ಮಾಡೂರು(ವಿಶ್ವಕನ್ನಡಿಗ ನ್ಯೂಸ್): ಮಾಡೂರು ಇಮಾದುದ್ದೀನ್ ಜುಮ್ಮಾ ಮಸೀದಿ ಮತ್ತು ಮದ್ರಸ ಇದರ ವತಿಯಿಂದ 75ನೇ ಸ್ವಾತಂತ್ರ್ಯ ಅಮೃತ ಮಹೋತ್ಸವ ಕಾರ್ಯಕ್ರಮ ಬಹಳ ವಿಜೃಂಭನೆಯಿಂದ ಖತೀಬ್ ಮುಸ್ತಫಾ ಕಮಾಲ್ ಹಿಶಾಮಿ ಉಸ್ತಾದರ ಪ್ರಾರ್ಥನೆಯ ಮೂಲಕ ಅಬ್ದುಲ್ ರಹ್ಮಾನ್ ಅರಬಿ ಯವರ ಅಧ್ಯಕ್ಷತೆಯಲ್ಲಿ ಧ್ವಜರೋಹಣ ಕಾರ್ಯಕ್ರಮ ನಡೆಯಿತು.
ಸ್ವಾತಂತ್ರ್ಯ ಪ್ರಯುಕ್ತ ನಡೆದ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಣೆ ನಡೆಯಿತು. ಪ್ರಸ್ತುತ ಕಾರ್ಯಕ್ರಮದಲ್ಲಿ ಪ್ರಧಾನ ಕಾರ್ಯದರ್ಶಿ ರಶೀದ್, ಕೋಶಾಧಿಕಾರಿ ಅಬ್ಬಾಸ್ ಪಿ.ಎಚ್. ಮದ್ರಸ ಮುಅಲ್ಲಿಂ ಇಸ್ಮಾಯಿಲ್ ಮದನಿ,ಶರೀಫ್, ಹಿರಿಯ ವ್ಯಕ್ತಿ ಅಬ್ದುಲ್ಲಾ ಹಾಜಿ ಬಾಪುಕುಂಞಿ, ಮಜೀದ್ ಹಸನ್ ಹಾಜಿ, ಅನ್ವರ್ ಮುಂತಾದ ಹಿರಿಯ ನಾಯಕರು, MYF ಕಾರ್ಯಕರ್ತರು ಮದ್ರಸಾದ ವಿದ್ಯಾರ್ಥಿ/ನಿ ಗಳು ಉಪಸ್ಥಿತರಿದ್ದರು.
ಪ್ರಸ್ತುತ ಕಾರ್ಯಕ್ರಮವನ್ನು ಸದರ್ ಮುಅಲ್ಲಿಂ ಮುಸ್ತಫಾ ಹಿಮಮಿ ಗೇರುಕಟ್ಟೆ ಸ್ವಾಗತಿಸಿ ವಂದಿಸಿದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.