(www.vknews.in) ಮಾನವೀಯ ಮೌಲ್ಯದ ಕರಾವಳಿಯ ಕಣ್ಮಣಿಯಾದ ಡಾ.ಸುಮತಿ ಎಸ್ ಹೆಗ್ಡೆಯ ಸಮಾಜ ಸೇವೆ ಎಲ್ಲರಿಗೂ ಮಾದರಿ.ಕೊರೋನಾ ಸಾಂಕ್ರಾಮಿಕ ಕಾಲದಲ್ಲೂ ಸಾಕಷ್ಟು ಸಮಾಜ ಸೇವೆಯನ್ನು ಮುಂದುವರಿಸಿ ಮಾನವೀಯತೆ ಮೆರೆದವರು.ಧರ್ಮ ಜಾತಿ ಎಂಬ ಬೇಧವಿಲ್ಲದೆ ಎಲ್ಲರೊಂದಿಗೆ ಬೆರೆತು ಸಮಾಜ ಸೇವೆಯನ್ನು ಮೈಗೂಡಿಸಿಕೊಂಡು ಬಾಳಿ ಬದುಕಿದವರು.ಈಗ ಅವರ ಖ್ಯಾತಿಯನ್ನು ಸಹಿಸದ ದುಷ್ಟ ಶಕ್ತಿಯು ರಾಜಕೀಯ ಬೆಂಬಲದೊಂದಿಗೆ ಹಾಡು ಹಗಲೇ ಅವರ ಕಛೇರಿಗೆ ಬಂದು ಕೊಲೆ ಬೆದರಿಕೆ ಹಾಕಿರುವುದು ಅತ್ಯಂತ ನೀಚ ಕ್ರತ್ಯವಾಗಿದೆ. ರಾಜಕೀಯ ವಲಯದಲ್ಲಿ ಇತ್ತೀಚೆಗೆ ಸಂಚಲನ ಮೂಡಿಸಿ ಸರ್ವರ ಪ್ರೀತಿಯನ್ನು ಗಳಿಸಿಕೊಂಡ ಸುಮತಿಯವರನ್ನು ಚುನಾವಣೆಯಲ್ಲಿ ಎದುರಿಸಲಾಗದ ಹೇಡಿಗಳ ಈ ರೀತಿಯ ಬೆದರಿಕೆಯನ್ನು ಸರಕಾರವು ಗಂಭೀರವಾಗಿ ಪರಿಗಣಿಸಿ ತನಿಖೆಯನ್ನು ನಡೆಸಬೇಕಾಗಿದೆ. ಮಹಿಳೆ ಎಂಬ ಕನಿಷ್ಠ ಮಾನವೀಯತೆ ಇಲ್ಲದ ಈ ಸಮಾಜ ಘಾತುಕ ಘಟನೆಯನ್ನು ನಝೀರ್ ಅಹ್ಮದ್ ಸಾಮಣಿಗೆ
(ಜಿಲ್ಲಾಧ್ಯಕ್ಷರು,ಜೆಡಿಎಸ್ ಸೇವಾದಳ ದಕ್ಷಿಣ ಕನ್ನಡ ಜಿಲ್ಲೆ)ಖಂಡಿಸಿದ್ದಾರೆ
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.