿಒಪಿ ಗಣೇಶ ಮೂರ್ತಿಗಳಿಗೆ ಮಾರುಕಟ್ಟೆಯಲ್ಲಿ ಮಾರಾಟಮಾಡಲು ಅವಕಾಶವಿಲ್ಲ ಒಂದು ವೇಳೆ ಮಾರಾಟ ಮಾಡಿದರೆ ದಂಢ ವಿಧಿಸಲಾಗುವುದು ಪಿಒಪಿ ಗಣೇಶ ಮೂರ್ತಿಗಳನ್ನು ವಶಕ್ಕೆಪಡೆಯಲಗುವುದು ಮಣ್ಣಿನಿಂದ ಮಾಡಿದ ಗಣೇಶ ಮೂರ್ತಿಗಳಿಗೆ ಮಾತ್ರ ಅವಕಾಶ ಮಾಡಲಾಗುವುದು ಈಗಾಗಲೆ ಎಲ್ಲಿಂದ ಪಿಒಪಿ ಗಣೇಶ ಮೂರ್ತಿಗಳು ಬರುತ್ತವೆ ಎಂಬ ಮಾಹಿತಿ ಪಡೆಯಲಾಗಿದೆ ಅಂತವರ ಮೇಲೆ ನಗರಸಭೆವತಿಯಿಂದ ನಿಗವಹಿಸಲಾಗುವುದು ಎಂದು ತಿಳಿಸಿದರು.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.