(www.vknews.in) ಬಂಟ್ವಾಳ ತಾಲೂಕಿನ ಅಮ್ಮುಂಜೆ ಗ್ರಾಮದ ಕಮ್ಮಾಜೆ ಯಿಂದ ಮೂಡೈಕೊಡಿ, ಅಮ್ಮುಂಜೆ ಬೆಂಜನಪದವು ಗೆ ಹೋಗುವ ರಸ್ತೆ ದುರಸ್ಥಿ ಕಾಣದೆ ಕಳೆದ ಹಲವು ವರ್ಷ ಗಳೇ ಆಯಿತು.ಗ್ರಾಮಸ್ಥರ ಸಮಸ್ಯೆ ಯನ್ನು ಕೇಳುವವರು ಇಲ್ಲ ದಂತೆ ಆಗಿದೆ. ಇಲ್ಲಿ ವಿದ್ಯಾರ್ಥಿಗಳ ಹಾಗೂ ಸಾರ್ವಜನಿಕರ ನಿತ್ಯ ಪ್ರಾಯಾಣಿಸಲು ಪಾಡುವ ಕಷ್ಟ ಹೇಳ ತೀರದು. ಇನ್ನೂ ಚುನಾವಣೆ ಬರುವಾಗ ಮಾತ್ರ ಪ್ರತ್ಯಕ್ಷವಾಗುವ ಜನಪ್ರತಿನಿಧಿಗಳು ಈಗ ಗಾಢ ನಿದ್ರೆಯಲ್ಲಿದ್ದಾರೆ. ರೋಗಿಗಳನ್ನು ತುರ್ತು ಆಸ್ಪತ್ರೆಗೆ ಕೊಂಡೊಯ್ಯಲು ವಾಹನ ಸವಾರರು ಪರದಾಡುವಂತಾಗಿದೆ. ಸಂಪೂರ್ಣ ಹೊಂಡ ಮಯವಾಗಿದ್ದು ರಸ್ತೆಗಳು ಕಾಣದಂತಾಗಿದೆ. ಮೊದಲೇ ಇದು ಗ್ರಾಮೀಣ ಹಾಗೂ ರಸ್ತೆಯ ಇಕ್ಕೆಲಗಳಲ್ಲೂ ಮರಗಳು, ತಿರುವು-ಮುರುವು ರಸ್ತೆ ತುಂಬಾ ಅಪಾಯಕಾರಿ ಪ್ರಯಾಣ. ಒಟ್ಟಿನಲ್ಲಿ ಅನಾಹುತ ಸಂಭವಿಸುವ ಮುನ್ನಸಂಬಂಧಪಟ್ಟವರುಇದರತ್ತ ಗಮನಿಸಿ ಸೂಕ್ತ ಕ್ರಮ ಕೈಗೊಳ್ಳಬೇಕಾಗಿದೆ.ಇನ್ನೂ ಮುಂದಿನ ದಿನಗಳಲ್ಲಿ ಈ ರಸ್ತೆ ದುರಸ್ಥಿ ನಡೆಸದೆ, ಮೂಲಭೂತ ಸೌಕರ್ಯ ಒದಗಿಸದಿದ್ದರೆ ಗ್ರಾಮಸ್ಥರು ಪಂಚಾಯತ್ ಕಚೇರಿಗೆ ಮುತ್ತಿಗೆ ಹಾಕುವ ಸಂಭವವಿದೆ. ತಕ್ಷಣ ಇದರತ್ತ ಗಮನಹರಿಸಿ ಗ್ರಾಮದ ಅಭಿವೃದ್ಧಿಯತ್ತ ಗಮನ ಹರಿಸಬೇಕಾಗಿದೆ.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.