(www.vknews.in) : ಉನ್ನತ ಧಾರ್ಮಿಕ ವಿದ್ಯಾಭ್ಯಾಸದ ದರ್ಸ್ ಹಾಗೂ ಅರೇಬಿಕ್ ಕಾಲೇಜುಗಳ ಪ್ರಾಚಾರ್ಯರ ಒಕ್ಕೂಟವಾದ ಬಹು ಸಯ್ಯಿದುಲ್ ಉಲಮಾ ಅಧ್ಯಕ್ಷ ರಾದ ಜಂ -ಇಯ್ಯತುಲ್ ಮುದರ್ರಿಸೀನ್ ಕೇಂದ್ರ ಸಮಿತಿಯ ಕೋಶಾಧಿಕಾರಿಯಾಗಿ ಆಯ್ಕೆಯಾದ ಜಿಲ್ಲೆಯ ಖ್ಯಾತ ವಿದ್ವಾಂಸರೂ, ಉಳ್ಳಾಲ ಸಯ್ಯಿದ್ ಮದನಿ ಅರಬಿಕ್ ಕಾಲೇಜಿನ ಪ್ರಾಂಶುಪಾಲರೂ ಆದ ಬಹು ಉಸ್ಮಾನುಲ್ ಫೈಝಿ ಉಸ್ತಾದರಿಗೆ ಮಾಡನ್ನೂರಿನಲ್ಲಿ ಸನ್ಮಾನ ಸಮಾರಂಭ ನಡೆಯಿತು.
ಮಾಡನ್ನೂರಿನಲ್ಲಿ ಹುಟ್ಟಿ ಬೆಳೆದು ಪ್ರಾಥಮಿಕ ವಿದ್ಯಾಭ್ಯಾಸ ಹಾಗೂ ಉನ್ನತ ವಿದ್ಯಾಭ್ಯಾಸದ ಮೊದಲ ಹಂತವನ್ನು ಮಾಡನ್ನೂರು ಮಸೀದಿಯ ಅಂದಿನ ಕಾಲದ ಪ್ರತಿಷ್ಠಿತ ವಿದ್ವಾಂಸ ಸಾದಾತುಗಳಿಂದ ಪ್ರಾರಂಭಿಸಿ, ನಂತರ ಖ್ಯಾತ ಉಲಮಾರ ಶಿಷ್ಯತ್ವ ಸ್ವೀಕರಿಸಿ, ಜಾಮಿಆಃ ನೂರಿಯಾದಿಂದ ಪದವಿಗಳಿಸಿ, ಕರ್ಮ ರಂಗಕ್ಕೆ ಧುಮುಕಿ ಈ ಹಂತಕ್ಕೆ ಬೆಳೆದುದನ್ನು ತುಂಬು ಹೃದಯದಿಂದ ಕೊಂಡಾಡಿ ಉಸ್ತಾದರಿಗೆ ಹುಟ್ಟೂರ ಸನ್ಮಾನ ನೀಡಲಾಯಿತು.
ಮಸೀದಿ ಖತೀಬರಾದ ಸಿರಾಜುದ್ದೀನ್ ಫೈಝಿ, ನೂರುಲ್ ಹುದಾ ಅಕಾಡೆಮಿಯ ಉಪ ಪ್ರಾಂಶುಪಾಲರಾದ ಬುರ್ಹಾನ್ ತಂಙಳ್, ನೂರುಲ್ ಹುದಾ ಇಸ್ಲಾಮಿಕ್ ಅಕಾಡೆಮಿಯ ಅಧ್ಯಕ್ಷ ರಾದ ಬುಶ್ರಾ ಅಬ್ದುಲ್ ಅಝೀಝ್, ಜಮಾಅತ್ ಅಧ್ಯಕ್ಷರಾದ ನೆಕ್ಕರೆ ಇಸ್ಮಾಯಿಲ್ ಹಾಜಿ, ಉಪಾಧ್ಯಕ್ಷ ರಾದ ಹಸೈನಾರ್ ವಿಶ್ರಾಂತ ಎ.ಎಸ್.ಐ., ಅಕಾಡೆಮಿ ವ್ಯವಸ್ಥಾಪಕರಾದ ಖಲೀಲುರ್ರಹ್ಮಾನ್ ಅರ್ಶದಿ, ಶಂಸುಲ್ ಉಲಮಾ ಕಲ್ಚರಲ್ ಸೆಂಟರ್ ಅಧ್ಯಕ್ಷರಾದ ಬಿ.ಎಂ.ಅಬ್ದುಲ್ಲ, ಖುವ್ವತುಲ್ ಇಸ್ಲಾಂ ಯಂಗ್ಮೆನ್ಸ್ ನ ಹಿರಾ ಶಾಫಿ, ದಫ್ ಸಮಿತಿಯ ಮೂಸಾ ಎನ್.ಪಿ, ಮಸೀದಿ ಕಾರ್ಯದರ್ಶಿ ಹಸೈನಾರ್ ಎಂ.ಡಿ, ಕೋಶಾಧಿಕಾರಿ ಎಂ.ಡಿ.ಮೊಯ್ದು, ಅಬ್ದುಲ್ ಖಾದರ್ ಮುಸ್ಲಿಯಾರ್, ಎಸ್ಕೆಎಸ್ಎಸ್ ಎಫ್ ಕಾರ್ಯದರ್ಶಿ ಯೂಸುಫ್ ಎಜೆ, ಅಬೂಬಕರ್ ಮುಸ್ಲಿಯಾರ್, ಇಬ್ರಾಹೀಂ ಸಅದಿ ಹಾಗೂ ಜಮಾಅತ್ ಸಮಿತಿ ಪದಾಧಿಕಾರಿಗಳು ಮತ್ತು ಜಮಾಅತ್ ಬಾಂಧವರು, ಅಕಾಡೆಮಿ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.