ದೋಹಾ (ವಿಶ್ವ ಕನ್ನಡಿಗ ನ್ಯೂಸ್) : ಕತಾರ್ನಲ್ಲಿ ನಾಲ್ಕು ವರ್ಷದ ಭಾರತೀಯ ಬಾಲಕಿ ಶಾಲಾ ಬಸ್ನೊಳಗೆ ದಾರುಣ ಅಂತ್ಯ ಕಂಡಿದ್ದಾಳೆ. ಕೇರಳದ ಕೊಟ್ಟಾಯಂನ ಅಭಿಲಾಷ್ ಚಾಕೊ ಅವರ ಪುತ್ರಿ ಮಿನ್ಸಾ ಮರಿಯಮ್ ಜೇಕಬ್ ನಿಧನರಾದರು. ಶಾಲೆಗೆ ಹೊರಟಿದ್ದ ಮಗು ಬಸ್ಸಿನೊಳಗೆ ನಿದ್ದೆಗೆ ಜಾರಿದ್ದು, ಚಾಲಕನಿಗೆ ಅರಿವಿಲ್ಲದೇ ಡೋರ್ ಲಾಕ್ ಮಾಡಿದ್ದರಿಂದ ಮಗು ಸಾವನ್ನಪ್ಪಿದೆ.
ಘಟನೆ ಭಾನುವಾರ ನಡೆದಿದೆ. ದೋಹಾ ಅಲ್ ವಕ್ರಾದಲ್ಲಿ ಸ್ಪ್ರಿಂಗ್ ಫೀಲ್ಡ್ ಕಿಂಡರ್ ಗಾರ್ಟನ್ ಕೆಜಿ 1 ರ ವಿದ್ಯಾರ್ಥಿಯಾಗಿದ್ದ ಮಿನ್ಸಾ ಮರಿಯಮ್ ಜೇಕಬ್ ಅವರ ನಾಲ್ಕನೇ ಹುಟ್ಟುಹಬ್ಬವೂ ಭಾನುವಾರವಾಗಿತ್ತು. ಮಗು ಬೆಳಗ್ಗೆ ಶಾಲೆಗೆ ಹೋಗಿ ಬಸ್ಸಿನೊಳಗೆ ಮಲಗಿತ್ತು. ಶಾಲೆ ತಲುಪಿದ ನಂತರ ಇತರ ಮಕ್ಕಳು ಬಸ್ನಿಂದ ಇಳಿದಾಗ ಮಲಗಿದ್ದ ಮಿನ್ಸಾ ಮರಿಯಮ್ ಜೇಕಬ್ ಮಾತ್ರ ಹೊರಬರಲಿಲ್ಲ. ಚಾಲಕ ಮಗು ಮಲಗಿದ್ದನ್ನು ಗಮನಿಸದೆ ಹಾಗೂ ಬಸ್ ಪರಿಶೀಲಿಸದೆ ವಾಹನದ ಬಾಗಿಲನ್ನು ಲಾಕ್ ಮಾಡಿ ತೆರಳಿದ್ದಾನೆ. ಬಸ್ಸು ತೆರೆದ ಜಾಗದಲ್ಲಿ ನಿಂತಿತ್ತು. ಮಗು ಬಸ್ಸಿನೊಳಗೆ ಇರುವುದನ್ನು ಯಾರೂ ಗಮನಿಸಲಿಲ್ಲ.
ಗಂಟೆಗಳ ನಂತರ, 11.30 ರ ಸುಮಾರಿಗೆ, ಬಸ್ ಸಿಬ್ಬಂದಿ ಕರ್ತವ್ಯಕ್ಕೆ ಹಿಂತಿರುಗಿದಾಗ, ಬಸ್ಸಿನೊಳಗೆ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಬಾಲಕಿಯನ್ನು ಕಂಡರು. ಕೂಡಲೇ ಆಕೆಯನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ ಪ್ರಾಣ ಉಳಿಸಲಾಗಲಿಲ್ಲ. ಮಿನ್ಸಾ ಅವರ ತಂದೆ ಅಭಿಲಾಷ್ ಚಾಕೊ ಕತಾರ್ನಲ್ಲಿ ಡಿಸೈನಿಂಗ್ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದಾರೆ. ಮರಣೋತ್ತರ ಪ್ರಕ್ರಿಯೆ ಮುಗಿದ ಬಳಿಕ ಮೃತದೇಹವನ್ನು ಊರಿಗೆ ತರಲಾಗುವುದು ಎಂದು ಸಂಬಂಧಿಕರು ತಿಳಿಸಿದ್ದಾರೆ.
ಮಗುವಿನ ಸಾವಿನ ಬಗ್ಗೆ ಕುಟುಂಬಕ್ಕೆ ಸಂತಾಪ ಸೂಚಿಸಿರುವ ಕತಾರ್ ಶಿಕ್ಷಣ ಸಚಿವಾಲಯವು ಘಟನೆಯ ತನಿಖೆಯನ್ನು ಪ್ರಾರಂಭಿಸಿದೆ. ಅಧಿಕಾರಿಗಳ ಪ್ರಕಾರ, ಮಗುವಿನ ಸಾವಿಗೆ ಕಾರಣವಾಗುವ ನಿರ್ಲಕ್ಷ್ಯ ತೋರಿದವರ ವಿರುದ್ಧ ಸಂಬಂಧಿತ ಕಾನೂನುಗಳ ಪ್ರಕಾರ ಕಠಿಣ ಕ್ರಮ ಕೈಗೊಳ್ಳಲಾಗುವುದು. ಮಕ್ಕಳ ಸುರಕ್ಷತೆಗಾಗಿ ಅತ್ಯುನ್ನತ ಮಾನದಂಡಗಳನ್ನು ಜಾರಿಗೆ ತರಲಾಗುತ್ತಿದೆ ಎಂದು ಶಿಕ್ಷಣ ಸಚಿವಾಲಯ ಹೇಳಿದ್ದು, ಈ ನಿಟ್ಟಿನಲ್ಲಿ ಯಾವುದೇ ಲೋಪ ಸ್ವೀಕಾರಾರ್ಹವಲ್ಲ ಎಂದು ಸ್ಪಷ್ಟಪಡಿಸಿದೆ.
كما تؤكد حرصها على الالتزام بتطبيق معايير الأمن والسلامة لطلابنا بأعلى جودة، وعدم التهاون مع أي تقصير في هذا الصدد. وتتقدم بخالص المواساة لأسرة الطالبة الفقيدة. — وزارة التربية والتعليم والتعليم العالي (@Qatar_Edu) September 11, 2022
كما تؤكد حرصها على الالتزام بتطبيق معايير الأمن والسلامة لطلابنا بأعلى جودة، وعدم التهاون مع أي تقصير في هذا الصدد. وتتقدم بخالص المواساة لأسرة الطالبة الفقيدة.
— وزارة التربية والتعليم والتعليم العالي (@Qatar_Edu) September 11, 2022
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.