(www.vknews.in). ವೃತ್ತಿ ಬದುಕಿನಲ್ಲಿ ಒಂದೇ ಒಂದು ತರಗತಿ ಗೈರು ಆಗದೆ ನಿವೃತ್ತರಾದ, ವೃತ್ತಿ ಬದುಕಿನಲ್ಲಿ ಸರಿ ಸುಮಾರು 34 ವರ್ಷ ಗಳ ಕಾಲ ಸೇವೆಯಲ್ಲಿ ಯಾವತ್ತೂ ಪಿ ಎಲ್, ಸಿ ಎಲ್ ತೆಗೆದುಕೊಳ್ಳದ ಒಂದೇ ಒಂದು ತರಗತಿ ಮಿಸ್ ಮಾಡದ ವ್ಯಕ್ತಿ, ತನ್ನ ತಂದೆ ತೀರಿಕೊಂಡಾಗಲೂ ಅಂತಿಮ ಸಂಸ್ಕಾರ ಮುಗಿಸಿ ಕಾಲೇಜಿಗೆ ಹಾಜರಾದ ಪ್ರಾಧ್ಯಾಪಕ, ದೇಶದ ಎಲ್ಲೆಡೆ ದೊಡ್ಡ ಪ್ರಮಾಣದ ಶಿಷ್ಯ ಸಮೂಹವನ್ನು ಹೊಂದಿರುವ ಮಂಗಳೂರಿನ ಪ್ರತಿಷ್ಠಿತ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾನೂನು ಕಾಲೇಜು ಪ್ರಾಧ್ಯಾಪಕರಾಗಿ ವಿಶೇಷ ಸೇವೆ ಸಲ್ಲಿಸುತ್ತಿರುವ, ದೇಶದ ಎಲ್ಲೆಡೆ ದೊಡ್ಡ ಪ್ರಮಾಣದ ಶಿಷ್ಯ ಸಮೂಹವನ್ನು ಹೊಂದಿರುವ ಮಂಗಳೂರಿನ ಪ್ರತಿಷ್ಠಿತ ಇವರ ಶಿಷ್ಯರು ಸುಪ್ರೀಂಕೋರ್ಟ್, ಹೈಕೋರ್ಟ್ ಗಳಲ್ಲಿ ಖ್ಯಾತ ನ್ಯಾಯವಾದಿ ಗಳಾಗಿ ಸೇವೆ ಸಲ್ಲಿಸುತ್ತಿದ್ದಾರೆ ಹಾಗೂ ಇವರ ಶಿಷ್ಯರು ಶಾಸಕರು, ಸಂಸದರು ಸಚಿವರು ಜನಪ್ರತಿನಿಧಿಗಳು ಇದ್ದಾರೆ.ತನ್ನ ಜೀವನವನ್ನೇ ವಿದ್ಯಾರ್ಥಿಗಳಿಗೋಸ್ಕರ ಮುಡಿಪಾಗಿಟ್ಟಿರುವ ಪ್ರೊಫೆಸರ್ ಉದಯ ಕುಮಾರ್ರವರನ್ನು ಶಿಕ್ಷಕರ ದಿನಾಚರಣೆಯ ಅಂಗವಾಗಿ ಲೆಕ್ಸ್ ಜ್ಯೂರಿಸ್ ಲಾ ಚೇಂಬರ್ ವತಿಯಿಂದ ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ವಕೀಲರಾದ ಒಮರ್ ಫಾರೂಕ್ ಮುಲ್ಕಿ, ಆಸಿಫ್ ಬೈಕಾಡಿ, ಅಬು ಹಾರಿಶ್ ಪಜೀರು, ಉಮರ್ ಫಾರೂಕ್ ಕಾವೂರು, ಮಹಮ್ಮದ್ ಅಸ್ಗರ್ ಮುಡಿಪು, ಇಝಾಜ್ ಅಹಮ್ಮದ್ ಉಳ್ಳಾಲ, ಉಪಸ್ಥಿತರಿದ್ದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.